Big News

ವೃದ್ಧರು, ಅಸಹಾಯಕರಿಗೆ ಹೊಸ ಬಟ್ಟೆ ನೀಡಿ ಪುತ್ರಶೋಕ ಮರೆಯಲೆತ್ನಿಸಿದ ಮಿರಾಶಿ ಕುಟುಂಬ

Share

ಅಂಕೋಲಾ: KEBಯ ನಿವೃತ್ತ ಎಕ್ಸಿಕ್ಕೂಟಿವ್ ಇಂಜಿನಿಯರ್ ಹಾಗೂ ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ರಾಮಚಂದ್ರ ತಿಮ್ಮಣ್ಣ ಮಿರಾಶಿ ಅವರು ತಾಲೂಕಿನ ಅಗ್ರಗೋಣ ಮೂಲದವರಾಗಿದ್ದು , ಕಳೆದ ಅನೇಕ ದಶಕಗಳಿಂದ ಪಟ್ಟಣ ವ್ಯಾಪ್ತಿಯ ಲಕ್ಷೇಶ್ವರದಲ್ಲಿ ಹೆಂಡತಿ ಮತ್ತು ಮಕ್ಕಳೊಂದಿಗೆ ಸುಖಸಂಸಾರ ನಡೆಸುತ್ತಾ ಬಂದಿದ್ದರು. ಹೀಗಿರುತ್ತಾ 1994 ರ ಜೂನ್ 16 ರಂದು ಆ ಕುಟುಂಬದ ಪಾಲಿಗೆ ಅತೀವ ದುಃಖ ಹಾಗೂ ನೋವಿನ ದಿನವಾಗಿದ್ದು ,ಆಕಸ್ಮಿಕ ರಸ್ತೆ ಅಪಘಾತದಲ್ಲಿ ಮನೆ ಮಗ ಮಂಜುನಾಥ ಮಿರಾಶಿ ಬದುಕುಳಿಯಲಾರದೇ ದೈವ ಪಾದ ಸೇರಿದ್ದ.

ಈ ನಡುವೆ ಮಗನ ನೆನಪು ಚಿರಸ್ಥಾಯಿ ಆಗಿಸಲು ಈ ಕುಟುಂಬ, ಮೃತನ ಸ್ಮರಣಾರ್ಥ ಬೇರೆ ಬೇರೆ ಪ್ರದೇಶ ಹಾಗೂ ಸಂದರ್ಭಗಳಲ್ಲಿ ನೂರಾರು ಕಾರ್ಯಗಳಿಗೆ ತಮ್ಮ ಕೈಲಾದ ಸೇವೆ – ಸಹಕಾರ – ಪ್ರಾಯೋಜಕತ್ವ ವಹಿಸುತ್ತಾ ಬಂದಿತ್ತು. ಅದರ ಹೊರತಾಗಿ ಅಜ್ಜಿ ಕಟ್ಟಾದ ಕ್ರಿಸ್ತಮಿತ್ರ ಸೇವಾಶ್ರಮದಲ್ಲಿರುವ ವೃದ್ಧರು , ಅಸಹಾಯಕರಿಗೆ ಈ ಹಿಂದೆ ಬ್ಲ್ಯಾಂಕೆಟ್ ನೀಡಿದ್ದ ಮಿರಾಶಿ ಕುಟುಂಬ, ಮಳೆಗಾಲದ ಇಂದಿನ ದಿನಗಳಲ್ಲಿ ಅಲ್ಲಿನ ನಿವಾಸಿಗಳಿಗೆ ಅತ್ಯಗತ್ಯವಾಗಿದ್ದ ಹೊಸ ಬಟ್ಟೆಗಳನ್ನು ನೀಡಿ, ಅವರ ಸಂತಸದಲ್ಲಿ ತಮ್ಮ ಮಗನ ಅಗಲುವಿಕೆ ನೋವು ಮರೆಯಲು ಯತ್ನಿಸಿತು.

ಮಳೆಗಾಲ ಎದುರಿಸಲು ಅಗತ್ಯವಾಗಿದ್ದ ಬಟ್ಟೆ ಸಿಕ್ಕ ಸಂತಸದಲ್ಲಿ ಧನ್ಯತೆ ಸೂಚಿಸಿದ ಆಶ್ರಮ ನಿವಾಸಿಗಳು

ಬೆಳಗ್ಗೆ ನಡೆದ ಸರಳ ಸಭಾ ಕಾರ್ಯಕ್ರಮದಲ್ಲಿ ಆರ್ ಟಿ ಮಿರಾಶಿ ಅವರ ಹಿರಿಯ ಮಗಳು ಸಂಧ್ಯಾ ರಮೇಶ ನಾಯಕ ಮಾತನಾಡಿ, ನನ್ನ ಸಹೋದರನನ್ನು ಕಳೆದುಕೊಂಡ ದುಃಖ ಮರೆಯಲು ನಮ್ಮ ಕುಟುಂಬಕ್ಕೆ ಇದೊಂದು ಸುದೈವಾವಕಾಶವಾಗಿದೆ. ಅನಿವಾರ್ಯ ಕಾರಣಗಳಿಂದ ಕುಟುಂಬ ಬಿಟ್ಟು ಇಲ್ಲಿ ಬಂದು ಬಾಳಬೇಕಾದ ನಿಮ್ಮನ್ನೆಲ್ಲ ನೋಡಿದರೆ ಮನಸ್ಸಿಗೆ ಒಂದೆಡೆ ಬೇಸರ ಮತ್ತು ನೋವೆನಿಸುತ್ತದೆ. ಆದರೆ ನಿಮಗೆ ಇನ್ನಷ್ಟು ಸೇವೆ ನೀಡುವ ಭಾಗ್ಯ – ಶಕ್ತಿ ನಮ್ಮ ಕುಟುಂಬಕ್ಕೆ ಹೆಚ್ಚಲಿ ಎಂದರು. ಕಳೆದ ಮೂರು ದಶಕಗಳ ಹಿಂದೆ ತಮ್ಮ ಮಗನನ್ನು ಕಳೆದುಕೊಂಡ ಘಟನೆ ಕುರಿತು ಮಾತನಾಡಿದ ಆರ್ ಟಿ ಮಿರಾಶಿ, ತನ್ನ ಏಕೈಕ ಸುಪುತ್ರನ ಸಾವಿನ ನೋವು ಈಗಲೂ ಅರಗಿಸಿಕೊಳ್ಳಲಾಗುತ್ತಿಲ್ಲ.

ಆದರೆ ನಾನು ಮತ್ತು ನನ್ನ ಹೆಂಡತಿ – ಮಕ್ಕಳು ಹಾಗೂ ಮೊಮ್ಮಕ್ಕಳು ಕೂಡಿ ಮುಂದೆಯೂ ನಿಮ್ಮೆಲ್ಲರಿಗೂ ನಮ್ಮ ಕೈಲಾದ ಸೇವೆ ಸಹಕಾರ ನೀಡುವುದಾಗಿ ಹೇಳುತ್ತಾ ಕ್ಷಣಕಾಲ ಭಾವುಕರಾದರು. ಮಳೆಗಾಲದ ಈ ದಿನಗಳಲ್ಲಿ ತಮಗೆ ಅಗತ್ಯವಾಗಿದ್ದ ಹೊಸ ಬಟ್ಟೆ ನೀಡಿದ್ದಕ್ಕೆ ಸಂತಸಗೊoಡ ಅಶ್ರಮದ ಕೆಲ ನಿವಾಸಿಗಳು, ಮಿರಾಶಿ ಕುಟುಂಬಕ್ಕೆ ಧನ್ಯತೆ ಸಮರ್ಪಿಸಿದರೆ ಅವರ ಸಂತಸ ಕಂಡ ಮಿರಾಶಿ ಕುಟುಂಬದವರು ಮಗನ ಅಗಲುವಿಕೆ ದುಃಖ ಮರೆಯಲೆತ್ನಿಸಿ ತಮ್ಮ ಸೇವೆ ಸಾರ್ಥಕವಾಗುತ್ತಿದೆ ಎಂದು ಸಮಾಧಾನ ಪಟ್ಟರಲ್ಲದೇ ಮಗನ ಪುಣ್ಯ ಸ್ಮರಣೆ ನಿಮಿತ್ತ ಜೂನ್ 16 ರಂದು ಆಶ್ರಮವಾಸಿಗಳಿಗೆ ಭೋಜನ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Share

📢 Stay Updated!

Join our official WhatsApp group to get instant news updates, alerts, and exclusive stories – right on your phone.

💬 Join our WhatsApp Group

Don't Miss

ಜಾನುವಾರು ರಕ್ಷಣೆ: ಗೋ ಶಾಲೆಗೆ ರವಾನಿಸುವ ಮೂಲಕ ಗೀರ್ ಹೋರಿಗಳಿಗೆ ಜೀವದಾನ

ಅಂಕೋಲಾ: ವಧೆ ಉದ್ದೇಶದಿಂದ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ, ಎರಡು ಭಾರೀ ಗಾತ್ರದ ಗೀರ್ ತಳಿಯ ಹೋರಿಗಳಿಗೆ ಕೊನೆಗೂ ಸುರಕ್ಷಿತ ಆಶ್ರಯ ದೊರೆತಂತಿದ್ದು, ಕುಮಟಾ ಉಪವಿಭಾಗಾಧಿಕಾರಿಗಳ ಅನುಮತಿ ಬಳಿಕ ಹೋರಿಗಳನ್ನು ಗೋಶಾಲೆಗೆ ಕಳಿಸಿ, ಮೂಕ...

ಪ್ರಗತಿ ವಿದ್ಯಾಲಯದಲ್ಲಿ ಶಾಲಾ ಪ್ರಾರಂಭೋತ್ಸವ; ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ

ಕುಮಟಾ: ಮೂರೂರಿನ ಪ್ರಗತಿ ವಿದ್ಯಾಲಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಅತ್ಯಂತ ವಿಜೃಂಭಣೆಯಿoದ ನೆರವೇರಿತು. ಉತ್ಸಾಹದಿಂದ ಶಾಲಾ ಅಂಗಳದತ್ತ ಹೆಜ್ಜೆ ಹಾಕಿದ ವಿದ್ಯಾರ್ಥಿಗಳಿಗೆ ಹೂಗುಚ್ಛ ನೀಡಿ, ಪ್ರೀತಿಯಿಂದ ಬರಮಾಡಿಕೊಳ್ಳಲಾಯಿತು. ಸರಸ್ವತಿ...

🌐 📺 Visit Our Media Partner Site

ಉತ್ತರಕನ್ನಡ ಸುದ್ದಿ Update ಪಡೆಯಿರಿ

🔗 Go to Vismaya TV
Related Articles

ಜಾನುವಾರು ರಕ್ಷಣೆ: ಗೋ ಶಾಲೆಗೆ ರವಾನಿಸುವ ಮೂಲಕ ಗೀರ್ ಹೋರಿಗಳಿಗೆ ಜೀವದಾನ

ಅಂಕೋಲಾ: ವಧೆ ಉದ್ದೇಶದಿಂದ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ, ಎರಡು ಭಾರೀ ಗಾತ್ರದ ಗೀರ್ ತಳಿಯ ಹೋರಿಗಳಿಗೆ ಕೊನೆಗೂ...

ಮುರಿನಕಟ್ಟೆ ಪ್ರಕರಣ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಕಾಗೇರಿ ಆಗ್ರಹ

ಭಟ್ಕಳ:ಮುರಿನಕಟ್ಟೆ ವಿಚಾರವು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಹಿಂದೂಗಳ ಭಾವನೆಗಳಿಗೆ ಸಂಬAಧಿಸಿದ ವಿಷಯವಾಗಿದ್ದು, ಕೆಲ ಮತಾಂಧ...

ಅಳ್ವೆಕೋಡಿ ಕಪ್ಪೆಚಿಪ್ಪು ದುರಂತ: ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ ಕಾಗೇರಿ

ಭಟ್ಕಳ: ತಾಲೂಕಿನ ಅಳ್ವೆಕೋಡಿಯ ಕಪ್ಪೆಚಿಪ್ಪು ದುರಂತದಲ್ಲಿ ಸಾವನ್ನಪ್ಪಿದ ಕುಟುಂಬದವರನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ...

ಜಿಲ್ಲೆಯ ಆರೋಗ್ಯ ಸೇವೆಗೆ ಐತಿಹಾಸಿಕ ಹೆಜ್ಜೆ : ಶಾಸಕ ಸತೀಶ್ ಸೈಲ್

ಅಂಕೋಲಾ : ಜನರಿಗೆ ಉನ್ನತ ಮಟ್ಟದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಕಾರವಾರದಲ್ಲಿ 100 ಕೋಟಿ...

ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಸಹಾಯಕ ಶಿಕ್ಷಕರು ಬೇಕಾಗಿದ್ದಾರೆ

ಕುಮಟಾ : ಅಂಕೋಲಾದ ಕೆನರಾ ವೆಲ್ಫೇರ್ ಟ್ರಸ್ಟ್ ನ ಕುಮಟಾ ಧಾರೇಶ್ವರದ ದಿನಕರ ಇಂಗ್ಲಿಷ್ ಮೀಡಿಯಂ...

ಅಲಂಕಾರ ಜ್ಯುವೆಲ್ಲರ್ಸ್ : ಅಕ್ಷಯ ತೃತೀಯ ವಿಶೇಷ ಆಫರ್

ಸುವರ್ಣ ಕ್ಷಣವನ್ನು ಇನ್ನಷ್ಟು ವಿಶೇಷವಾಗಿಸಿ : ಈ ಶುಭ ಅಕ್ಷಯ ತೃತೀಯದ ಪ್ರಯುಕ್ತ ಚಿನ್ನ ಮತ್ತು...

ಭಟ್ಕಳದಲ್ಲಿ 14 ಜಾನುವಾರಗಳ ರಕ್ಷಣೆ : ಇಬ್ಬರ ವಿರುದ್ಧ ಪ್ರಕರಣ ದಾಖಲು

ಭಟ್ಕಳ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಇಬ್ಬರ ವಿರುದ್ಧ ಭಟ್ಕಳ ಪಟ್ಟಣ ಪೊಲೀಸ್...

ಮಹಾಶಿವರಾತ್ರಿ ಪುಣ್ಯಕಾಲದಲ್ಲಿ ಕಣಕಣೇಶ್ವರ ದೇವರ ನೂತನ ಭವ್ಯ ದೇವಸ್ಥಾನ ಲೋಕಾರ್ಪಣೆ :ಶಿಖರ ಕಲಶ ಪ್ರತಿಷ್ಠೆ – ಅಷ್ಟಬಂಧ ಸಮೇತ ನೂತನ ಶಿವಲಿಂಗ ಪ್ರತಿಷ್ಠಾ ಮಹೋತ್ಸವ

ಅಂಕೋಲಾ: ಪಟ್ಟಣದ ಕಾರವಾರ ರಸ್ತೆಯಲ್ಲಿರುವ ಪುರಾತನ ಪ್ರಸಿದ್ಧ ಶ್ರೀ ಕಣಕಣೇಶ್ವರ ದೇವಾಲಯವು ಮಹಾಶಿವರಾತ್ರಿ ಪುಣ್ಯಸಂದರ್ಭದಲ್ಲಿ ನೂತನ...