Important

ರಸ್ತೆಗಳಲ್ಲಿ ಹೊಂಡಗಳದ್ದೆ ದರ್ಬಾರ್ : ಸಾರ್ವಜನಿಕರಿಗೆ ಸಂಚಾರ ಮಾಡಲಾಗದ ದುಸ್ಥಿತಿ

Share

ಹೊನ್ನಾವರ: ತಾಲೂಕಿನ ಪಟ್ಟಣ ವ್ಯಾಪ್ತಿಯ ಕೆಲವು ರಸ್ತೆಗಳಲ್ಲಿ ಹೊಂಡ ಬಿದ್ದಿದ್ದು, ಸಾರ್ವಜನಿಕರು ಸಂಚಾರ ಮಾಡಲಾಗದ ಪರಿಸ್ಥಿತಿ ತಲುಪಿದ್ದು, ಚರಂಡಿಯಲ್ಲಿ ನೀರು ತುಂಬಿ ಕೊಳೆತು ನಾರುತ್ತಿದೆ. ಹೌದು..ಪಟ್ಟಣ ವ್ಯಾಪ್ತಿಯ ಕೆಲವೆಡೆ ಒಂದು ಸುತ್ತು ಹಾಕಿದರೆ ಹಲವು ಸಮಸ್ಯೆ ಕಣ್ಣಿಗೆ ಬೀಳುತ್ತದೆ. ಪಟ್ಟಣದ ಕೆ.ಎಚ್.ಬಿ ಕಾಲೋನಿ ರಸ್ತೆಯಲ್ಲಿ ಹಿಂದೆ ಹಾಕಿದ ಡಾಂಬರ್ ಹುಡುಕಿದರು ಸಿಗದಷ್ಟು ರಸ್ತೆ ಹಾಳಾಗಿದ್ದು, ಡಾಂಬರ್ ರಸ್ತೆಯೋ ಅಥವಾ ಮಣ್ಣಿನ ರಸ್ತೆಯೋ ಅನ್ನುವ ಅನುಮಾನ ಬರುತ್ತಿದೆ. ಈ ರಸ್ತೆಯಲ್ಲಿ ಅಲ್ಲಲ್ಲಿ ಮಣ್ಣು ಸುರಿಯಲಾಗಿದೆ. ಹೊಂಡಕ್ಕೆ ಕಲ್ಲು ಹಾಕಿ ಮುಚ್ಚಿದ್ದಾರೆ. ಕೆಲವೆಡೆ ದೊಡ್ಡ ಹೊಂಡ ಬಿದ್ದಿದೆ.

ಈ ಪ್ರದೇಶದಲ್ಲಿ ನೂರಾರು ಮನೆಗಳಿದ್ದು, ಹೆಚ್ಚಿನದಾಗಿ ನೌಕರರು, ನಿವೃತ್ತಿ ಹೊಂದಿದವರು, ಸುಶಿಕ್ಷಿತರೆ ಹೊಂದಿರುವ ಈ ಪ್ರದೇಶದ ಜನರು ನಿತ್ಯ ಸಂಚಾರಕ್ಕೆ ಸರ್ಕಸ್ ಮಾಡಬೇಕಿದೆ. ಮಳೆ ಬಂದರೆ ಕೇಸರು ನೀರಿನ ಅಭಿಷೇಕ ಅನಿವಾರ್ಯವಾಗಿದೆ. ಪ. ಪಂ. ಐದು ವರ್ಷ ಕಳೆಯುವಷ್ಟರಲ್ಲಿ ನಾಲ್ಕು ಅಧ್ಯಕ್ಷರನ್ನು ಕಂಡಿದೆ. ಅಧ್ಯಕ್ಷರ ಬದಲಾವಣೆಗೆ ವಹಿಸಿದಷ್ಟು ಆಸಕ್ತಿ, ಸ್ಥಳೀಯ ಸಮಸ್ಯೆ ಬಗೆಹರಿಸಲು ಮುಂದಾದರೆ ಓಡಾಡುವ ರಸ್ತೆಯಾದರು ಸರಿಯಾಗುತ್ತಿತ್ತು ಎನ್ನುವ ಮಾತು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

ಇನ್ನೂ ಪಟ್ಟಣ ವ್ಯಾಪ್ತಿಯಲ್ಲಿ ಬರುವ ಮೂತ್ರಖಾನೆಗೆ ಹೋಗಿದ್ದರೇ ಮೂಗು ಮುಚ್ಚಿಸುತ್ತಿದೆ. ಇನ್ನೂ ದುರ್ಗಾಕೇರಿಯಲ್ಲಿರುವ ಮೂತ್ರಖಾನೆಯ ಪಕ್ಕದಲ್ಲಿ ಕಸದ ರಾಶಿ ಪ. ಪಂ.ಕ್ಕೆ ಬೆರಳು ತೋರಿಸುತ್ತಿದೆ. ಇನ್ನೂ ಕಮಟೆಹಿತ್ತಲ, ಕರ್ಕಿಕೋಡಿ ಹೋಗುವ ರಸ್ತಿ, ಜಡ್ಡಿಕೇರಿ ಹೋಗುವ ರಸ್ತೆ, ರಾಮಮಂದಿರ ಹತ್ತಿರದಲ್ಲಿ, ಬಸ್ ನಿಲ್ದಾಣದ ಎದುರಿಗೆ, ಬಂದರ ರಸ್ತೆಯಲ್ಲಿ ಹೊಂಡದ್ದೆ ಕಾರುಬಾರು ಆಗಿದೆ. ಇದರ ಹೊರತಾಗಿ ಇನ್ನೂ ಕೆಲವು ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ.

ಕರ್ಕಿಕೊಡಿ ರುಕ್ಮಿಣಿ ದೇವಸ್ಥಾನ ಎದುರುಗಡೆ ರಸ್ತೆ ಸಂಪೂರ್ಣ ಹಾಳಾಗಿದ್ದು ಜನರಿಗೆ ತಿರುಗಾಡಲು ತುಂಬಾ ತೊಂದರೆ ಆಗುತ್ತಿದೆ. ಕೇವಲ 120 ಮೀಟರ್ ಕಾಂಕ್ರೀಟ್ ಸಿಮೆಂಟ್ ರಸ್ತೆ ನಿರ್ಮಾಣ ಆದರೆ ಅಲ್ಲಿಯ ಸಮಸ್ಯೆ ಬಗೆಹರಿಯಲಿದೆ. ಬೆಳಕು ಬಿಡುವಷ್ಟರಲ್ಲಿ ಪೌರ ಕಾರ್ಮಿಕರಿಂದ ಸ್ವಚ್ಛ ಮಾಡುವ ಕೆಲಸ ನಡೆಯುತ್ತದೆ. ನಂತರ ಕಸ ಸಾಗಾಣಿಕೆ ವಾಹನ ಬರುತ್ತದೆ. ಇಷ್ಟೆಲ್ಲ ಸೌಲಭ್ಯ ಇದ್ದರು, ದುರ್ಗಾಕೇರಿಯ ಮೂತ್ರಖಾನೆ ಸಮೀಪ ಸುತ್ತಮುತ್ತ ಪ್ಲಾಸ್ಟಿಕ್ ಕಸದ ರಾಶಿ ಬಿದ್ದಿದ್ದು, ಗಬ್ಬುನಾಥ ಎದ್ದಿದೆ. ಮನೆಯಲ್ಲಿ ಬಳಸಿದ ಅಡುಗೆ, ಮಕ್ಕಳು ಬಳಸಿದ ಪ್ಯಾಡ್ ಇನ್ನಿತರ ವಸ್ತುಗಳನ್ನು ಬಳಸಿ ಬಿಸಾಕಿದ್ದಾರೆ. ಇಲ್ಲಿರುವ ಮೂತ್ರಖಾನೆ ಜಿರ್ಣಾವಸ್ಥೆ ತಲುಪಿದ್ದು, ಅದರ ನೀರು ರಸ್ತೆಗೆ ಹರಿದು ಬರುವುದೊಂದು ಬಾಕಿ ಇದೆ. ಪಟ್ಟಣದಲ್ಲಿ ಮೂತ್ರಖಾನೆಯನ್ನು ಆಗಾಗ ಸ್ವಚ್ಛಗೊಳಿಸಿದರೂ, ಕಟ್ಟಡ, ಅಲ್ಲಿಯ ಪೈಪ್ ಜೋಡಣೆ ಎಲ್ಲವು ಹಾಳಾಗಿದೆ. ಸುತ್ತ ಮುತ್ತ ಕಾಲು ಇಡಲು ಆಗದಷ್ಟು ಗಬ್ಬುನಾಥ ಎದ್ದುಕಾಣುತ್ತಿದೆ.

ಇನ್ನೂ ಬಂದರು ರಸ್ತೆಯಿಂದ ಗ್ಯಾಸ್ ಆಫೀಸ್ ಹೋಗುವ ರಸ್ತೆ ಪಕ್ಕದ ಗಟಾರದಲ್ಲಿ ನೀರು ತುಂಬಿ ಗಬ್ಬುನಾರುತ್ತಿದೆ. ಚರಂಡಿಗೆ ಬರುವ ನೀರು ಮುಂದೆ ಸಾಗದೆ ತುಂಬಿಕೊಂಡಿದೆ. ಅದರಲ್ಲಿ ಒಂದಿಷ್ಟು ಕಸ ತುಂಬಿಕೊಂಡಿದ್ದು, ಗಬ್ಬೆದ್ದ ವಾಸನೆ ರೋಗ ಹರಡುವ ಭೀತಿ ಸಾಧ್ಯತೆಯಿದೆ.

ಒಟ್ಟಾರೆ ಪಟ್ಟಣದ ಸುತ್ತ ಒಂದಲ್ಲ ಒಂದು ಸಮಸ್ಯೆ ಎದ್ದು ಕಾಣುತ್ತಿದೆ. ಬಗೆಹರಿಸಬೇಕಾದವರು ಆಸಕ್ತಿ ತೋರುತ್ತಿಲ್ಲವಾ? ಅಥವಾ ಅನುದಾನ ಕೊರತೆ ಇದೆಯಾ ಗೊತ್ತಾಗುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಪಕ್ಕದ ಕ್ಷೇತ್ರದವರೆ ಆಗಿದ್ದರು ಸಂಬಂಧ ಪಟ್ಟವರು ಅವರನ್ನು ಭೇಟಿಮಾಡಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿದಂತಿಲ್ಲ. ವಾಟರ್ ಪಾರ್ಕ್ ಗೆ ನೀರು ಕೊಡಲು, ಪ. ಪಂ. ಅಧ್ಯಕ್ಷ ಬದಲಾವಣೆಗೆ ಒಗ್ಗಟ್ಟು ತೋರುವ ಸದಸ್ಯರು ಅಭಿವೃದ್ಧಿ ದೃಷ್ಟಿಯಲ್ಲಿಯು ಒಟ್ಟಾಗಬೇಕಿದೆ.

ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ

Share

📢 Stay Updated!

Join our official WhatsApp group to get instant news updates, alerts, and exclusive stories – right on your phone.

💬 Join our WhatsApp Group

Don't Miss

ಸಮುದ್ರ ದಡಕ್ಕೆ ಬರುತ್ತಿರುವೆ ರಾಶಿ ರಾಶಿ ಜೀವಂತ ಮೀನುಗಳು: ಮುಗಿಬಿದ್ದು ಚೀಲಗಳಲ್ಲಿ ತುಂಬಿಸಿಕೊಳ್ಳುತ್ತಿರುವ ಸ್ಥಳೀಯರು

ಇಲ್ಲಿನ ಸಮುದ್ರ ತೀರದಲ್ಲಿ ಬಲೆ ಬೀಸಬೇಕೆಂದಿಲ್ಲ, ಆದರೂ ನೀವು ರಾಶಿ ರಾಶಿ ಜೀವಂತ ಮೀನುಗಳನ್ನು ಬಾಚಿ ತರಬಹುದು,ಇಂತಹದೊoದು ಪ್ರಕೃತಿ ವಿಸ್ಮಯ ನಡೆದದ್ದು ದೂರದಲ್ಲೆಲ್ಲೋ ಅಲ್ಲ, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ...

ಅಂಕೋಲಾ ಉಪನೋಂದಣಾಧಿಕಾರಿಗಳ ಕಚೇರಿಗೆ ಸರ್ಚ್ ವಾರೆಂಟ್ ಮೇಲೆ ಬಂದ ಲೋಕಾಯುಕ್ತರ ತಂಡ : ಯಾಕೆ ನೋಡಿ?

ಅಂಕೋಲಾ‌ : ಇಲ್ಲಿನ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ದಸ್ತಾವೇಜು ನೋಂದಣಿ ಮುಂತಾದ ಕೆಲಸಗಳಲ್ಲಿ ಅನಗತ್ಯ ವಿಳಂಬ ಮತ್ತು ಏಜೆಂಟರ ಹಾವಳಿ ಹೆಚ್ಚಾಗಿರುವ ಕುರಿತು ಸಾರ್ವಜನಿಕರಿಂದ ಆರೋಪಗಳು ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಗುರುವಾರ ಲೋಕಾಯುಕ್ತ ಅಧಿಕಾರಿಗಳು...

🌐 📺 Visit Our Media Partner Site

ಉತ್ತರಕನ್ನಡ ಸುದ್ದಿ Update ಪಡೆಯಿರಿ

🔗 Go to Vismaya TV
Related Articles

ಅಂಕೋಲಾ ಕರಾವಳಿ ಉತ್ಸವ 2025 : ನವೆಂಬರ್ 5 ರಿಂದ 10ರ ವರೆಗೆ ಸಾಂಸ್ಕೃತಿಕ ವೈಭವ

ಅಂಕೋಲಾ: ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೊಂದಿರುವ ಅಂಕೋಲಾ ತಾಲೂಕಿನಲ್ಲಿ ಅಂಕೋಲಾ ಸಾಂಸ್ಕೃತಿಕ ಕಲಾಬಳಗ ಉತ್ತರ ಕನ್ನಡ ಸಂಘಟನೆಯ...

ಅಂಕೋಲಾದ ನಾಡವರ ಸಮುದಾಯ ಭವನದಲ್ಲಿ ಬೃಹತ್ ಆಹಾರ ಮತ್ತು ಸ್ವದೇಶೀ ಮೇಳ: ಅಕ್ಟೋಬರ್ 7, 8,9 ರಂದು ಆಯೋಜನೆ

ಅಂಕೋಲಾ : ರಾಘವೇಂದ್ರ ಇವೆಂಟ್ಸ್ ಅಂಕೋಲಾ ಹಾಗೂ ಬೆನಕ ಇವೆಂಟ್ಸ್ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ...

ಸೇವಾಪರ್ವ ವಿಕಸಿತ ಭಾರತ ವಿಷಯಾಧಾರಿತ ಪೇಟಿಂಗ್ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ದರ್ಶನ ನಾಯ್ಕ

ಭಟ್ಕಳ: ಕೇಂದ್ರ ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ತಂಜಾವೂರು ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ವಿಕ್ಷಿತ್ ಭಾರತ್...

ಸಮುದ್ರ ದಡಕ್ಕೆ ಬರುತ್ತಿರುವೆ ರಾಶಿ ರಾಶಿ ಜೀವಂತ ಮೀನುಗಳು: ಮುಗಿಬಿದ್ದು ಚೀಲಗಳಲ್ಲಿ ತುಂಬಿಸಿಕೊಳ್ಳುತ್ತಿರುವ ಸ್ಥಳೀಯರು

ಇಲ್ಲಿನ ಸಮುದ್ರ ತೀರದಲ್ಲಿ ಬಲೆ ಬೀಸಬೇಕೆಂದಿಲ್ಲ, ಆದರೂ ನೀವು ರಾಶಿ ರಾಶಿ ಜೀವಂತ ಮೀನುಗಳನ್ನು ಬಾಚಿ...

ಪ್ರತಿಷ್ಠಿತ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ ಹೊನ್ನಾವರ ಇದರ ವಾರ್ಷಿಕ ಸರ್ವ ಸಾಧಾರಣ

ಹೊನ್ನಾವರ : ಇಲ್ಲಿನ ಪ್ರತಿಷ್ಠಿತ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ...

ಮಾನವೀಯತೆಯ ದೀಪ ಬೆಳಗಿಸಿದ ನೇತ್ರದಾನಿ ಕೃಷ್ಣ ನಾಯ್ಕ ಅಮರ

ಕುಮಟಾ : ತಾಲೂಕಿನ ಧಾರೇಶ್ವರ ಹೋಬಳಿ ಹರನೀರು ತುದಿಮನೆ ನಿವಾಸಿ ಕೃಷ್ಣ ನಾರಾಯಣ ನಾಯ್ಕ (77...

ಬಸ್ ಗೆ ಡಿಕ್ಕಿ ಹೊಡೆದ ಲಾರಿ : ಸ್ಟೇರಿಂಗ್ ಮಧ್ಯ ಸಿಲುಕಿದ ಲಾರಿ ಚಾಲಕ ಸಾವು: ಬಸ್ಸಿನಲ್ಲಿದ್ದ ಓರ್ವ ಪ್ರಯಾಣಿಕ ಸ್ಥಳದಲ್ಲಿಯೇ ನಿಧನ

ಅಂಕೋಲಾ: ಟ್ಯಾಂಕರ್ ಲಾರಿ ಮತ್ತು ಸಾರಿಗೆ ಸಂಸ್ಥೆಯ ಬಸ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ...

ಹೃದಯದಾಕಾರದ ಮುಖದ ಗೂಬೆ: ಶಾಲೆಗೆ ಬಂತು ಗುಮ್ಮ

ಅಂಕೋಲಾ: ಮಕ್ಕಳು ಊಟ, ತಿಂಡಿ, ನಿದ್ದೆ ಸರಿಯಾಗಿ ಮಾಡದಿದ್ದರೆ ಅಥವಾ ಬೇರೆ ಕಾರಣದಿಂದ ಹಠ ಹಿಡಿದರೆ...