Big News

ಕೋಳಿ ಸಾಯಿಸಿ ಮೊಟ್ಟೆಗಳನ್ನು ನುಂಗಿದ್ದ ನಾಗರಹಾವು : ಸೆರೆ ಹಿಡಿಯಲು ಮುಂದಾದಂತೆ ಮೊಟ್ಟೆಗಳನ್ನು ಹೊರ ಕಕ್ಕಿದ ಹಾವು

Share

ಅಂಕೋಲಾ : ಕೋಡಗನ ಕೋಳಿ ನುಂಗಿತ್ತ ಎಂಬ ಜನಪದ ಹಾಡು ಇಂದಿಗೂ ಹಲವರ ಬಾಯಲ್ಲಿ ಜನಜನಿತವಾಗಿದೆ. ಆದರೆ ಇಲ್ಲೊಂದು ಅಪರೂಪದ ಘಟನೆ ಸಂಭವಿಸಿದ್ದು ಕಾವಿಗೆ ( ಮೊಟ್ಟೆ ಮರಿಮಾಡಲು ) ಕುಳಿತಿದ್ದ ಕೋಳಿಯನ್ನು ಸಾಯಿಸಿ, ಅದರ ಸುಮಾರು 5 ಮೊಟ್ಟೆಗಳನ್ನು ನಾಗರ ಹಾವು ನುಂಗಿತ್ತ! ಎನ್ನುವಂತಾಗಿದೆ. ತಾಲೂಕಿನ ಅವರ್ಸಾ – ಸಕಲಬೇಣ ನಿವಾಸಿ ರಾಜು ನಾಯ್ಕ ಎನ್ನುವವರ ಮನೆಯೊಳಗೆ ಕಾವಿಗೆ ಕುಳಿತಿದ್ದ ಕೋಳಿಯನ್ನು ಸಾಯಿಸಿ, ಬುಟ್ಟಿಯಲ್ಲಿದ್ದ ಮೊಟ್ಟೆಗಳನ್ನು ನುಂಗಿದ್ದ ನಾಗರ ಹಾವೊಂದು , ಅದನ್ನು ಜೀರ್ಣಿಸಿಕೊಳ್ಳಲೋ ಎಂಬಂತೆ ಕಟ್ಟಿಗೆ ರಾಶಿಯಲ್ಲಿ ಸೇರಿಕೊಂಡು ವಿರಮಿಸುತಿತ್ತು ಎನ್ನಲಾಗಿದ್ದು, ಅದನ್ನು ಕಂಡ ಮನೆಯವರು,ಮೂಡೆಕಟ್ಟಾ ನಿವಾಸಿ ಪ್ರಶಾಂತ ಕಳಸ ಎನ್ನುವವರಿಗೆ ಕರೆ ಮಾಡಿ ತಮ್ಮ ಆತಂಕ ವ್ಯಕ್ತಪಡಿಸಿದ್ದರು.

ಸ್ಥಳಕ್ಕೆ ಬಂದ ಪ್ರಶಾಂತ ಕಳಸ, ಅವರು ಆ ಮನೆಯ ಸದಸ್ಯರ ಮತ್ತು ಸ್ಥಳೀಯರ ಸಹಕಾರದಿಂದ ಕಟ್ಟಿಗೆ ರಾಶಿಯನ್ನು ಸ್ವಲ್ಪ ಪಕ್ಕಕ್ಕೆ ಸರಿಸಿ ಅಲ್ಲಿಯೇ ಅವಿತು ಕೊಂಡಿದ್ದ ನಾಗರ ಹಾವನ್ನು ಹಿಡಿಯಲು ಮುಂದಾಗಿದ್ದಾರೆ. ಅಂತೂ ಇಂತು ನಿಧಾನವಾಗಿ ಹಾವಿನ ಬಾಲ ಹಿಡಿದು,ಕಟ್ಟಿಗೆ ರಾಶಿಯಿಂದ ಹೊರ ತಂದು ಚೀಲಕ್ಕೆ ತುಂಬುವ ಯತ್ನ ಮಾಡಿದ್ದಾರೆ.ತಾನು ತಿಂದ ಆಹಾರದಿಂದ ತುಸು ಜಡವಾದಂತೆ ಕಟ್ಟಿಗೆ ರಾಶಿಯಲ್ಲಿದ್ದ ನಾಗರ ಹಾವು , ತನ್ನ ಸೆರೆ ಕಾರ್ಯಚರಣೆ ನಡೆಯುತ್ತಿರುವುದನ್ನು ತಿಳಿದು, ಅದರಿಂದ ಹೇಗಾದರೂ ತಪ್ಪಿಸಿಕೊಳ್ಳಬೇಕೆಂಬ ಭಾವನೆಯಿಂದ ತನ್ನ ಜಡತ್ವ ದೂರ ಮಾಡಿಕೊಳ್ಳಲೋ ಎಂಬಂತೆ,ನಿಧಾನವಾಗಿ ಬಾಯಿ ತೆರೆದಿದೆ.

ಅಕ್ಕ ಪಕ್ಕದವರು ಬೆರಗುಗಣ್ಣುಗಳಿಂದ ನೋಡುತ್ತಿರುವಾಗ ಹಾವು ತಾನು ನುಂಗಿದ್ದ ಸುಮಾರು 5 ಕೋಳಿ ಮೊಟ್ಟೆಗಳನ್ನು ಹೊರಕಕ್ಕಿದೆ.ಈ ಬಲು ಅಪರೂಪದ ದೃಶ್ಯವನ್ನು ಅಲ್ಲಿ ನೆರೆದವರು ತಮ್ಮ ಮೊಬೈಲ್ ಕೆಮರಾ ಕಣ್ಣುಗಳಲ್ಲಿ ಚಿತ್ರೀಕರಿಸಿದ್ದು,ಸಖತ್ ವೈರಲ್ ಆಗುವಂತಾಗಿದೆ.ಮೊಟ್ಟೆಗಳನ್ನು ಹೊರ ಕಕ್ಕಿದ ನಾಗರಹಾವಿನ ಜಡತ್ವ ದೂರವಾದಂತಾಗಿ ಚುರುಕಿನ ಚಲನೆಗೆ ಮುಂದಾಗಿದೆ. ಈ ವೇಳೆ ತನ್ನ ಬಾಲ ಉರಗ ಸಂರಕ್ಷನ ಕೈಯಲ್ಲಿ ಇರುವುದು ತಿಳಿಯುತ್ತಿದ್ದಂತೆ ಹೆಡೆ ಎತ್ತಿ ಬುಸ್ ಗುಡುತ್ತ ತನ್ನ ನೈಜ ಗುಣ ತೋರಿಸಲಾರಂಭಿಸಿದೆ. ಅದರ ಎದೆಗುಂದದ ಪ್ರಶಾಂತ್ ಕಳಸ, ಅದೇ ಹಾವನ್ನು ಸ್ಥಳೀಯರ ಸಹಕಾರದಲ್ಲಿ ಚೀಲದೊಳಗೆ ತುಂಬಲು ಯಶಸ್ವಿಯಾಗಿದ್ದಾರೆ.

ಆ ಮೂಲಕ ಅವರು,ಅರಣ್ಯ ಇಲಾಖೆಗೆ ಅದನ್ನು ಹಸ್ತಾಂತರಿಸಿ ಸುರಕ್ಷಿತ ಪ್ರದೇಶದಲ್ಲಿ ಬಿಟ್ಟು ಬರುವ ಮೂಲಕ ನಾಗರ ಹಾವಿನ ಸಂರಕ್ಷಣೆಯ ಜೊತೆ ಸ್ಥಳೀಯರ ಆತಂಕ ದೂರ ಮಾಡಿದ್ದಾರೆ. ಹೆಸ್ಕಾಂ ಸಿಬ್ಬಂದಿ ಆಗಿರುವ ಪ್ರಶಾಂತ ಕಳಸ ಅವರು ಉರಗ ಸಂರಕ್ಷಣೆ ಮೂಲಕವೂ ಆಗಾಗ ಗಮನ ಸೆಳೆಯುತ್ತಿದ್ದು ,ಯಾವುದೇ ಪ್ರತಿಫಲಾಕ್ಷೆ ಬಯಸದೇ ಸಾಮಾಜಿಕ ಸೇವೆ ಸಲ್ಲಿಸುತ್ತಿರುವುದಕ್ಕೆ ,ಸ್ಥಳೀಯರಿಂದ ಮೆಚ್ಚುಗೆ ಮಾತುಗಳು ಕೇಳಿಬಂದಿವೆ.ಇತ್ತೀಚಿನ ದಿನಗಳಲ್ಲಿ ತನ್ನ ಕಾರ್ಯವೈಖರಿಯಿಂದ ಪ್ರಶಾಂತ್ ಕಳಸ ಸಹ ಸುದ್ದಿಯಾಗುವಂತಾಗಿದ್ದು, ಸ್ಥಳೀಯ ಅರಣ್ಯ ಇಲಾಖೆ ಸಿಬ್ಬಂದಿಗಳು, ಹಾರವಾಡ, ಗಾಬಿತವಾಡ ಮತ್ತಿತರಡೆಯ ಆಯಾ ಭಾಗದ ಸ್ಥಳೀಯರ ಸಹಕಾರದಿಂದ ಈ ವರೆಗೆ ನಾಗರ ಹಾವು , ಕೇರೆ ಹಾವು , ಹೆಬ್ಬಾವು ಸೇರಿ ಸುಮಾರು 30 ಕ್ಕೂ ಹೆಚ್ಚು ಹಾವುಗಳನ್ನು ಹಿಡಿದು ಸಂರಕ್ಷಿಸಿದ್ದು, ಕಳಸ ಅವರ ಸೇವೆಗೆ ಪ್ರೋತ್ಸಾಹಿಸಲು ಸಂಬಂಧಿತ ಇಲಾಖೆ ಹಾಗೂ ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸುವಂತಾಗಬೇಕಿದೆ.ನಿಮಗೂ ಈ ವಿಷಯ ಇಷ್ಟವಾದಲ್ಲಿ ಹೆಸ್ಕಾಂ ಸಿಬ್ಬಂದಿಯ ವಿಶೇಷ ಸಾಮಾಜಿಕ ಸೇವೆಗೆ ಮತ್ತು ಉರಗ ಸಂರಕ್ಷಣೆಯ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಮತ್ತು,ಸಾಧ್ಯವಾದಷ್ಟು ಹೆಚ್ಚಿನ ಜನರಿಗೆ ಶೇರ್ ಮಾಡಿ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Share

📢 Stay Updated!

Join our official WhatsApp group to get instant news updates, alerts, and exclusive stories – right on your phone.

💬 Join our WhatsApp Group

Don't Miss

ಗೋಕರ್ಣಕ್ಕೆ ಆಗಮಿಸಲಿದೆ ವರದಹಳ್ಳಿಯ ಶ್ರೀಧರ ಸ್ವಾಮಿಗಳ ಪಾದುಕೆ: ದರ್ಶನ ಮತ್ತು ಫಲಸಮರ್ಪಣೆಗೆ ಸುವರ್ಣಾವಕಾಶ

ಗೋಕರ್ಣ: ವರದಹಳ್ಳಿಯ ಸದ್ಗುರು ಶ್ರೀಧರ ಸ್ವಾಮಿಗಳ ಪಾದುಕೆ ಇದೇ ಏಪ್ರಿಲ್ 8ರ ಬುಧರವಾರ ಮತ್ತು 9ರ ಗುರುವಾರ, 10ರ ಶುಕ್ರವಾರ ಶ್ರೀಕ್ಷೇತ್ರ ಗೋಕರ್ಣಕ್ಕೆ ಆಗಮಿಸಲಿದೆ. ಏಪ್ರಿಲ್ 9 ರಂದು ರಥಬೀದಿಯಲ್ಲಿರುವ ರಾಮಚಂದ್ರ...

ಬಂಗಾರಮಕ್ಕಿಯಲ್ಲಿ ‘ಪ್ರಾಚೀನ ಆರೋಗ್ಯ ಪರಂಪರಾ ವೈದ್ಯ ಸಂಗಮ

ಹೊನ್ನಾವರ: ರಾಜ್ಯದ ಪ್ರತಿ ಗ್ರಾಮದಲ್ಲಿ ಔಷಧಿ ಗಿಡಗಳ ಪಾರ್ಕ್ ನಿರ್ಮಾಣ ಮಾಡಲಾಗುವುದು ಎಂದು ವಡ್ನಾಳ್ ಜಗದೀಶ್ ರವರು ಹೊನ್ನಾವರ ತಾಲೂಕಿನ ಬಂಗಾರಮಕ್ಕಿಯಲ್ಲಿ ‘ಪ್ರಾಚೀನ ಆರೋಗ್ಯ ಪರಂಪರಾ ವೈದ್ಯ ಸಂಗಮ’ ದಲ್ಲಿ ಹೇಳಿದರು....

🌐 📺 Visit Our Media Partner Site

ಉತ್ತರಕನ್ನಡ ಸುದ್ದಿ Update ಪಡೆಯಿರಿ

🔗 Go to Vismaya TV
Related Articles

ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಸಹಾಯಕ ಶಿಕ್ಷಕರು ಬೇಕಾಗಿದ್ದಾರೆ

ಕುಮಟಾ : ಅಂಕೋಲಾದ ಕೆನರಾ ವೆಲ್ಫೇರ್ ಟ್ರಸ್ಟ್ ನ ಕುಮಟಾ ಧಾರೇಶ್ವರದ ದಿನಕರ ಇಂಗ್ಲಿಷ್ ಮೀಡಿಯಂ...

ಅಲಂಕಾರ ಜ್ಯುವೆಲ್ಲರ್ಸ್ : ಅಕ್ಷಯ ತೃತೀಯ ವಿಶೇಷ ಆಫರ್

ಸುವರ್ಣ ಕ್ಷಣವನ್ನು ಇನ್ನಷ್ಟು ವಿಶೇಷವಾಗಿಸಿ : ಈ ಶುಭ ಅಕ್ಷಯ ತೃತೀಯದ ಪ್ರಯುಕ್ತ ಚಿನ್ನ ಮತ್ತು...

ಭಟ್ಕಳದಲ್ಲಿ 14 ಜಾನುವಾರಗಳ ರಕ್ಷಣೆ : ಇಬ್ಬರ ವಿರುದ್ಧ ಪ್ರಕರಣ ದಾಖಲು

ಭಟ್ಕಳ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಇಬ್ಬರ ವಿರುದ್ಧ ಭಟ್ಕಳ ಪಟ್ಟಣ ಪೊಲೀಸ್...

ಮಹಾಶಿವರಾತ್ರಿ ಪುಣ್ಯಕಾಲದಲ್ಲಿ ಕಣಕಣೇಶ್ವರ ದೇವರ ನೂತನ ಭವ್ಯ ದೇವಸ್ಥಾನ ಲೋಕಾರ್ಪಣೆ :ಶಿಖರ ಕಲಶ ಪ್ರತಿಷ್ಠೆ – ಅಷ್ಟಬಂಧ ಸಮೇತ ನೂತನ ಶಿವಲಿಂಗ ಪ್ರತಿಷ್ಠಾ ಮಹೋತ್ಸವ

ಅಂಕೋಲಾ: ಪಟ್ಟಣದ ಕಾರವಾರ ರಸ್ತೆಯಲ್ಲಿರುವ ಪುರಾತನ ಪ್ರಸಿದ್ಧ ಶ್ರೀ ಕಣಕಣೇಶ್ವರ ದೇವಾಲಯವು ಮಹಾಶಿವರಾತ್ರಿ ಪುಣ್ಯಸಂದರ್ಭದಲ್ಲಿ ನೂತನ...

ಬೆಂಕಿ ಅವಘಡದಲ್ಲಿ ಅಪಾರಹಾನಿ: ಆದರೆ, ಮಾರಿಕಾಂಬೆಯ ಫೋಟೋ ಮಾತ್ರ ಸೇಫ್

ಅಂಕೋಲಾ: ಪಟ್ಟಣ ವ್ಯಾಪ್ತಿಯ ಲಕ್ಷ್ಮೇಶ್ವರ–ಕುಂಬಾರಕೇರಿ ಪ್ರದೇಶದಲ್ಲಿರುವ ಶ್ರೀ ಮಹಾಲಸಾ ವೆಲ್ಡಿಂಗ್ ಶಾಪ್ನಲ್ಲಿ ಫೆಬ್ರವರಿ 9ರ ಸೋಮವಾರ...

ಅಂಕೋಲಾದಲ್ಲಿ ಕರಾಳ ದಿನಾಚರಣೆ ಮತ್ತು ಬಂದ್ ಗೆ ಕರೆ

ಅಂಕೋಲಾ: ಕೇಣಿ ವಾಣಿಜ್ಯ ಬಂದರು ಯೋಜನೆ ವಿರೋಧಿಸಿ ನಡೆಯುತ್ತಿರುವ ಹೋರಾಟಕ್ಕೆ ನವೆಂಬರ್ 15ರಂದು ಒಂದು ವರ್ಷವಾಗಲಿದ್ದು...

ಕಲಾಸಿರಿ ಪ್ರಶಸ್ತಿಯು ಬದುಕಿನ ಸಾರ್ಥಕತೆಯ ಜ್ಞಾನದ ಬೆಳಕು ಬೆಳಗಲು ಸಾಧ್ಯ:ಪಿ. ಆರ್. ನಾಯ್ಕ

ಭಟ್ಕಳ : ಒಂದು ಹಣತೆಯಿಂದ ಹಲವು ಹಣತೆಗಳು ಬೆಳಗುವಂತೆ, ಕಲಾಸಿರಿಯು ಬದುಕಿನ ಸಾರ್ಥಕತೆಯ ಜ್ಞಾನದ ಬೆಳಕು...