ಅಂಕೋಲಾದಲ್ಲಿ ಭೂಮಿತಾಯಿ ಹೊಸ್ತಿನ ಹಬ್ಬದ ಭತ್ತದ ತೆನೆ ಪೂಜೆ
Big News

ಭೂಮಿತಾಯಿಯ ಹೊಸ್ತಿನ ಹಬ್ಬ : ಕೃಷಿ ಮತ್ತು ಶ್ರಮ ಪ್ರಧಾನ ಸಂಸ್ಕೃತಿಯ ಪ್ರತೀಕ

Share

ಅಂಕೋಲಾ: ಭೂಮ್ತಾಯಿ ಎಂದೇ ಪ್ರಸಿದ್ಧಿ ಪಡೆದಿರುವ ತಾಲೂಕಿನ ಹಾಗೂ ಇತರಡೆಯ ಅಸಂಖ್ಯ ಭಕ್ತರ ಪಾಲಿನ ಶಕ್ತಿ ದೇವತೆ, ಶ್ರೀಶಾಂತಾದುರ್ಗಾ ದೇವಿಯ ಹೊಸ್ತಿನ (ಹೊಸತು) ಹಬ್ಬ ಸಕಲ ಧಾರ್ಮಿಕ ಮತ್ತು ಸಾಂಪ್ರದಾಯಿಕವಾಗಿ ವಿಧಿ ವಿಧಾನಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.

ಕೃಷಿ ಮತ್ತು ಶ್ರಮ ಪ್ರಧಾನ ಸಂಸ್ಕೃತಿಯ ಪ್ರತೀಕ

ಕೃಷಿ ಮತ್ತು ಶ್ರಮ ಪ್ರಧಾನ ಸಂಸ್ಕೃತಿಯ ಈ ತಾಲೂಕಿನಲ್ಲಿ ಶ್ರೀ ಶಾಂತಾದುರ್ಗಾ ದೇವಿಯನ್ನು ಭೂಮಿ ದೇವತೆ, ಭೂಮ್ತಾಯಿ ಎಂದೇ ಭಕ್ತರು ಪೂಜಿಸಿ ಆರಾಧಿಸಿಕೊಂಡು, ತಾಯಿಯನ್ನೇ ನಂಬಿ ಬಾಳಿ ಬದುಕುತ್ತಿದ್ದಾರೆ. ಕರಾವಳಿಯ ಇತರ ಅನೇಕ ಕಡೆಗಳಲ್ಲಿ ನವರಾತ್ರಿ ಸಂದರ್ಭದಲ್ಲಿ ಹೊಸ್ತಿನ ಹಬ್ಬದ ಹಬ್ಬ ಆಚರಿಸಲಾಗುತ್ತದೆಯಾದರೂ ಶ್ರೀಶಾಂತಾದುರ್ಗಾ ದೇವಿಯ ಹೊಸ್ತಿನ ಹಬ್ಬ ಪೂರ್ವಾ ಮಳೆ ನಕ್ಷತ್ರದಲ್ಲಿ ಆಚರಿಸುತ್ತ ಬರಲಾಗುತ್ತಿದೆ.

ಶ್ರೀದೇವಿಯ ಕಳಸದ ಮೆರವಣಿಗೆ

ಹೊಸ್ತಿನ ಹಬ್ಬದ ಪ್ರಯುಕ್ತ ಶ್ರೀದೇವಿಯ ಕಳಸದ ಮೆರವಣಿಗೆ ಕುಂಬಾರಕೇರಿಯ ಕಳಸ ದೇವಾಲಯದಿಂದ ಪಂಚವಾದ್ಯ ,ಜಾಗಟೆ ಮೇಳದೊಂದಿಗೆ, ದಾರಿ ಮಧ್ಯೆ ಅಲ್ಲಲ್ಲಿ ಭಕ್ತರ ಆರತಿ, ಪೂಜೆ ಸ್ವೀಕರಿಸುತ್ತ ಶ್ರೀಶಾಂತಾದುರ್ಗಾ ದೇವಾಲಯಕ್ಕೆ ಆಗಮಿಸಿತು.
ನಂತರ ದೇವಸ್ಥಾನಕ್ಕೆ ಸಂಬಧಿಸಿದ ಭತ್ತದ ಗದ್ದೆಗೆ ತೆರಳಿ ಅಲ್ಲಿ ಭತ್ತದ ಪೈರಿಗೆ ಪೂಜೆ ಸಲ್ಲಿಸಿ, ತೆನೆಗಳನ್ನು ಕೊಯ್ದು ತಂದು ದೇವಾಲಯದಲ್ಲಿ ಕದಿರು ಹಬ್ಬ ಆಚರಿಸಲಾಯಿತು.

ಪ್ರಸಾದ ರೂಪದಲ್ಲಿ ಭತ್ತದ ಪೈರು ವಿತರಣೆ

ದೇಗುಲದಲ್ಲಿ ಪೂಜಿಸಿದ ಭತ್ತದ ಪೈರುಗಳನ್ನು ಪ್ರಸಾದ ರೂಪದಲ್ಲಿ ಪಡೆದುಕೊಂಡ ನೂರಾರು ಭಕ್ತರು,ತಮ್ಮ ತಮ್ಮ ಮನೆಯ ಪ್ರಧಾನ ಬಾಗಿಲು,ದೇವರ ಕೋಣೆ,ಕೃಷಿ ಯಂತ್ರಗಳು,ವಾಹನ ಮತ್ತಿತರಡೆ ಕಟ್ಟುವ ಮೂಲಕ ಧನ್ಯತೆ ಮೆರೆದರಲ್ಲದೇ,ಭವಿಷ್ಯದ ಒಳಿತಿಗೆ ಪ್ರಾರ್ಥಿಸಿದರು.

ಶ್ರೀದೇವಿಯ ದೇವಸ್ಥಾನಕ್ಕೆ ಸಂಬಂಧಿಸಿದ ಗುನಗರು, ಬಿಡ ಗುನಗರು, ಕಟಗಿದಾರರು, ಮೊಕ್ತೆಸರರು, ಅರ್ಚಕರು,ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷರು,ಪದಾಧಿಕಾರಿಗಳು, ಸ್ವಯಂ ಸೇವಕರು,ಹಬ್ಬದ ಆಚರಣೆಗೆ ಸಂಬಂಧಿಸಿದ ಇತರೆ ಪ್ರಮುಖರು ಹಾಗೂ ಭಕ್ತ ಜನರು ಪಾಲ್ಗೊಂಡಿದ್ದರು. ಹೊಸ್ತು ಹಬ್ಬದಂದು ಹೊಸ ಬೆಳೆ ಪೂಜೆ ಮತ್ತು ಅದರ ಪ್ರಸಾದವೂ ಹೊಸತನಕ್ಕೆ ಪೂರಕ ಸಂಪ್ರದಾಯದಂತಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Share

📢 Stay Updated!

Join our official WhatsApp group to get instant news updates, alerts, and exclusive stories – right on your phone.

💬 Join our WhatsApp Group

Don't Miss

ಹೊಟೇಲ್ ಮೇಲೆ ದಾಳಿ: ಹೆಗ್ಗಣಗಳ ರಾಶಿ, ಹಾಳಾದ ಎಣ್ಣೆ, ಅಶುಚಿತ್ವ ನೋಡಿ ಅಧಿಕಾರಿಗಳೇ ದಂಗು

ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಬಗ್ಗೆ ದೂರು ಕೇಳಿ ಬಂದಿದ್ದ ಹಿನ್ನೆಲೆಯಲ್ಲಿ ಪಟ್ಟಣ ವ್ಯಾಪ್ತಿಯ ಸಾಮಾನ್ಯ ಹೋಟೆಲ್ ಒಂದರ ಮೇಲೆ ದಾಳಿ ಮಾಡಿ,ಸ್ಥಳ ಪರಿಶೀಲಿಸಿದ ವೇಳೆ ವೈದ್ಯಾಧಿಕಾರಿಗಳು ಮತ್ತು ತಂಡದವರು ಆಡಿದ...

ಅಕ್ರಮ ಗೋಸಾಗಾಟ: 7 ಲಕ್ಷ ಮೌಲ್ಯದ ಜಾನುವಾರು ವಶಕ್ಕೆ

ಭಟ್ಕಳ: ತಾಲೂಕಿನಲ್ಲಿ ಅಕ್ರಮ ಗೋಸಾಗಾಟ ಪ್ರಕರಣ ಪದೇ ಪದೇ ಸದ್ದು ಮಾಡುತ್ತಿದ್ದು, ಬೆಳಗಿನ ಜಾವ ಗ್ರಾಮೀಣ ಠಾಣಾ ಪೋಲಿಸರು ಅಕ್ರಮ ಗೋಸಾಗಾಟದ ವಾಹನದ ಮೇಲೆ ದಾಳಿ ನಡೆಸಿ ಬಾರಿ ಮೌಲ್ಯದ ಜಾನುವಾರುಗಳನ್ನು...

🌐 📺 Visit Our Media Partner Site

ಉತ್ತರಕನ್ನಡ ಸುದ್ದಿ Update ಪಡೆಯಿರಿ

🔗 Go to Vismaya TV
Related Articles

ಮೂರೂರಿನ ಪ್ರಗತಿ ವಿದ್ಯಾಲಯದಲ್ಲಿ ಶಿಕ್ಷಕ ದಿನಾಚರಣೆ: ಶಿಕ್ಷಕ ರಾಷ್ಟ್ರ ರಕ್ಷಕ ಕಾರ್ಯಕ್ರಮ

ಕುಮಟಾ: ತಾಯಿ ಮಗುವಿಗೆ ಜನ್ಮ ನೀಡುತ್ತಾಳೆ, ಶಿಕ್ಷಕ ಆ ಮಗುವಿಗೆ ಜ್ಞಾನ ನೀಡಿ ಕಣ್ತೆರೆಯಿಸಿ ಒಳ್ಳೆಯ...

ಅಕ್ರಮ ಗೋಸಾಗಾಟ: 7 ಲಕ್ಷ ಮೌಲ್ಯದ ಜಾನುವಾರು ವಶಕ್ಕೆ

ಭಟ್ಕಳ: ತಾಲೂಕಿನಲ್ಲಿ ಅಕ್ರಮ ಗೋಸಾಗಾಟ ಪ್ರಕರಣ ಪದೇ ಪದೇ ಸದ್ದು ಮಾಡುತ್ತಿದ್ದು, ಬೆಳಗಿನ ಜಾವ ಗ್ರಾಮೀಣ...

ಕುಮಟಾ ಪೊಲೀಸ್ ಗಣೇಶೋತ್ಸವ ಸಂಭ್ರಮ: ನೂರಾರು ಭಕ್ತರಿಂದ ಪ್ರಸಾದ ಸ್ವೀಕಾರ

ಕುಮಟಾ: ಪಟ್ಟಣದ ಎಲ್ಲಡೆ ಸಂಭ್ರಮದಿoದ ಗಣೇಶ ಚತುರ್ಥಿಯನ್ನು ಆಚರಿಸಲಾಗಿದ್ದು ಕುಮಟಾ ಪೊಲೀಸ್ ಠಾಣೆಯ ಆರಾಧ್ಯ ದೇವರು...

ಹೆದ್ದಾರಿ ಹೊಂಡದಲ್ಲಿ ಲಾರಿ ಸಿಲುಕಿ ಸಂಚಾರ ಅಸ್ತವ್ಯಸ್ತ: ಈ ನರಕ ಯಾತನೆಗೆ ಕೊನೆ ಎಂದು?

ಅಂಕೋಲಾ, ಸೆಪ್ಟೆಂಬರ್ 3: ಹೊಂಡ ಗುಂಡಿಗಳ ಹೆದ್ದಾರಿ, ಸಾವು ನೋವು ಹಾಗೂ ಅಪಘಾತ ಮತ್ತು ಅವಾಂತರಗಳಿಗೆ...

ನಾಕುತಂತಿ ಬದುಕಿನ ಸಮನ್ವಯತೆಯ ಸಾರ ಹೊಂದಿದೆ: ಸಾಹಿತಿ ಪುಟ್ಟ ಕುಲಕರ್ಣಿ

ಕುಮಟಾ: ಬದುಕಿಗೂ ಮತ್ತು ಸಂಸ್ಕೃತಿಗೂ ಇರುವ ಅವಿನಾಭಾವ ಸಂಬಂಧ ಗಟ್ಟಿಯಾದಗ ಮಾತ್ರ ಬಾಳು ಸುಂದರವಾಗುತ್ತದೆ ....

ಮನೆಯ ಮೆಟ್ಟಿಲುಗಳ ಮೇಲೆ ಚಿರತೆ ಓಡಾಟ : ಗ್ರಾಮಸ್ಥರಲ್ಲಿ ಆತಂಕ

ಸಿದ್ದಾಪುರ: ಚಿರತೆಯೊಂದು ರಾತ್ರಿಯ ವೇಳೆ ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಓಡಾಡಿ ಮನೆ ಮಂದಿಯವರೆಲ್ಲ ಆತಂಕಗೊoಡ ಘಟನೆ...

ರಾಜ್ಯ ಹೆದ್ದಾರಿಯಲ್ಲಿ ಹೊಂಡ–ಗುಂಡಿಗಳ ರಸ್ತೆಗೆ ಜನಾಕ್ರೋಶ: ಹೊಂಡದಲ್ಲಿ ಗಿಡ ನೆಟ್ಟ ಸಾರ್ವಜನಿಕರು!

ಅಂಕೋಲಾ: ಪ್ರಮುಖ ರಾಜ್ಯ ಹೆದ್ದಾರಿಯೊಂದರಲ್ಲಿ ಹೊಂಡ ಗುಂಡಿಗಳಾಗಿ ರಸ್ತೆ ಹದಗೆಟ್ಟು, ಸಂಚಾರ ವ್ಯವಸ್ಥೆಗೆ ತೀವೃ ತೊಂದರೆಯಾಗುತ್ತಿದೆ....

ಭಾಗೀರಥಿ ಹೆಗಡೆ ನಿಧನ: ಗಣ್ಯರ ಸಂತಾಪ

ಹೊನ್ನಾವರ, ಆಗಸ್ಟ್ 28: ಹೊಸಾಕುಳಿ ಗ್ರಾಮದ ಮೂಲದವರಾದ ಹಾಗೂ ಜಲವಳ್ಳಿಯ ಮರಬಳ್ಳಿ ಜಮೀನಿನಲ್ಲಿ ವಾಸವಾಗಿದ್ದ ಶ್ರೀಮತಿ...