Important

ಪ್ರತಿಷ್ಠಿತ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ ಹೊನ್ನಾವರ ಇದರ ವಾರ್ಷಿಕ ಸರ್ವ ಸಾಧಾರಣ

Share

ಹೊನ್ನಾವರ : ಇಲ್ಲಿನ ಪ್ರತಿಷ್ಠಿತ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ ಹೊನ್ನಾವರ ಇದರ 2024-25 ಸಾಲಿನ 58ನೇ ವಾರ್ಷಿಕ ಸರ್ವ ಸಾಧಾರಣ ಸಭೆಯು ಪಟ್ಟಣದ ನ್ಯೂ ಇಂಗ್ಲಿಷ್ ಶಾಲೆಯ ಸಭಾಭವನದಲ್ಲಿ ಜರುಗಿತು.

ಎವಿ : ಸಹಕಾರಿ ಅಭಿವೃದ್ಧಿ ಅಧಿಕಾರಿ,ಆಡಳಿತಾಧಿಕಾರಿ ಸರಿತಾ ಎನ್.ಬೇತಾಳಕರ ಅದ್ಯಕ್ಷತೆಯಲ್ಲಿ, ಚರ್ಚೆಯ ವಿಷಯದ ಕುರಿತು ಸದಸ್ಯರು ಚರ್ಚಿಸಿ ಉತ್ತರ ಪಡೆದುಕೊಂಡು ಅನುಮೋದನೆ ಪಡೆಯಲಾಯಿತು. 2024-25ನೇ ಸಾಲಿನಲ್ಲಿ 170.93 ಲಕ್ಷ ನಿವ್ವಳ ಲಾಭಗಳಿಸಿದೆ. ಶೇರು ಸದಸ್ಯರಿಗೆ 15% ಡಿವಿಡೆಂಡ್ ಘೋಷಿಸಿದೆ. ಬ್ಯಾಂಕ್ ಅತ್ಯುತ್ತಮ ನಿರ್ವಹಣೆಗೆ ರಾಜ್ಯ ಮಟ್ಟದ ಪ್ರಶಸ್ತಿ ನೀಡುತ್ತಿದ್ದು ಜಿಲ್ಲೆಗೆ 2ನೇ ಸ್ಥಾನ ಬ್ಯಾಂಕ್ ಪಡೆದುಕೊಂಡಿದೆ. ಇದು ಹೆಮ್ಮೆಯ ಸಂಗತಿ. ಪ್ರಶಸ್ತಿ ಪ್ರದಾನ ಬೆಂಗಳೂರಿನಲ್ಲಿ ಜರುಗಲಿದ್ದು ಬ್ಯಾಂಕ್ ನ ಪ್ರಧಾನ ವ್ಯವಸ್ಥಾಪಕ ಎಂ.ಡಿ.ಮುಕ್ರಿ ಸ್ವೀಕರಿಸಲಿದ್ದಾರೆ ಎಂದು ಆಡಳಿತಾಧಿಕಾರಿ ಸರಿತಾ ಬೇತಾಳಕರ ಸಭೆಗಯಲ್ಲಿ ತಿಳಿಸಿದರು.

ಉಪನಿಯಮಗಳಿಗೆ ಅನುಸಾರವಾಗಿ ಅಧ್ಯಕ್ಷರ ಅನುಮತಿ ಮೇರೆಗೆ ಸಭೆಯಲ್ಲಿ ಇತರ ವಿಷಯದ ಮೇಲೆ ಚರ್ಚೆ ವೇಳೆ ಬ್ಯಾಂಕಿನ ಮಾಜಿ ಅಧ್ಯಕ್ಷ ಚಂದ್ರಶೇಖರ ಗೌಡ ಮಾತನಾಡಿ ಬ್ಯಾಂಕನ ನಿಕಟಪೂರ್ವ ಅಧ್ಯಕರಾದ ವಿ.ಎನ್.ಭಟ್ಟ ಅಳ್ಳಂಕಿಯವರು ನಮ್ಮ ಬ್ಯಾಂಕಿನ ಒಂದು ಕೋಟಿ ಹಣ ಬೇರೆ ಬ್ಯಾಂಕಿನಲ್ಲಿ ಪ್ರಧಾನ ವ್ಯವಸ್ಥಾಪಕರ ಗಮನಕ್ಕೆ ಇಲ್ಲದೆ ಬೇರೆ ಬ್ಯಾಂಕಿಗೆ ವರ್ಗಾಯಿಸಿರುವ ಬಗ್ಗೆ ಬ್ಯಾಂಕಿನ ಸಿಬ್ಬಂದಿಗಳೇ ತನಗೆ ತಿಳಿಸಿದ್ದಾರೆ ಎಂದು ಮಾಧ್ಯಮದ ಮುಂದೆ ಹೇಳೀದ್ದಾರೆ, ಇದರಿಂದ ಬ್ಯಾಂಕಿನ ಗ್ರಾಹಕರಿಗೆ,ರೈತ ಬಾಂಧವರಿಗೆ ತಪ್ಪು ಸಂದೇಶ ಹೋಗುತ್ತದೆ. ಇದರ ಕುರಿತು ಸೃಷ್ಟನೆ ಸಭೆಗೆ ನೀಡಬೇಕು ಎಂದು ಆಗ್ರಹಿಸಿದರು.

ಅದಕ್ಕೆ ಉತ್ತರಿಸಿದ ಬ್ಯಾಂಕ್ ವ್ಯವಸ್ಥಾಪಕ ಎಂ.ಡಿ.ಮುಕ್ರಿ ಇದು ಸತ್ಯಕ್ಕೆ ದೂರವಾಗಿದೆ. ನಮ್ಮ ಬ್ಯಾಂಕಿನಲ್ಲಿ ಅವರು ಹೇಳಿದ ರೀತಿ ಯಾವುದೇ ವ್ಯವಹಾರ ನಡೆದಿದ್ದು ಇರುವುದಿಲ್ಲ. ಸಿಬ್ಬಂದಿಗಳು ನನ್ನ ಗಮನಕ್ಕೆ ತಾರದೇ ಬ್ಯಾಂಕಿನ ಯಾವುದೇ ವ್ಯವಹಾರ ನಡೆಸುವುದಿಲ್ಲ ಎಂದು ಸೃಷ್ಟನೆ ನೀಡಿದರು. ಈ ಕುರಿತು ಮಾಧ್ಯಮದವರಿಗೆ ಬ್ಯಾಂಕ್ ಪತ್ರಿಕಾ ಪ್ರಕಟಣೆ ನೀಡಬೇಕು ಎಂದು ನಿಕಟಪೂರ್ವ ನಿರ್ದೇಶಕ ರಾದ ಗೋವಿಂದ ನಾಯ್ಕ,ಕೃಷ ಗೌಡ , ವಿಶಾಲ್ ಭಟ್ಟ, ವಂದೂರು, ಗೋವಿಂದ ಗೌಡ, ವಂದೂರು ಹಾಗೂ ಇತರರು ಧ್ವನಿಗೂಡಿ ಮಾಜಿ ಅಧಯಕ್ಷರ ಈ ಬೇಜವ್ದಾರಿ ಹೇಳಿಕೆಯನ್ನು ಖಂಡಿಸಿ ಠರಾವು ಮಾಡಬೇಕು ಮತ್ತು ಕಾಯ್ದೆಯಲ್ಲಿ ಅವಕಾಶ ಇದ್ದರೆ ಆ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಬಗ್ಗೆ ಬ್ಯಾಂಕಿನಿoದ ಮಾಧ್ಯಮ ದವರಿಗೆ ಸೃಷ್ಟನೆ ನೀಡಲಾಗುವುದು ಎಂದು ಪ್ರಧಾನ ವ್ಯವಸ್ಥಾಪಕರು ಸಭೆಗೆ ತಿಳಸಿದರು. ಚರ್ಚಿತ ವಿಷಯಗಳ ವಿವರಣೆಯನ್ನು ಹಿರಿಯ ಮೇಲ್ವಿಚಾರಕ ಬಾಲಚಂದ್ರ ಗಣಪಯ್ಯ ಗೌಡ ನೀಡಿದರು. ಶಾಖಾ ವ್ಯವಸ್ಥಾಪಕ ಹನುಮಂತ ನಾಯ್ಕ ವಂದಿಸಿದರು.

Share

📢 Stay Updated!

Join our official WhatsApp group to get instant news updates, alerts, and exclusive stories – right on your phone.

💬 Join our WhatsApp Group

Don't Miss

ಚಿಪ್ಪಿ ಫ್ಯಾಕ್ಟರಿ ಹತ್ತಿರದ ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತ ದೇಹ ಪತ್ತೆ

ಅಂಕೋಲಾ: ತಾಲೂಕಿನ ಶೆಟಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಯುವಕನೋರ್ವನ ಮೃತದೇಹ ಪತ್ತೆಯಾಗಿದ್ದು ಮೃತ ಯುವಕನನ್ನು ಸ್ಥಳೀಯ ಗ್ರಾಪಂ ವ್ಯಾಪ್ತಿಯ ಹಡವ ನಿವಾಸಿ ಸುಧೀರ...

ಆಧುನಿಕ ಜಗತ್ತನ್ನಾಳಲಿರುವ AI ಕುರಿತು ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮ

ಅಂಕೋಲಾ : ಕೃತಕ ಬುದ್ಧಿಮತ್ತೆಯು ( AI ತಂತ್ರಜ್ಞಾನ ) ತ್ವರಿತವಾಗಿ ಮಾಹಿತಿ ಪಡೆಯುವ ಹೊಸತನದ ಆವಿಷ್ಕಾರವಾಗಿದೆ. ಎ ಐ ನ ಉಪಕ್ರಮಗಳೇ ನಮ್ಮನ್ನು ಮುಂದೆ ಆಳಲಿವೆ ಎಂದು ಕೃತಕ ಬುದ್ಧಿಮತ್ತೆಯ...

🌐 📺 Visit Our Media Partner Site

ಉತ್ತರಕನ್ನಡ ಸುದ್ದಿ Update ಪಡೆಯಿರಿ

🔗 Go to Vismaya TV
Related Articles

ಮಾನವೀಯತೆಯ ದೀಪ ಬೆಳಗಿಸಿದ ನೇತ್ರದಾನಿ ಕೃಷ್ಣ ನಾಯ್ಕ ಅಮರ

ಕುಮಟಾ : ತಾಲೂಕಿನ ಧಾರೇಶ್ವರ ಹೋಬಳಿ ಹರನೀರು ತುದಿಮನೆ ನಿವಾಸಿ ಕೃಷ್ಣ ನಾರಾಯಣ ನಾಯ್ಕ (77...

ಬಸ್ ಗೆ ಡಿಕ್ಕಿ ಹೊಡೆದ ಲಾರಿ : ಸ್ಟೇರಿಂಗ್ ಮಧ್ಯ ಸಿಲುಕಿದ ಲಾರಿ ಚಾಲಕ ಸಾವು: ಬಸ್ಸಿನಲ್ಲಿದ್ದ ಓರ್ವ ಪ್ರಯಾಣಿಕ ಸ್ಥಳದಲ್ಲಿಯೇ ನಿಧನ

ಅಂಕೋಲಾ: ಟ್ಯಾಂಕರ್ ಲಾರಿ ಮತ್ತು ಸಾರಿಗೆ ಸಂಸ್ಥೆಯ ಬಸ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ...

ಹೃದಯದಾಕಾರದ ಮುಖದ ಗೂಬೆ: ಶಾಲೆಗೆ ಬಂತು ಗುಮ್ಮ

ಅಂಕೋಲಾ: ಮಕ್ಕಳು ಊಟ, ತಿಂಡಿ, ನಿದ್ದೆ ಸರಿಯಾಗಿ ಮಾಡದಿದ್ದರೆ ಅಥವಾ ಬೇರೆ ಕಾರಣದಿಂದ ಹಠ ಹಿಡಿದರೆ...

ಸುಮಾರು 10 ತಿಂಗಳಿಂದ ಮಗ ಸಂಪರ್ಕಕ್ಕೆ ಸಿಗದೆ ನೊಂದ ತಂದೆ: ಮನೆಯಿಂದ ಮಲ್ಪೆಗೆ ಹೋದ ಮಗನೆಲ್ಲಿ ?

ಅಂಕೋಲಾ: ವ್ಯಕ್ತಿಯೋರ್ವ ಕಾಣೆಯಾಗಿ ಸುಮಾರು ಹತ್ತು ತಿಂಗಳುಗಳ ನಂತರ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಘಟನೆ...

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಅಂಕೋಲಾ ತಾಲೂಕಾ ಘಟಕ ಉದ್ಘಾಟನೆ

ಅಂಕೋಲಾ: ಪತ್ರಿಕೆ ಹಾಗೂ ಸುದ್ದಿ ಮಾಧ್ಯಮಗಳಿಂದ ಪ್ರತಿದಿನದ ಜಾಗತಿಕ ಆಗು ಹೋಗುಗಳ ಜ್ಞಾನವನ್ನು ಅರಿಯಲು ಸಾಧ್ಯವಿದ್ದು,...

ಚುಟುಕು ಬ್ರಹ್ಮ ದಿನಕರ ದೇಸಾಯಿ ಜನ್ಮದಿನಾಚರಣೆ

ಹೊನ್ನಾವರ: ಚುಟುಕು ಬ್ರಹ್ಮ ದಿನಕರ ದೇಸಾಯಿ ಜನ್ಮದಿನಾಚರಣೆ ಹೊನ್ನಾವರ ತಾಲೂಕಿನ ಕಾಸರಕೋಡದ ಜನತಾ ವಿದ್ಯಾಲಯದಲ್ಲಿ ಕನ್ನಡ...

ತಾತ್ಕಾಲಿಕ ವಿದ್ಯುತ್ ಸಂಪರ್ಕ ನೀಡಿ: ಹೆಸ್ಕಾಂ ಅಧಿಕಾರಿಗೆ ಸಚಿವ ಮಂಕಾಳ ವೈದ್ಯ ತಾಕೀತು

ಭಟ್ಕಳ: ಜನರಿಗೆ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಸಿ.ಸಿ ಓಸಿ ಪ್ರಮಾಣ ಪತ್ರವಿಲ್ಲದಿದ್ದರು, ಜನರಿಗೆ ಪಂಚಾಯತ್...

Uttara Kannada Roundup 2025: ಇಂದಿನ ಪ್ರಮುಖ ಸುದ್ದಿಗಳು

ಅರಣ್ಯಕ್ಕೆ ಓಡಿ ಕಾಣೆಯಾದ ವ್ಯಕ್ತಿ ಬನವಾಸಿ: ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬ ಅರಣ್ಯದೊಳಗೆ ಓಡಿಹೋಗಿ ಕಾಣೆಯಾದ...