ಹೃದಯದಾಕಾರದ ಮುಖ ಹೊಂದಿರುವ ಅಪರೂಪದ ಗೂಬೆ ಬೇಳಾ ಬಂದರ ಸರ್ಕಾರಿ ಶಾಲೆಯಲ್ಲಿ
Important

ಹೃದಯದಾಕಾರದ ಮುಖದ ಗೂಬೆ: ಶಾಲೆಗೆ ಬಂತು ಗುಮ್ಮ

Share

ಅಂಕೋಲಾ: ಮಕ್ಕಳು ಊಟ, ತಿಂಡಿ, ನಿದ್ದೆ ಸರಿಯಾಗಿ ಮಾಡದಿದ್ದರೆ ಅಥವಾ ಬೇರೆ ಕಾರಣದಿಂದ ಹಠ ಹಿಡಿದರೆ ,ಮನೆಯ ಹಿರಿಯರು ಗುಮ್ಮ ಬಂತು ಗುಮ್ಮಎಂಬ ಮಾತು ಹೇಳಿ ಸಣ್ಣಹೆದರಿಕೆ ಹಾಕಿ ಮಕ್ಕಳನ್ನು ಸರಿದಾರಿಗೆ ತರುವ ಪ್ರಯತ್ನ ಮಾಡುವುದನ್ನು ಕೆಲವೊಮ್ಮೆ ಕೆಲವೆಡೆ ಕೇಳಿದ್ದೇವೆ ನೋಡಿದ್ದೇವೆ.

ಆ ಗುಮ್ಮನ ಕಥೆ ಆಧುನಿಕತೆಯ ಇಂದಿನ ದಿನಗಳಲ್ಲಿ ಅಷ್ಟಾಗಿ ಕೇಳಿ ಬರದಿದ್ದರೂ ಗುಮ್ಮ ಎಂದೊಡನೆ ಅದೇನೋ ಕುತೂಹಲ ಹಲವರಲ್ಲಿರುತ್ತದೆ. ಗುಮ್ಮನ ಬಗ್ಗೆ ಸರಿಯಾಗಿ ತಿಳಿದಿರದ ಮತ್ತು ನೋಡಿರದ ಕೆಲ ಮಕ್ಕಳಿರುವ ಶಾಲೆಗೆ ಗುಮ್ಮ ಬಂದರೆ ಹೇಗಿರ ಬೇಡ?!

ಮಕ್ಕಳಲ್ಲಿ ಆತಂಕ ಮತ್ತು ಕುತೂಹಲ

ಅಂಕೋಲಾ ತಾಲೂಕಿನ ಬೇಳಾ ಬಂದರ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಕಳೆದ ಕೆಲ ದಿನಗಳಿಂದ ಗುಮ್ಮವೊಂದು ಆಗಾಗ ಕಾಣಿಸಿಕೊಂಡು,ವಿದ್ಯಾರ್ಥಿಗಳ ಆತಂಕ ಹಾಗೂ ಕುತೂಹಲಕ್ಕೆ ಕಾರಣವಾಗಿತ್ತು ಎನ್ನಲಾಗಿದೆ. ಶಾಲೆಗೆ ಬಂದಿದ್ದ ಈ ಅಪರೂಪದ ಗೂಬೆಯನ್ನು ಸ್ಥಳೀಯರಾದ ಉಮೇಶ್ ಮುಕುಂದ ನಾಯ್ಕ ಎನ್ನುವವರು ಸುರಕ್ಷಿತವಾಗಿ ಹಿಡಿದು, ಎ ಸಿ ಎಫ್ ಜಯೇಶ್ ಅವರ ಮಾರ್ಗದರ್ಶನದಲ್ಲಿ ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಮೂಲಕ ಸ್ಥಳೀಯರ ಆತಂಕ ದೂರ ಮಾಡಿದ್ದಾರೆ.

ಸ್ಥಳೀಯ ಭಾಷೆಯಲ್ಲಿ ಗುಮ್ಮ ಎಂದು ಕರೆಸಿಕೊಳ್ಳುವ ಅಪರೂಪದ ಜೀವಸಂಕುಲಗಳಲ್ಲಿ , ಗೂಬೆಯೂ ಒಂದಾಗಿದ್ದು, ಅದರಲ್ಲಿ ಬೇರೆ ಬೇರೆ ರೀತಿಯವುಗಳನ್ನು ಕಾಣಬಹುದಾಗಿದ್ದರೂ, ಬೇಳಾ ಬಂದರಿನಲ್ಲಿ ಕಾಣಿಸಿಕೊಂಡ ಹೃದಯದಾಕಾರದ ಮುಖವುಳ್ಳ ಈ ಸುಂದರ ಬಣ್ಣದ ಗೂಬೆಯನ್ನು ಪಟ್ಟಣಿಗರು ಸೇರಿದಂತೆ ಹಲವರು ಕಣ್ತುಂಬಿಸಿಕೊಂಡರು.

ಗೂಬೆಯ ಬಗ್ಗೆ ನಂಬಿಕೆಗಳು

ಸ್ಥಳೀಯ ಹೆಸರಾಂತ ಯುವ ಉದ್ಯಮಿ ಸುಜಿತ ನಾರಾಯಣ ನಾಯ್ಕ ಎನ್ನುವವರೂ ಗೂಬೆಯ ಕೆಲ ಫೋಟೋಗಳನ್ನು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದರು. ಗೂಬೆ ಹಿಡಿದ ಸುದ್ದಿ ಕೇಳಿದ ಕೆಲವರು ಗೂಬೆ ಅಶುಭ ಕಾರಕ ಎಂದರೆ, ಇನ್ನು ಕೆಲವರು ಲಕ್ಷ್ಮೀಗೆ ಅತೀ ಪ್ರಿಯವಾದ ಪಕ್ಷಿ ಎಂದು ಹೇಳುತ್ತಿರುವುದು ಕಂಡು ಬಂದಿದೆ. ಒಟ್ಟಿನಲ್ಲಿ ಶಾಲೆಗೆ ಬಂದಿದ್ದ ಅಪರೂಪದ ಗೂಬೆ ಸ್ಥಳೀಯರ ಮೂಲಕ ,ಅರಣ್ಯ ಇಲಾಖೆಯವರ ಕೈ ಸೇರಿ ಸುರಕ್ಷಿತ ವಾಗುವಂತಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Share

📢 Stay Updated!

Join our official WhatsApp group to get instant news updates, alerts, and exclusive stories – right on your phone.

💬 Join our WhatsApp Group

Don't Miss

ಬೆಂಕಿ ಅವಘಡದಲ್ಲಿ ಅಪಾರಹಾನಿ: ಆದರೆ, ಮಾರಿಕಾಂಬೆಯ ಫೋಟೋ ಮಾತ್ರ ಸೇಫ್

ಅಂಕೋಲಾ: ಪಟ್ಟಣ ವ್ಯಾಪ್ತಿಯ ಲಕ್ಷ್ಮೇಶ್ವರ–ಕುಂಬಾರಕೇರಿ ಪ್ರದೇಶದಲ್ಲಿರುವ ಶ್ರೀ ಮಹಾಲಸಾ ವೆಲ್ಡಿಂಗ್ ಶಾಪ್ನಲ್ಲಿ ಫೆಬ್ರವರಿ 9ರ ಸೋಮವಾರ ರಾತ್ರಿ ಆಕಸ್ಮಿಕವಾಗಿ ಬೆಂಕಿ ಅವಘಡ ಸಂಭವಿಸಿ, ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ ಹಾನಿಯಾಗಿರುವ ಘಟನೆ...

ಕಲೆ ಆತ್ಮ ಗೌರವದ ಸಂಕೇತ: ಮಂಕಾಳು ವೈದ್ಯ

ಮುರುಡೇಶ್ವರ: ಮುರುಡೇಶ್ವರದ ಯಕ್ಷರಕ್ಷೆ ವೇದಿಕೆಯಲ್ಲಿ ರಾಗಶ್ರೀ ಸಂಗೀತ ವಿದ್ಯಾಲಯ ಹಡಿನಬಾಳ ಇದರ ಮುರುಡೇಶ್ವರ ಶಾಖೆಯ ಪ್ರಥಮ ವರ್ಷದ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಉಸ್ತುವಾರಿ ಸಚಿವರಾದ ಶ್ರೀ ಮಂಕಾಳು ವೈದ್ಯರು ಕಲೆ ಮತ್ತು...

🌐 📺 Visit Our Media Partner Site

ಉತ್ತರಕನ್ನಡ ಸುದ್ದಿ Update ಪಡೆಯಿರಿ

🔗 Go to Vismaya TV
Related Articles

ಕಲೆ ಆತ್ಮ ಗೌರವದ ಸಂಕೇತ: ಮಂಕಾಳು ವೈದ್ಯ

ಮುರುಡೇಶ್ವರ: ಮುರುಡೇಶ್ವರದ ಯಕ್ಷರಕ್ಷೆ ವೇದಿಕೆಯಲ್ಲಿ ರಾಗಶ್ರೀ ಸಂಗೀತ ವಿದ್ಯಾಲಯ ಹಡಿನಬಾಳ ಇದರ ಮುರುಡೇಶ್ವರ ಶಾಖೆಯ ಪ್ರಥಮ...

ಬಡ, ಮಧ್ಯಮವರ್ಗ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಒಟ್ಟು 3 ಕೋಟಿ ಮೌಲ್ಯದ ವಿದ್ಯಾರ್ಥಿವೇತನ

ಉಡುಪಿ: ರಾಜ್ಯದಲ್ಲೇ ಪ್ರಸಿದ್ಧ ಪಡೆದ ಉಡುಪಿ ಲಾರ್ಡ್ಸ್ ಇಂಟರ್‌ನ್ಯಾಷನಲ್ ರೆಸಿಡೆನ್ಷಿಯಲ್ ಸ್ಕೂಲ್ , ಬಡ, ಮಧ್ಯಮವರ್ಗ...

ಶತರುದ್ರ ಮತ್ತು ಶತಚಂಡಿಕಾ ಯಾಗಕ್ಕೆ ಆತ್ಮೀಯ ಸ್ವಾಗತ

ಕಾರವಾರ: ದಿವಂಗತ ಕೃಷ್ಣ ಸೈಲ್ ಹಾಗೂ ಗಿರಿಜಾ ಕೃಷ್ಣ ಸೈಲ್ ರವರ ಆರ್ಶೀವಾದದೊಂದಿಗೆ ಈ ಕ್ಷೇತ್ರದ...

ಸಹಕಾರದ ಬೆಳಕಿನಲ್ಲಿ ಮಹತ್ವದ ಹೆಜ್ಜೆಯಿಟ್ಟ ‘ಸೂರ್ಯ’: ಹೊಸ ಶಾಖೆಗಳತ್ತ ನಾಗರಾಜ ನಾಯಕರ ದೃಷ್ಟಿ”

ಅಂಕೋಲಾ: ಅಂಕೋಲೆ ಎಂದಾಗ ಕರಿ ಇಸಾಡು ಮಾವಿನಹಣ್ಣು ನೆನಪಾದರೆ, “ಸೂರ್ಯ” ಸಹಕಾರಿ ಎಂದಾಗ ನಾಗರಾಜ ನಾಯಕ...

ಆಟೋರಿಕ್ಷಾಗೆ ಪ್ರವಾಸಿಗರಿದ್ದ ಟಿ.ಟಿ ವಾಹನ ಡಿಕ್ಕಿ : ಮಹಿಳೆಗೆ ಗಾಯ

ಅಂಕೋಲಾ: ಸಹೋದರಿಯ ಮನೆಗೆ ಬಂದು ವಾಪಸ್ ಮನೆಗೆ ಮರಳುತ್ತಿದ್ದ ಗೃಹಿಣಿ ಇದ್ದ ಆಟೋರಿಕ್ಷಾಗೆ ಪ್ರವಾಸಿಗರಿದ್ದ ಟಿ.ಟಿ...

ಶಾಲಾ ಮಕ್ಕಳ ಬಸ್ ಪಲ್ಟಿ: ವಿದ್ಯಾರ್ಥಿ ಸಾವು

ಹೊನ್ನಾವರ: ಗೇರುಸೊಪ್ಪ ಸುಳೆಮುರ್ಕಿ ಕ್ರಾಸ್ ಹತ್ತಿರ ಶಾಲಾಮಕ್ಕಳ ಪ್ರವಾಸಿ ಬಸ್ ಪಲ್ಟಿಯಾಗಿ, ವಿಧ್ಯಾರ್ಥಿ ಸಾವನಪ್ಪಿರುವ ಘಟನೆ...