Big News

ಕೋಳಿ ಸಾಯಿಸಿ ಮೊಟ್ಟೆಗಳನ್ನು ನುಂಗಿದ್ದ ನಾಗರಹಾವು : ಸೆರೆ ಹಿಡಿಯಲು ಮುಂದಾದಂತೆ ಮೊಟ್ಟೆಗಳನ್ನು ಹೊರ ಕಕ್ಕಿದ ಹಾವು

Share

ಅಂಕೋಲಾ : ಕೋಡಗನ ಕೋಳಿ ನುಂಗಿತ್ತ ಎಂಬ ಜನಪದ ಹಾಡು ಇಂದಿಗೂ ಹಲವರ ಬಾಯಲ್ಲಿ ಜನಜನಿತವಾಗಿದೆ. ಆದರೆ ಇಲ್ಲೊಂದು ಅಪರೂಪದ ಘಟನೆ ಸಂಭವಿಸಿದ್ದು ಕಾವಿಗೆ ( ಮೊಟ್ಟೆ ಮರಿಮಾಡಲು ) ಕುಳಿತಿದ್ದ ಕೋಳಿಯನ್ನು ಸಾಯಿಸಿ, ಅದರ ಸುಮಾರು 5 ಮೊಟ್ಟೆಗಳನ್ನು ನಾಗರ ಹಾವು ನುಂಗಿತ್ತ! ಎನ್ನುವಂತಾಗಿದೆ. ತಾಲೂಕಿನ ಅವರ್ಸಾ – ಸಕಲಬೇಣ ನಿವಾಸಿ ರಾಜು ನಾಯ್ಕ ಎನ್ನುವವರ ಮನೆಯೊಳಗೆ ಕಾವಿಗೆ ಕುಳಿತಿದ್ದ ಕೋಳಿಯನ್ನು ಸಾಯಿಸಿ, ಬುಟ್ಟಿಯಲ್ಲಿದ್ದ ಮೊಟ್ಟೆಗಳನ್ನು ನುಂಗಿದ್ದ ನಾಗರ ಹಾವೊಂದು , ಅದನ್ನು ಜೀರ್ಣಿಸಿಕೊಳ್ಳಲೋ ಎಂಬಂತೆ ಕಟ್ಟಿಗೆ ರಾಶಿಯಲ್ಲಿ ಸೇರಿಕೊಂಡು ವಿರಮಿಸುತಿತ್ತು ಎನ್ನಲಾಗಿದ್ದು, ಅದನ್ನು ಕಂಡ ಮನೆಯವರು,ಮೂಡೆಕಟ್ಟಾ ನಿವಾಸಿ ಪ್ರಶಾಂತ ಕಳಸ ಎನ್ನುವವರಿಗೆ ಕರೆ ಮಾಡಿ ತಮ್ಮ ಆತಂಕ ವ್ಯಕ್ತಪಡಿಸಿದ್ದರು.

ಸ್ಥಳಕ್ಕೆ ಬಂದ ಪ್ರಶಾಂತ ಕಳಸ, ಅವರು ಆ ಮನೆಯ ಸದಸ್ಯರ ಮತ್ತು ಸ್ಥಳೀಯರ ಸಹಕಾರದಿಂದ ಕಟ್ಟಿಗೆ ರಾಶಿಯನ್ನು ಸ್ವಲ್ಪ ಪಕ್ಕಕ್ಕೆ ಸರಿಸಿ ಅಲ್ಲಿಯೇ ಅವಿತು ಕೊಂಡಿದ್ದ ನಾಗರ ಹಾವನ್ನು ಹಿಡಿಯಲು ಮುಂದಾಗಿದ್ದಾರೆ. ಅಂತೂ ಇಂತು ನಿಧಾನವಾಗಿ ಹಾವಿನ ಬಾಲ ಹಿಡಿದು,ಕಟ್ಟಿಗೆ ರಾಶಿಯಿಂದ ಹೊರ ತಂದು ಚೀಲಕ್ಕೆ ತುಂಬುವ ಯತ್ನ ಮಾಡಿದ್ದಾರೆ.ತಾನು ತಿಂದ ಆಹಾರದಿಂದ ತುಸು ಜಡವಾದಂತೆ ಕಟ್ಟಿಗೆ ರಾಶಿಯಲ್ಲಿದ್ದ ನಾಗರ ಹಾವು , ತನ್ನ ಸೆರೆ ಕಾರ್ಯಚರಣೆ ನಡೆಯುತ್ತಿರುವುದನ್ನು ತಿಳಿದು, ಅದರಿಂದ ಹೇಗಾದರೂ ತಪ್ಪಿಸಿಕೊಳ್ಳಬೇಕೆಂಬ ಭಾವನೆಯಿಂದ ತನ್ನ ಜಡತ್ವ ದೂರ ಮಾಡಿಕೊಳ್ಳಲೋ ಎಂಬಂತೆ,ನಿಧಾನವಾಗಿ ಬಾಯಿ ತೆರೆದಿದೆ.

ಅಕ್ಕ ಪಕ್ಕದವರು ಬೆರಗುಗಣ್ಣುಗಳಿಂದ ನೋಡುತ್ತಿರುವಾಗ ಹಾವು ತಾನು ನುಂಗಿದ್ದ ಸುಮಾರು 5 ಕೋಳಿ ಮೊಟ್ಟೆಗಳನ್ನು ಹೊರಕಕ್ಕಿದೆ.ಈ ಬಲು ಅಪರೂಪದ ದೃಶ್ಯವನ್ನು ಅಲ್ಲಿ ನೆರೆದವರು ತಮ್ಮ ಮೊಬೈಲ್ ಕೆಮರಾ ಕಣ್ಣುಗಳಲ್ಲಿ ಚಿತ್ರೀಕರಿಸಿದ್ದು,ಸಖತ್ ವೈರಲ್ ಆಗುವಂತಾಗಿದೆ.ಮೊಟ್ಟೆಗಳನ್ನು ಹೊರ ಕಕ್ಕಿದ ನಾಗರಹಾವಿನ ಜಡತ್ವ ದೂರವಾದಂತಾಗಿ ಚುರುಕಿನ ಚಲನೆಗೆ ಮುಂದಾಗಿದೆ. ಈ ವೇಳೆ ತನ್ನ ಬಾಲ ಉರಗ ಸಂರಕ್ಷನ ಕೈಯಲ್ಲಿ ಇರುವುದು ತಿಳಿಯುತ್ತಿದ್ದಂತೆ ಹೆಡೆ ಎತ್ತಿ ಬುಸ್ ಗುಡುತ್ತ ತನ್ನ ನೈಜ ಗುಣ ತೋರಿಸಲಾರಂಭಿಸಿದೆ. ಅದರ ಎದೆಗುಂದದ ಪ್ರಶಾಂತ್ ಕಳಸ, ಅದೇ ಹಾವನ್ನು ಸ್ಥಳೀಯರ ಸಹಕಾರದಲ್ಲಿ ಚೀಲದೊಳಗೆ ತುಂಬಲು ಯಶಸ್ವಿಯಾಗಿದ್ದಾರೆ.

ಆ ಮೂಲಕ ಅವರು,ಅರಣ್ಯ ಇಲಾಖೆಗೆ ಅದನ್ನು ಹಸ್ತಾಂತರಿಸಿ ಸುರಕ್ಷಿತ ಪ್ರದೇಶದಲ್ಲಿ ಬಿಟ್ಟು ಬರುವ ಮೂಲಕ ನಾಗರ ಹಾವಿನ ಸಂರಕ್ಷಣೆಯ ಜೊತೆ ಸ್ಥಳೀಯರ ಆತಂಕ ದೂರ ಮಾಡಿದ್ದಾರೆ. ಹೆಸ್ಕಾಂ ಸಿಬ್ಬಂದಿ ಆಗಿರುವ ಪ್ರಶಾಂತ ಕಳಸ ಅವರು ಉರಗ ಸಂರಕ್ಷಣೆ ಮೂಲಕವೂ ಆಗಾಗ ಗಮನ ಸೆಳೆಯುತ್ತಿದ್ದು ,ಯಾವುದೇ ಪ್ರತಿಫಲಾಕ್ಷೆ ಬಯಸದೇ ಸಾಮಾಜಿಕ ಸೇವೆ ಸಲ್ಲಿಸುತ್ತಿರುವುದಕ್ಕೆ ,ಸ್ಥಳೀಯರಿಂದ ಮೆಚ್ಚುಗೆ ಮಾತುಗಳು ಕೇಳಿಬಂದಿವೆ.ಇತ್ತೀಚಿನ ದಿನಗಳಲ್ಲಿ ತನ್ನ ಕಾರ್ಯವೈಖರಿಯಿಂದ ಪ್ರಶಾಂತ್ ಕಳಸ ಸಹ ಸುದ್ದಿಯಾಗುವಂತಾಗಿದ್ದು, ಸ್ಥಳೀಯ ಅರಣ್ಯ ಇಲಾಖೆ ಸಿಬ್ಬಂದಿಗಳು, ಹಾರವಾಡ, ಗಾಬಿತವಾಡ ಮತ್ತಿತರಡೆಯ ಆಯಾ ಭಾಗದ ಸ್ಥಳೀಯರ ಸಹಕಾರದಿಂದ ಈ ವರೆಗೆ ನಾಗರ ಹಾವು , ಕೇರೆ ಹಾವು , ಹೆಬ್ಬಾವು ಸೇರಿ ಸುಮಾರು 30 ಕ್ಕೂ ಹೆಚ್ಚು ಹಾವುಗಳನ್ನು ಹಿಡಿದು ಸಂರಕ್ಷಿಸಿದ್ದು, ಕಳಸ ಅವರ ಸೇವೆಗೆ ಪ್ರೋತ್ಸಾಹಿಸಲು ಸಂಬಂಧಿತ ಇಲಾಖೆ ಹಾಗೂ ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸುವಂತಾಗಬೇಕಿದೆ.ನಿಮಗೂ ಈ ವಿಷಯ ಇಷ್ಟವಾದಲ್ಲಿ ಹೆಸ್ಕಾಂ ಸಿಬ್ಬಂದಿಯ ವಿಶೇಷ ಸಾಮಾಜಿಕ ಸೇವೆಗೆ ಮತ್ತು ಉರಗ ಸಂರಕ್ಷಣೆಯ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಮತ್ತು,ಸಾಧ್ಯವಾದಷ್ಟು ಹೆಚ್ಚಿನ ಜನರಿಗೆ ಶೇರ್ ಮಾಡಿ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Share

📢 Stay Updated!

Join our official WhatsApp group to get instant news updates, alerts, and exclusive stories – right on your phone.

💬 Join our WhatsApp Group

Don't Miss

ಸಮುದ್ರ ದಡಕ್ಕೆ ಬರುತ್ತಿರುವೆ ರಾಶಿ ರಾಶಿ ಜೀವಂತ ಮೀನುಗಳು: ಮುಗಿಬಿದ್ದು ಚೀಲಗಳಲ್ಲಿ ತುಂಬಿಸಿಕೊಳ್ಳುತ್ತಿರುವ ಸ್ಥಳೀಯರು

ಇಲ್ಲಿನ ಸಮುದ್ರ ತೀರದಲ್ಲಿ ಬಲೆ ಬೀಸಬೇಕೆಂದಿಲ್ಲ, ಆದರೂ ನೀವು ರಾಶಿ ರಾಶಿ ಜೀವಂತ ಮೀನುಗಳನ್ನು ಬಾಚಿ ತರಬಹುದು,ಇಂತಹದೊoದು ಪ್ರಕೃತಿ ವಿಸ್ಮಯ ನಡೆದದ್ದು ದೂರದಲ್ಲೆಲ್ಲೋ ಅಲ್ಲ, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ...

ಅಂಕೋಲಾ ಉಪನೋಂದಣಾಧಿಕಾರಿಗಳ ಕಚೇರಿಗೆ ಸರ್ಚ್ ವಾರೆಂಟ್ ಮೇಲೆ ಬಂದ ಲೋಕಾಯುಕ್ತರ ತಂಡ : ಯಾಕೆ ನೋಡಿ?

ಅಂಕೋಲಾ‌ : ಇಲ್ಲಿನ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ದಸ್ತಾವೇಜು ನೋಂದಣಿ ಮುಂತಾದ ಕೆಲಸಗಳಲ್ಲಿ ಅನಗತ್ಯ ವಿಳಂಬ ಮತ್ತು ಏಜೆಂಟರ ಹಾವಳಿ ಹೆಚ್ಚಾಗಿರುವ ಕುರಿತು ಸಾರ್ವಜನಿಕರಿಂದ ಆರೋಪಗಳು ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಗುರುವಾರ ಲೋಕಾಯುಕ್ತ ಅಧಿಕಾರಿಗಳು...

🌐 📺 Visit Our Media Partner Site

ಉತ್ತರಕನ್ನಡ ಸುದ್ದಿ Update ಪಡೆಯಿರಿ

🔗 Go to Vismaya TV
Related Articles

ವರ್ಷಾಂತ್ಯಕ್ಕೆ 12 ಲಕ್ಷ ಲಾಭ ಗಳಿಸಿದ ಸೀತಾರಾಮ ಸಹಕಾರಿ ಸಂಘ

ಭಟ್ಕಳ: ಆರ್ಥಿಕ ವರ್ಷಾಂತ್ಯಕ್ಕೆ ಸಹಕಾರಿಯು 12 ಲಕ್ಷ ಲಾಭ ಗಳಿಸಿದೆ ಎಂದು ಶ್ರೀ ಸೀತಾರಾಮ ಸೌಹಾರ್ಧ...

ಬೈಕಿಗೆ ಡಿಕ್ಕಿ ಹೊಡದ ಲಾರಿ: ಸ್ಥಳದಲ್ಲಿಯೇ ಬೈಕ್ ಸವಾರ ದುರ್ಮರಣ: ಹಿಟ್ & ರನ್ ಕೇಸ್ ದಾಖಲು

ಯಲ್ಲಾಪುರ: ಬೈಕಿಗೆ ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು ಹಿಂಬದಿ ಸವಾರ ತೀವ್ರವಾಗಿ...

ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಿಟ್ಟಿದ್ದ ಬೈಕ್ ಕಳ್ಳತನ : ಆರೋಪಿ ಬಂಧನ

ಅಂಕೋಲಾ: ಪಟ್ಟಣದಲ್ಲಿ ನಿಲ್ಲಿಸಿಟ್ಟ ಮೋಟಾರ್ ಬೈಕ್ ಕಳ್ಳತನ ಮಾಡಿದ್ದ ಆರೋಪಿತನನ್ನು ಅಂಕೋಲಾ ಪೊಲೀಸರು ವಾಹನ ಸಮೇತ...

ರಾಷ್ಟ್ರೀಯ ಮೆಗಾ ಲೋಕ ಅದಾಲತ್ ನಲ್ಲಿ ಒಟ್ಟೂ 167 ಪ್ರಕರಣಗಳು ರಾಜೀ ಸಂಧಾನದಲ್ಲಿ ಇತ್ಯರ್ಥ

ಅಂಕೋಲಾ: ತಾಲೂಕಿನ ನ್ಯಾಯಾಲಯಗಳ ಸಂಕೀರ್ಣದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮ ಸೆ 13 ರ ಶನಿವಾರ...

ಮೂರೂರಿನ ಪ್ರಗತಿ ವಿದ್ಯಾಲಯದಲ್ಲಿ ಶಿಕ್ಷಕ ದಿನಾಚರಣೆ: ಶಿಕ್ಷಕ ರಾಷ್ಟ್ರ ರಕ್ಷಕ ಕಾರ್ಯಕ್ರಮ

ಕುಮಟಾ: ತಾಯಿ ಮಗುವಿಗೆ ಜನ್ಮ ನೀಡುತ್ತಾಳೆ, ಶಿಕ್ಷಕ ಆ ಮಗುವಿಗೆ ಜ್ಞಾನ ನೀಡಿ ಕಣ್ತೆರೆಯಿಸಿ ಒಳ್ಳೆಯ...

ಭೂಮಿತಾಯಿಯ ಹೊಸ್ತಿನ ಹಬ್ಬ : ಕೃಷಿ ಮತ್ತು ಶ್ರಮ ಪ್ರಧಾನ ಸಂಸ್ಕೃತಿಯ ಪ್ರತೀಕ

ಅಂಕೋಲಾ: ಭೂಮ್ತಾಯಿ ಎಂದೇ ಪ್ರಸಿದ್ಧಿ ಪಡೆದಿರುವ ತಾಲೂಕಿನ ಹಾಗೂ ಇತರಡೆಯ ಅಸಂಖ್ಯ ಭಕ್ತರ ಪಾಲಿನ ಶಕ್ತಿ...

ಅಕ್ರಮ ಗೋಸಾಗಾಟ: 7 ಲಕ್ಷ ಮೌಲ್ಯದ ಜಾನುವಾರು ವಶಕ್ಕೆ

ಭಟ್ಕಳ: ತಾಲೂಕಿನಲ್ಲಿ ಅಕ್ರಮ ಗೋಸಾಗಾಟ ಪ್ರಕರಣ ಪದೇ ಪದೇ ಸದ್ದು ಮಾಡುತ್ತಿದ್ದು, ಬೆಳಗಿನ ಜಾವ ಗ್ರಾಮೀಣ...

ಕುಮಟಾ ಪೊಲೀಸ್ ಗಣೇಶೋತ್ಸವ ಸಂಭ್ರಮ: ನೂರಾರು ಭಕ್ತರಿಂದ ಪ್ರಸಾದ ಸ್ವೀಕಾರ

ಕುಮಟಾ: ಪಟ್ಟಣದ ಎಲ್ಲಡೆ ಸಂಭ್ರಮದಿoದ ಗಣೇಶ ಚತುರ್ಥಿಯನ್ನು ಆಚರಿಸಲಾಗಿದ್ದು ಕುಮಟಾ ಪೊಲೀಸ್ ಠಾಣೆಯ ಆರಾಧ್ಯ ದೇವರು...