Important

ರಸ್ತೆಗಳಲ್ಲಿ ಹೊಂಡಗಳದ್ದೆ ದರ್ಬಾರ್ : ಸಾರ್ವಜನಿಕರಿಗೆ ಸಂಚಾರ ಮಾಡಲಾಗದ ದುಸ್ಥಿತಿ

Share

ಹೊನ್ನಾವರ: ತಾಲೂಕಿನ ಪಟ್ಟಣ ವ್ಯಾಪ್ತಿಯ ಕೆಲವು ರಸ್ತೆಗಳಲ್ಲಿ ಹೊಂಡ ಬಿದ್ದಿದ್ದು, ಸಾರ್ವಜನಿಕರು ಸಂಚಾರ ಮಾಡಲಾಗದ ಪರಿಸ್ಥಿತಿ ತಲುಪಿದ್ದು, ಚರಂಡಿಯಲ್ಲಿ ನೀರು ತುಂಬಿ ಕೊಳೆತು ನಾರುತ್ತಿದೆ. ಹೌದು..ಪಟ್ಟಣ ವ್ಯಾಪ್ತಿಯ ಕೆಲವೆಡೆ ಒಂದು ಸುತ್ತು ಹಾಕಿದರೆ ಹಲವು ಸಮಸ್ಯೆ ಕಣ್ಣಿಗೆ ಬೀಳುತ್ತದೆ. ಪಟ್ಟಣದ ಕೆ.ಎಚ್.ಬಿ ಕಾಲೋನಿ ರಸ್ತೆಯಲ್ಲಿ ಹಿಂದೆ ಹಾಕಿದ ಡಾಂಬರ್ ಹುಡುಕಿದರು ಸಿಗದಷ್ಟು ರಸ್ತೆ ಹಾಳಾಗಿದ್ದು, ಡಾಂಬರ್ ರಸ್ತೆಯೋ ಅಥವಾ ಮಣ್ಣಿನ ರಸ್ತೆಯೋ ಅನ್ನುವ ಅನುಮಾನ ಬರುತ್ತಿದೆ. ಈ ರಸ್ತೆಯಲ್ಲಿ ಅಲ್ಲಲ್ಲಿ ಮಣ್ಣು ಸುರಿಯಲಾಗಿದೆ. ಹೊಂಡಕ್ಕೆ ಕಲ್ಲು ಹಾಕಿ ಮುಚ್ಚಿದ್ದಾರೆ. ಕೆಲವೆಡೆ ದೊಡ್ಡ ಹೊಂಡ ಬಿದ್ದಿದೆ.

ಈ ಪ್ರದೇಶದಲ್ಲಿ ನೂರಾರು ಮನೆಗಳಿದ್ದು, ಹೆಚ್ಚಿನದಾಗಿ ನೌಕರರು, ನಿವೃತ್ತಿ ಹೊಂದಿದವರು, ಸುಶಿಕ್ಷಿತರೆ ಹೊಂದಿರುವ ಈ ಪ್ರದೇಶದ ಜನರು ನಿತ್ಯ ಸಂಚಾರಕ್ಕೆ ಸರ್ಕಸ್ ಮಾಡಬೇಕಿದೆ. ಮಳೆ ಬಂದರೆ ಕೇಸರು ನೀರಿನ ಅಭಿಷೇಕ ಅನಿವಾರ್ಯವಾಗಿದೆ. ಪ. ಪಂ. ಐದು ವರ್ಷ ಕಳೆಯುವಷ್ಟರಲ್ಲಿ ನಾಲ್ಕು ಅಧ್ಯಕ್ಷರನ್ನು ಕಂಡಿದೆ. ಅಧ್ಯಕ್ಷರ ಬದಲಾವಣೆಗೆ ವಹಿಸಿದಷ್ಟು ಆಸಕ್ತಿ, ಸ್ಥಳೀಯ ಸಮಸ್ಯೆ ಬಗೆಹರಿಸಲು ಮುಂದಾದರೆ ಓಡಾಡುವ ರಸ್ತೆಯಾದರು ಸರಿಯಾಗುತ್ತಿತ್ತು ಎನ್ನುವ ಮಾತು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

ಇನ್ನೂ ಪಟ್ಟಣ ವ್ಯಾಪ್ತಿಯಲ್ಲಿ ಬರುವ ಮೂತ್ರಖಾನೆಗೆ ಹೋಗಿದ್ದರೇ ಮೂಗು ಮುಚ್ಚಿಸುತ್ತಿದೆ. ಇನ್ನೂ ದುರ್ಗಾಕೇರಿಯಲ್ಲಿರುವ ಮೂತ್ರಖಾನೆಯ ಪಕ್ಕದಲ್ಲಿ ಕಸದ ರಾಶಿ ಪ. ಪಂ.ಕ್ಕೆ ಬೆರಳು ತೋರಿಸುತ್ತಿದೆ. ಇನ್ನೂ ಕಮಟೆಹಿತ್ತಲ, ಕರ್ಕಿಕೋಡಿ ಹೋಗುವ ರಸ್ತಿ, ಜಡ್ಡಿಕೇರಿ ಹೋಗುವ ರಸ್ತೆ, ರಾಮಮಂದಿರ ಹತ್ತಿರದಲ್ಲಿ, ಬಸ್ ನಿಲ್ದಾಣದ ಎದುರಿಗೆ, ಬಂದರ ರಸ್ತೆಯಲ್ಲಿ ಹೊಂಡದ್ದೆ ಕಾರುಬಾರು ಆಗಿದೆ. ಇದರ ಹೊರತಾಗಿ ಇನ್ನೂ ಕೆಲವು ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ.

ಕರ್ಕಿಕೊಡಿ ರುಕ್ಮಿಣಿ ದೇವಸ್ಥಾನ ಎದುರುಗಡೆ ರಸ್ತೆ ಸಂಪೂರ್ಣ ಹಾಳಾಗಿದ್ದು ಜನರಿಗೆ ತಿರುಗಾಡಲು ತುಂಬಾ ತೊಂದರೆ ಆಗುತ್ತಿದೆ. ಕೇವಲ 120 ಮೀಟರ್ ಕಾಂಕ್ರೀಟ್ ಸಿಮೆಂಟ್ ರಸ್ತೆ ನಿರ್ಮಾಣ ಆದರೆ ಅಲ್ಲಿಯ ಸಮಸ್ಯೆ ಬಗೆಹರಿಯಲಿದೆ. ಬೆಳಕು ಬಿಡುವಷ್ಟರಲ್ಲಿ ಪೌರ ಕಾರ್ಮಿಕರಿಂದ ಸ್ವಚ್ಛ ಮಾಡುವ ಕೆಲಸ ನಡೆಯುತ್ತದೆ. ನಂತರ ಕಸ ಸಾಗಾಣಿಕೆ ವಾಹನ ಬರುತ್ತದೆ. ಇಷ್ಟೆಲ್ಲ ಸೌಲಭ್ಯ ಇದ್ದರು, ದುರ್ಗಾಕೇರಿಯ ಮೂತ್ರಖಾನೆ ಸಮೀಪ ಸುತ್ತಮುತ್ತ ಪ್ಲಾಸ್ಟಿಕ್ ಕಸದ ರಾಶಿ ಬಿದ್ದಿದ್ದು, ಗಬ್ಬುನಾಥ ಎದ್ದಿದೆ. ಮನೆಯಲ್ಲಿ ಬಳಸಿದ ಅಡುಗೆ, ಮಕ್ಕಳು ಬಳಸಿದ ಪ್ಯಾಡ್ ಇನ್ನಿತರ ವಸ್ತುಗಳನ್ನು ಬಳಸಿ ಬಿಸಾಕಿದ್ದಾರೆ. ಇಲ್ಲಿರುವ ಮೂತ್ರಖಾನೆ ಜಿರ್ಣಾವಸ್ಥೆ ತಲುಪಿದ್ದು, ಅದರ ನೀರು ರಸ್ತೆಗೆ ಹರಿದು ಬರುವುದೊಂದು ಬಾಕಿ ಇದೆ. ಪಟ್ಟಣದಲ್ಲಿ ಮೂತ್ರಖಾನೆಯನ್ನು ಆಗಾಗ ಸ್ವಚ್ಛಗೊಳಿಸಿದರೂ, ಕಟ್ಟಡ, ಅಲ್ಲಿಯ ಪೈಪ್ ಜೋಡಣೆ ಎಲ್ಲವು ಹಾಳಾಗಿದೆ. ಸುತ್ತ ಮುತ್ತ ಕಾಲು ಇಡಲು ಆಗದಷ್ಟು ಗಬ್ಬುನಾಥ ಎದ್ದುಕಾಣುತ್ತಿದೆ.

ಇನ್ನೂ ಬಂದರು ರಸ್ತೆಯಿಂದ ಗ್ಯಾಸ್ ಆಫೀಸ್ ಹೋಗುವ ರಸ್ತೆ ಪಕ್ಕದ ಗಟಾರದಲ್ಲಿ ನೀರು ತುಂಬಿ ಗಬ್ಬುನಾರುತ್ತಿದೆ. ಚರಂಡಿಗೆ ಬರುವ ನೀರು ಮುಂದೆ ಸಾಗದೆ ತುಂಬಿಕೊಂಡಿದೆ. ಅದರಲ್ಲಿ ಒಂದಿಷ್ಟು ಕಸ ತುಂಬಿಕೊಂಡಿದ್ದು, ಗಬ್ಬೆದ್ದ ವಾಸನೆ ರೋಗ ಹರಡುವ ಭೀತಿ ಸಾಧ್ಯತೆಯಿದೆ.

ಒಟ್ಟಾರೆ ಪಟ್ಟಣದ ಸುತ್ತ ಒಂದಲ್ಲ ಒಂದು ಸಮಸ್ಯೆ ಎದ್ದು ಕಾಣುತ್ತಿದೆ. ಬಗೆಹರಿಸಬೇಕಾದವರು ಆಸಕ್ತಿ ತೋರುತ್ತಿಲ್ಲವಾ? ಅಥವಾ ಅನುದಾನ ಕೊರತೆ ಇದೆಯಾ ಗೊತ್ತಾಗುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಪಕ್ಕದ ಕ್ಷೇತ್ರದವರೆ ಆಗಿದ್ದರು ಸಂಬಂಧ ಪಟ್ಟವರು ಅವರನ್ನು ಭೇಟಿಮಾಡಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿದಂತಿಲ್ಲ. ವಾಟರ್ ಪಾರ್ಕ್ ಗೆ ನೀರು ಕೊಡಲು, ಪ. ಪಂ. ಅಧ್ಯಕ್ಷ ಬದಲಾವಣೆಗೆ ಒಗ್ಗಟ್ಟು ತೋರುವ ಸದಸ್ಯರು ಅಭಿವೃದ್ಧಿ ದೃಷ್ಟಿಯಲ್ಲಿಯು ಒಟ್ಟಾಗಬೇಕಿದೆ.

ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ

Share

📢 Stay Updated!

Join our official WhatsApp group to get instant news updates, alerts, and exclusive stories – right on your phone.

💬 Join our WhatsApp Group

Don't Miss

ಜಾನುವಾರು ರಕ್ಷಣೆ: ಗೋ ಶಾಲೆಗೆ ರವಾನಿಸುವ ಮೂಲಕ ಗೀರ್ ಹೋರಿಗಳಿಗೆ ಜೀವದಾನ

ಅಂಕೋಲಾ: ವಧೆ ಉದ್ದೇಶದಿಂದ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ, ಎರಡು ಭಾರೀ ಗಾತ್ರದ ಗೀರ್ ತಳಿಯ ಹೋರಿಗಳಿಗೆ ಕೊನೆಗೂ ಸುರಕ್ಷಿತ ಆಶ್ರಯ ದೊರೆತಂತಿದ್ದು, ಕುಮಟಾ ಉಪವಿಭಾಗಾಧಿಕಾರಿಗಳ ಅನುಮತಿ ಬಳಿಕ ಹೋರಿಗಳನ್ನು ಗೋಶಾಲೆಗೆ ಕಳಿಸಿ, ಮೂಕ...

ಪ್ರಗತಿ ವಿದ್ಯಾಲಯದಲ್ಲಿ ಶಾಲಾ ಪ್ರಾರಂಭೋತ್ಸವ; ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ

ಕುಮಟಾ: ಮೂರೂರಿನ ಪ್ರಗತಿ ವಿದ್ಯಾಲಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಅತ್ಯಂತ ವಿಜೃಂಭಣೆಯಿoದ ನೆರವೇರಿತು. ಉತ್ಸಾಹದಿಂದ ಶಾಲಾ ಅಂಗಳದತ್ತ ಹೆಜ್ಜೆ ಹಾಕಿದ ವಿದ್ಯಾರ್ಥಿಗಳಿಗೆ ಹೂಗುಚ್ಛ ನೀಡಿ, ಪ್ರೀತಿಯಿಂದ ಬರಮಾಡಿಕೊಳ್ಳಲಾಯಿತು. ಸರಸ್ವತಿ...

🌐 📺 Visit Our Media Partner Site

ಉತ್ತರಕನ್ನಡ ಸುದ್ದಿ Update ಪಡೆಯಿರಿ

🔗 Go to Vismaya TV
Related Articles

ಪ್ರಗತಿ ವಿದ್ಯಾಲಯದಲ್ಲಿ ಶಾಲಾ ಪ್ರಾರಂಭೋತ್ಸವ; ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ

ಕುಮಟಾ: ಮೂರೂರಿನ ಪ್ರಗತಿ ವಿದ್ಯಾಲಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಅತ್ಯಂತ ವಿಜೃಂಭಣೆಯಿoದ ನೆರವೇರಿತು....

ಬಿಜಿಎಸ್ ಸೆಂಟ್ರಲ್ ಸ್ಕೂಲ್ & ಪಿಯು ಕಾಲೇಜಿನಲ್ಲಿ ನೇಮಕಾತಿ: ಕೂಡಲೇ ಸಂಪರ್ಕಿಸಿ

ಉತ್ತರಕನ್ನಡ ಜಿಲ್ಲೆಯ ಮಿರ್ಜಾನಿನ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಬಿಜಿಎಸ್ ಸೆಂಟ್ರಲ್ ಸ್ಕೂಲ್ & ಆದಿಚುಂಚನಗಿರಿ...

ಅಂಕೋಲಾದಬಾಳೇಗುಳಿ ಬೊಗ್ರಿಬೈಲಿನಲ್ಲಿ ಶ್ರೀ ಉದ್ಭವ ನಾಗಚೌಡೇಶ್ವರಿ–ವೀರಾಂಜನೇಯ ದೇವರ ಚತುರ್ಥ ವರ್ಧಂತಿ ಮಹೋತ್ಸವ

ಅಂಕೋಲಾ: ತಾಲೂಕಿನ ಬಾಳೇಗುಳಿ ಬೊಗ್ರಿಬೈಲಿನಲ್ಲಿರುವ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶ್ರೀ ಉದ್ಭವ ನಾಗಚೌಡೇಶ್ವರಿ ಅಮ್ಮನವರು ಹಾಗೂ...

ಹೋಮಿಯೋಪತಿ ಸಂಸ್ಥಾಪಕ ಹಾನಿಮ್ಯಾನ್ ಅವರ 271ನೇ ಜನ್ಮ ದಿನಾಚರಣೆ

ಅಂಕೋಲಾ: ಇಂಗ್ಲಿಷ್ ಔಷಧಿಗಳನ್ನು ಸೇವಿಸಿದಾಗ ತಾತ್ಕಾಲಿಕವಾಗಿ ಕಾಯಿಲೆ ವಾಸಿಯಾದಂತೆ ಅನ್ನಿಸಿದರೂ, ಕೆಲವೇ ದಿನಗಳಲ್ಲಿ ಅದು ಮರುಕಳಿಸುವ...

ಗೋಕರ್ಣಕ್ಕೆ ಆಗಮಿಸಲಿದೆ ವರದಹಳ್ಳಿಯ ಶ್ರೀಧರ ಸ್ವಾಮಿಗಳ ಪಾದುಕೆ: ದರ್ಶನ ಮತ್ತು ಫಲಸಮರ್ಪಣೆಗೆ ಸುವರ್ಣಾವಕಾಶ

ಗೋಕರ್ಣ: ವರದಹಳ್ಳಿಯ ಸದ್ಗುರು ಶ್ರೀಧರ ಸ್ವಾಮಿಗಳ ಪಾದುಕೆ ಇದೇ ಏಪ್ರಿಲ್ 8ರ ಬುಧರವಾರ ಮತ್ತು 9ರ...

ವಿಸ್ಮಯ ಟಿ.ವಿ ಹೆಸರಿನಲ್ಲಿ ಮೋಸ: ವೀಕ್ಷಕರ, ಜಾಹೀರಾತುದಾರರ ಗಮನಕ್ಕೆ

ಕುಮಟಾ: ಕಳೆದ 13 ವರ್ಷಗಳಿಂದ ಸದಭಿರುಚಿಯ ಕಾರ್ಯಕ್ರಮಗಳ ಮೂಲಕ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮನೆಮಾತಾಗಿರುವ ವಿಸ್ಮಯ...

ಫೋಟೋಗ್ರಾಫರ್ ಪ್ರಶಾಂತ ವಿಧಿವಶ : ಪಚ್ಚು ಎಂದೇ ಚಿರಪರಿಚಿತನಾಗಿದ್ದ ಯುವಕ ಇನ್ನು ನೆನಪು ಮಾತ್ರ

ಅಂಕೋಲಾ : ಪಟ್ಟಣ ವ್ಯಾಪ್ತಿಯ ಲಕ್ಷ್ಮೇಶ್ವರ ಕುಂಬಾರಕೇರಿ ನಿವಾಸಿ, ಪ್ರಶಾಂತ (ಪಚ್ಚು ) ಕೆ ನಾಯ್ಕ...

ತರಂಗ ಎಲೆಕ್ಟ್ರಾನಿಕ್ಸ್ ನಲ್ಲಿ ಯುಗಾದಿ ಉತ್ಸವ: ಏ.ಸಿ ಮೇಲೆ ಬಂಪರ್ ಆಫರ್

ಕುಮಟಾ: ಉತ್ತರಕನ್ನಡ ಜಿಲ್ಲೆಯ ಅತ್ಯಂತ ವಿಶ್ವಾಸಾರ್ಹ ಮತ್ತು ಅತಿದೊಡ್ಡ ಶೋರೂಮ್ ತರಂಗ ಎಲೆಕ್ಟ್ರಾನಿಕ್ಸ್ ನಲ್ಲಿ ಯುಗಾದಿ...