ಕಾರವಾರ: ಗ್ರಾಮೀಣ ಆಡಳಿತ ವ್ಯವಸ್ಥೆಗೆ ಬಲ ತುಂಬುವ ಹೆಜ್ಜೆಯಾಗಿ ಅಮದಳ್ಳಿ ಗ್ರಾಮ ಪಂಚಾಯತ್ನ ನೂತನ ಸಭಾಭವನವನ್ನು ಶಾಸಕ ಸತೀಶ ಕೃಷ್ಣ ಸೈಲ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅಮದಳ್ಳಿ ಗ್ರಾಮಕ್ಕೆ ಇದುವರೆಗೆ ಸುಮಾರು 12ಕೋಟಿ ರೂ.ಗಳ ಅನುದಾನ ಒದಗಿಸಲಾಗಿದ್ದು, ಪಂಚಾಯತ್ ವ್ಯಾಪ್ತಿಯಲ್ಲಿ ಮೂಲಸೌಕರ್ಯ, ಸಮುದಾಯ ಕಟ್ಟಡಗಳು ಮತ್ತು ಜನೋಪಯೋಗಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಾಗಿದೆ ಎಂದು ಹೇಳಿದರು.
“ರಾಜಕೀಯ ಕೇವಲ ಚುನಾವಣೆಯವರೆಗೆ ಮಾತ್ರ ಸೀಮಿತವಾಗಬೇಕು. ಚುನಾವಣೆ ಮುಗಿದ ಬಳಿಕ ಪಕ್ಷಾತೀತವಾಗಿ ಎಲ್ಲರೂ ಒಂದಾಗಿ ಗ್ರಾಮದ ಅಭಿವೃದ್ಧಿಗೆ ಕೈಜೋಡಿಸಬೇಕು. ಬಲಿಷ್ಠ ಪಂಚಾಯತ್ ವ್ಯವಸ್ಥೆಯೇ ಶಾಶ್ವತ ಅಭಿವೃದ್ಧಿಗೆ ಅಡಿಪಾಯ ಎಂದು ಅವರು ಸಂದೇಶ ನೀಡಿದರು.
ಅಮದಳ್ಳಿ ಗ್ರಾಮ ದೇವರ ಗ್ರಾಮವಾಗಿದ್ದು, ಇಲ್ಲಿನ ಪುರಾತನ ಕೆರೆ ಮತ್ತಿತರ ಅಭಿವೃದ್ಧಿಯೂ ನಮ್ಮ ಆದ್ಯ ಕರ್ತವ್ಯವಾಗಿದೆ. ನನ್ನ ಪ್ರೀತಿಯ ಗ್ರಾಪಂ ಗಳಲ್ಲಿ ಒಂದಾಗಿರುವ ಅಮದಳ್ಳಿ ಗ್ರಾಮ ಮತ್ತಷ್ಟು ಅಭಿವೃದ್ಧಿಯ ದಾರಿಯಲ್ಲಿ ಸಾಗಬೇಕು ಎಂಬುದು ತಮ್ಮ ನಿರಂತರ ಆಶಯ. ಇಲ್ಲಿನ ಹಿರಿಯರು ಎಲ್ಲ ಜನಪ್ರತಿನಿಧಿಗಳು,ನಾಗರಿಕರು ಸಹ ಗ್ರಾಮದ ಅಭಿವೃದ್ಧಿಗೆ ಸಹಕರಿಸಿ ಕೈಜೋಡಿಸುವ ಮನೋಭಾವನೆ ಹೊಂದಿದ್ದಾರೆ ಎಂದರು.
ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷ ಪುರುಷೋತ್ತಮ ಗೌಡ ಅಧ್ಯಕ್ಯತೆ ವಹಿಸಿ ಮಾತನಾಡಿ,ಶಾಸಕರ ಜನಪದ ಕಾಳಜಿ,ತಮ್ಮ ಗ್ರಾಮ ಪಂಚಾಯಿತಿಗೆ ನೀಡಿದ ಬಹುಕೋಟಿ ಅನುದಾನ ಮತ್ತಿತರ ವಿಚಾರಗಳನ್ನು ಪ್ರಸ್ತಾಪಿಸಿ,ತಮ್ಮ ಗ್ರಾಮ ಪಂಚಾಯತ ಜನರ ಹಾಗೂ ಮುಂಬರುವ ಜನಪ್ರತಿನಿಧಿಗಳ ಸಭೆ ಮತ್ತಿತರ ಕಾರ್ಯಗಳಿಗೆ ಅನುಕೂಲ ವಾಗುವಂತೆ ಸಭಾಭವನ ನಿರ್ಮಿಸಲಾಗಿದೆ ಎಂದರು . ಪಿಡಿಒ ತೃಪ್ತಿ ನಾಯ್ಕ, ಪಂಚಾಯತ್ ಸದಸ್ಯರು–ಸಿಬ್ಬಂದಿ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಾಯಿ ಗಾಂವಕರ್, ಊರಿನ ಹಿರಿಯರು ಮತ್ತು ಗ್ರಾಮಸ್ಥರಿದ್ದರು.
ಕೆಲಸದ ಸೇರು, ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ,ತಮ್ಮ ಕಾಲಾವಧಿಯಲ್ಲಿ ವಾರ್ಡಿನಲ್ಲಿ ಆದ ಅಭಿವೃದ್ಧಿ,ಶಾಸಕರ ಸ್ಪಂದನೆ ಕುರಿತು ಅಭಿನಂದನೆಯ ಮಾತನಾಡಿದರು.ಪಂಚಾಯತ ಕಚೇರಿ ಒಳಾಂಗಣ ವಿನ್ಯಾಸದ ಕುರಿತು ಶಾಸಕರು ,ಮೆಚ್ಚುಗೆ ಸೂಚಿಸಿದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ













