Big News

ವಿಶ್ವಜಲ ದಿನ ಆಚರಣೆ: ಸಾರ್ವಜನಿಕರಿಗೆ ಕಾನೂನು ಅರಿವು ಕಾರ್ಯಕ್ರಮ

Share

ಹೊನ್ನಾವರ: ವಿಶ್ವ ಜಲ ದಿನ” ಕಾನೂನು ಅರಿವು ಕಾರ್ಯಕ್ರಮ ನಡೆಯಿತು. ಗಿಡಕ್ಕೆ ನೀರೆರಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ, ಜೆ.ಎಂ.ಎಫ್.ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಹೊನ್ನಾವರ ಅಧ್ಯಕ್ಷರಾದ ಬಿ.ಸಿ. ಚಂದ್ರಶೇಖರ ಮಾತನಾಡಿ, ಇಂದು ಮನುಷ್ಯನ ಅತಿಯಾದ ಸ್ವಾರ್ಥದಿಂದ ನದಿ ಮಲೀನವಾಗುತ್ತಿದೆ. ಸ್ವಚ್ಚ ನೀರು ಸಿಗುತ್ತಿಲ್ಲ. ಮಲೆನಾಡು ಭಾಗವು ಬಯಲುಸೀಮೆಯ ತರಹವೇ ನೀರಿಗಾಗಿ ಹಾಹಾಕಾರ ಆಗುತ್ತಿದೆ. ನೀರಿನ ಸಂರಕ್ಷಣೆ ಸರ್ಕಾರದ ಕೆಲಸ ಮಾತ್ರವಲ್ಲ, ಸಂಘ-ಸoಸ್ಥೆಗಳು, ನಾಗರೀಕರು ಕೈಜೋಡಿಸಬೇಕು ಎಂದರು.

‘ಜಲ ಸಂರಕ್ಷಣೆಯ ಪ್ರಾಮುಖ್ಯತೆ’ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸಹಾಯಕ ಸರ್ಕಾರಿ ಅಭಿಯೋಜಕಿ ಸಂಪದಾ ಗುನಗಾ ಮಾತನಾಡಿ, ಜಲ ಎನ್ನುವುದು ನಮ್ಮ ಜೀವಕ್ಕೆ,ಜೀವನಕ್ಕೆ ಎಷ್ಟು ಮಹತ್ವ ಎನ್ನುವುದು ಎಲ್ಲರು ಅರಿಯಬೇಕು. ನೀರನ್ನು ಕಡೆಗಣಿಸುತ್ತಿದ್ದೇವೆ.ಅದರ ಪ್ರಾಮುಖ್ಯತೆ ಮರೆಯುತ್ತಿದ್ದೆವೆ.ನಮಗೆ ಕೇವಲ ಶೇಕಡಾ 3ರಷ್ಟು ಮಾತ್ರ ಶುದ್ದ ಕುಡಿಯುವ ನೀರು ಸಿಗುತ್ತದೆ ಎಂದರು.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯನಿರ್ವಾಹಕ ಅಬಿಯಂತರರಾದ ಶಿವರಾಮ ಎಸ್ ನಾಯ್ಕ ಮಾತನಾಡಿ, 1993 ರಲ್ಲಿ ವಿಶ್ವಸಂಸ್ಥೆ ವಿಶ್ವ ಜಲ ದಿನವನ್ನು ಆಚರಿಸಬೇಕೆಂದು ಹೇಳಿದೆ. ಹಿಮನದಿಗಳ ರಕ್ಷಣೆ ಮಾಡದಿದ್ದರೆ ಮುಂದಿನ ಪೀಳಿಗೆಗೆ ನೀರಿಲ್ಲದಂತೆ ಆಗುತ್ತದೆ. ಆದ್ದರಿಂದ ಹಿಮಕರಗುವಿಕೆ ತಡೆಗಟ್ಟುವುದು ಅಗತ್ಯವಿದೆ ಎಂದರು.

ನೀರು ಸರಬರಾಜು ಮಂಡಳಿ ಹಾಗೂ ಒಳಚರಂಡಿ ಯೋಜನೆಯ ಹೊನ್ನಾವರ ವಿಭಾಗದ ಮುಖ್ಯಕಾರ್ಯನಿರ್ವಾಹಕ ಇಂಜಿನಿಯರ್ ಅಜಯ್ ಪ್ರಭು ಅವರು ಶರಾವತಿ ಕುಡಿಯುವ ನೀರಿನ ಯೋಜನೆ ಕುರಿತು ಸ್ಕ್ರಿನ್ ಮೂಲಕ ವಿಡಿಯೋ ಪ್ರದರ್ಶಿಸಿ ಮಾಹಿತಿ ನೀಡಿದರು. ವೇದಿಕೆಯಲ್ಲಿ ಜೆಎಮ್ ಎಫ್ ಸಿ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶರಾದ ಈರಣ್ಣ ಹುಣಸಿಕಟ್ಟಿ, ವಕೀಲರ ಸಂಘದ ಕಾರ್ಯದರ್ಶಿ ಉದಯ ಬಿ.ನಾಯ್ಕ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎಮ್.ಎನ್ ಖಾನ್,ವಕೀಲರಾದ ಎಮ್.ಎನ್ ಸುಬ್ರಮಣ್ಯ ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ

Share

📢 Stay Updated!

Join our official WhatsApp group to get instant news updates, alerts, and exclusive stories – right on your phone.

💬 Join our WhatsApp Group

Don't Miss

ಭಟ್ಕಳದಲ್ಲಿ ಬೆಂಕಿ ಅನಾಹುತ

ಭಟ್ಕಳ: ತಾಲೂಕಿನ ಜಾಲಿ ಕ್ರಾಸ್‌ ಬಳಿಭೀಕರ ಬೆಂಕಿ ಅವಘಡ ಸಂಭವಿಸಿ, ಇಪ್ತಿಕಾರ್ ಮೋಹಿದೀನ್ ಮಾಲಕತ್ವದ “ತಾಸಿನ್ ಫ್ರೂಟ್ಸ್ & ವೆಜಿಟೇಬಲ್ಸ್” ಹೋಲ್‌ಸೇಲ್ ಅಂಗಡಿ ಭಸ್ಮವಾದ ಘಟನೆ ನಡೆದಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ...

ಕ್ಷುಲ್ಲಕ ಕಾರಣಕ್ಕೆ ಜಗಳ: ವ್ಯಕ್ತಿಗೆ ಇರಿತ

ಭಟ್ಕಳ: ವಾರದ ಸಂತೆಯಲ್ಲಿ ವ್ಯಾಪಾರಿಯೊಬ್ಬರ ಹತ್ತಿರ ಕೆಲಸ ಮಾಡುತ್ತಿದ್ದ ಇಬ್ಬರು ಕೆಲಸಗಾರರ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಮಾತಿಗೆ ಮಾತು ಬೆಳೆದ ಚೂ-ರಿ ಇರಿತದಲ್ಲಿ ಕೊನೆಗೊಂಡ ಘಟನೆ ನಡೆದಿದೆ. ಹಾನಗಲ್ ಮೂಲದ ಹಾಲಿ...

📰 ನಿಮ್ಮ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರಿನ ಸಭೆ, ಸಮಾರಂಭ, ಪ್ರತಿಭಟನೆ ಮತ್ತು ವಿಶೇಷ ವರದಿಗಳನ್ನು ನಮಗೆ ಕಳುಹಿಸಿ.

✉️ Gmail: [email protected]

📲 WhatsApp ಮೂಲಕ ಕಳುಹಿಸಿ ✉️ Gmail ಮೂಲಕ ಕಳುಹಿಸಿ

ಸರ್ಕಾರಿ ಇಲಾಖೆಯ ಕಟ್ಟಡದ ಇಕ್ಕಟ್ಟಾದ ಗೋಡೆಗಳ ಮಧ್ಯೆ ಪತ್ತೆಯಾದ ಸೂಟ್ ಕೇಸ್ ! ? ಕೊನೆಗೂ ಸೂಟ್ಕೇಸ್ ರಹಸ್ಯ

ಅಂಕೋಲಾ, ಆಗಸ್ಟ್ 26 : ಸರ್ಕಾರಿ ಇಲಾಖೆ ಒಂದರ ಕಟ್ಟಡದ ಗೋಡೆಗಳ ನಡುವಿನ ಇಕ್ಕಟ್ಟಾದ ಸ್ಥಳದಲ್ಲಿ ಯಾರೋ ತಂದಿಟ್ಟು ಹೋಗಿದ್ದರೆನ್ನಲಾದ ಸೂಟ್ ಕೇಸ್ ಒಂದು ಪಟ್ಟಣ ವ್ಯಾಪ್ತಿಯಲ್ಲಿ ಕೆಲಕಾಲ ಆತಂಕ ಸೃಷ್ಟಿಸಿದ್ದಲ್ಲದೇ,ಸೂಟ್ಕೇಸ್...

ಗಣಪತಿಗೆ ಜೀವ ಕಳೆ ತುಂಬುವ ಗಂಗಾವಳಿಯ ಶರತ್ ನಾಯ್ಕ್

ಕುಮಟಾ, ಆಗಸ್ಟ್ 26: ಪ್ರತಿಭೆ ಯಾರ ಸೊತ್ತಲ್ಲ. ಅದು ಸಾಧಕನ ಸ್ವತ್ತು ಎನ್ನುವ ಮಾತಿಗೆ ಅನುಗುಣವಾಗಿ ಇರುವವರು ಕುಮಟಾ ತಾಲೂಕಿನ ಗಂಗಾವಳಿಯ ಹೆಮ್ಮೆಯ ಪ್ರತಿಭೆ ಶರತ್ ನಾಯ್ಕ್ ಅವರು ಈಗಾಗಲೇ ಬೃಹತ್...

ವಿಶ್ವಾಸದ ಮತ್ತೊಂದು ಹೆಸರೇ ಅಲಂಕಾರ ಜ್ಯುವೆಲರ್ಸ್: ಅಂಕೋಲಾದಲ್ಲಿ ಭವ್ಯ ಶುಭಾರಂಭ

ಅಂಕೋಲಾ, ಆಗಸ್ಟ್ 24: ಪಟ್ಟಣದ ಬಂಡಿಬಜಾರ ಮುಖ್ಯ ರಸ್ತೆಯಂಚಿಗೆ ನವೀಕೃತಗೊಂಡಿರುವ ಭವ್ಯವಾದ ಕಟ್ಟಡದಲ್ಲಿ ಅಲಂಕಾರ ಜ್ಯುವೆಲರ್ಸ್ ನ ಬೃಹತ್ತ ಮಳಿಗೆ ಅಗಸ್ಟ್ 24 ರ ರವಿವಾರ ಶುಭ ಮುಹೂರ್ತದಲ್ಲಿ ಗ್ರಾಹಕರ ಸೇವೆಗೆ...

ಭಟ್ಕಳದಲ್ಲಿ ಬೆಂಕಿ ಅನಾಹುತ

ಭಟ್ಕಳ: ತಾಲೂಕಿನ ಜಾಲಿ ಕ್ರಾಸ್‌ ಬಳಿಭೀಕರ ಬೆಂಕಿ ಅವಘಡ ಸಂಭವಿಸಿ, ಇಪ್ತಿಕಾರ್ ಮೋಹಿದೀನ್ ಮಾಲಕತ್ವದ “ತಾಸಿನ್ ಫ್ರೂಟ್ಸ್ & ವೆಜಿಟೇಬಲ್ಸ್” ಹೋಲ್‌ಸೇಲ್ ಅಂಗಡಿ ಭಸ್ಮವಾದ ಘಟನೆ ನಡೆದಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ...

🌐 📺 Visit Our Media Partner Site

ಉತ್ತರಕನ್ನಡ ಸುದ್ದಿ Update ಪಡೆಯಿರಿ

🔗 Go to Vismaya TV
Current date Wednesday , 27 August 2025
Related Articles

ಸರ್ಕಾರಿ ಇಲಾಖೆಯ ಕಟ್ಟಡದ ಇಕ್ಕಟ್ಟಾದ ಗೋಡೆಗಳ ಮಧ್ಯೆ ಪತ್ತೆಯಾದ ಸೂಟ್ ಕೇಸ್ ! ? ಕೊನೆಗೂ ಸೂಟ್ಕೇಸ್ ರಹಸ್ಯ

ಅಂಕೋಲಾ, ಆಗಸ್ಟ್ 26 : ಸರ್ಕಾರಿ ಇಲಾಖೆ ಒಂದರ ಕಟ್ಟಡದ ಗೋಡೆಗಳ ನಡುವಿನ ಇಕ್ಕಟ್ಟಾದ ಸ್ಥಳದಲ್ಲಿ...

ಧರ್ಮಸ್ಥಳದ ವಿರುದ್ಧ ಅಪಪ್ರಚಾರ: ಭಟ್ಕಳದಿಂದ ರಾಜ್ಯಪಾಲರಿಗೆ ಮನವಿ

ಭಟ್ಕಳ, ಆಗಸ್ಟ್ 22: ಹಿಂದೂಗಳ ಶ್ರದ್ಧಾ ಕೇಂದ್ರವಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರವನ್ನು...

ಕುಮಟಾದಲ್ಲಿ ಕೊಂಕಣಿ ಮಾನ್ಯತಾ ದಿವಸ್ ಆಚರಣೆ

ಕುಮಟಾ: ದಿನಾಂಕ 20-08-2025 ರಂದು ರೋಟರಿ ಹಾಲ್ ಕುಮಟಾ ದಲ್ಲಿ ಕೊಂಕಣಿ ಮಾನ್ಯತಾ ದಿವಸ್ ಆಚರಣೆ...

ಸ್ಥಳೀಯ ಮೀನುಗಾರರಿಗೆ,ರೈತರಿಗೆ ತಮ್ಮ ಅಹವಾಲು ಸಲ್ಲಿಸಲು ಮುಕ್ತ ಅವಕಾಶ ಕೊಡಿ: ಜಿಲ್ಲಾಧಿಕಾರಿಗಳಿಗೆ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಮನವಿ

ಕಾರವಾರ : ಅಂಕೋಲಾ ತಾಲೂಕಿನ ಕೇಣಿಯಲ್ಲಿ ಖಾಸಗಿ ಮೂಲದ ಗ್ರೀನ್ ಫೀಲ್ಡ್ ಬಂದರು ನಿರ್ಮಾಣಕ್ಕೆ ರಾಷ್ಟ್ರೀಯ...