ಆರ್‌ಸಿಬಿ ವಿಜಯೋತ್ಸವ ಮಾದರಿಯ ಗಣೇಶ ಮೂರ್ತಿ – ಅವರ್ಸಾ ಸಾರ್ವಜನಿಕ ಗಣೇಶೋತ್ಸವ 2025
Important

ಕಪ್ ಎತ್ತಿ ಹಿಡಿದ ಗಣಪತಿ: ಗಮನ ಸೆಳೆದ ಆರ್‌ಸಿಬಿ ವಿಜಯೋತ್ಸವ ಶೈಲಿಯ ಗಣೇಶ

Share

ಅಂಕೋಲಾ: ಇತ್ತೀಚೆಗೆ ನಡೆದಿದ್ದ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆರ್‌ಸಿಬಿ ತಂಡದ ವಿಜಯವನ್ನು ಸಂಭ್ರಮಿಸುವಂತೆ,ಮೂಡಿ ಬಂದ ಗಣಪನ ಮಾದರಿ ದೃಶ್ಯ ಸಾಮಾಜಿಕ ಜಾಲತಾಣಗಳು ಸೇರಿದಂತೆ ಎಲ್ಲೆಡೆ ಭಾರೀ ವೈರಲ್ ಆಗುತ್ತಿದೆ .

IPL ಕಪ್ ಎತ್ತಿ ಹಿಡಿದ ಗಣಪ

ಅಂಕೋಲಾ ತಾಲೂಕಿನ ಅವರ್ಸಾ ಗ್ರಾಮದ ಸಾರ್ವಜನಿಕ ಗಣೇಶೋತ್ಸವ ತನ್ನ ಶಿಸ್ತು ಬದ್ಧ ಸಂಘಟನೆ ಮತ್ತಿತರ ಕಾರಣಗಳಿಂದ ಆಗಾಗ ಸಖತ್ ಸುದ್ದಿಯಾಗುತ್ತಲೇ ಇರುತ್ತದೆ. ಇಲ್ಲಿನ ಗಣೇಶೋತ್ಸವ ಮಂಡಳಿ 42 ನೇ ವರ್ಷದ ವಿಶೇಷ ಆಕರ್ಷಣೆಯಾಗಿ ರೂಪಿಸಿದ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಆರ್ ಸಿ ಬಿ ತಂಡದ ವಿಜಯೋತ್ಸವ ಮಾದರಿ ಗಮನ ಸೆಳೆಯುತ್ತಿದ್ದು ದಿನನಿತ್ಯ ಸಾವಿರಾರು ಜನರು ಆಗಮಿಸಿ ಗಣೇಶೋತ್ಸವದ ಆನಂದವನ್ನು ಸವಿಯುತ್ತಿದ್ದು, ಇಲ್ಲಿನ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ಜೋರಾದ ಸದ್ದು ಮಾಡುತ್ತ, ಐಪಿಎಲ್ ಚಾಂಪಿಯನ್ ಕಪ್ ಎತ್ತಿ ಹಿಡಿದ ಗಣೇಶ ಮೂರ್ತಿ ಎಲ್ಲಡೆ ವೈರಲ್ ಆಗುತ್ತಿದೆ.

ವಿರಾಟ್ ಕೊಹ್ಲಿ ಜೊತೆಯಲ್ಲೇ ಆರ್‌ಸಿಬಿ ವಿಜಯೋತ್ಸವ ಗಣಪ

ಸ್ಥಳೀಯರೇ ಆದ ಹೆಸರಾಂತ ಯುವ ಕಲಾವಿದ ದಿನೇಶ ಮೇತ್ರಿ ಅವರ ಪರಿಕಲ್ಪನೆ ಮತ್ತು ಕಲಾತ್ಮಕತೆಯಿಂದ ಟ್ರಾನ್ಸಪೋರ್ಟ್ ಉದ್ಯಮಿ ತುಳಸಿದಾಸ ಕಾಮತ್ ಮತ್ತು ಅವರ ಕುಟುಂಬದವರ ಸಹಕಾರದಲ್ಲಿ ಐ.ಪಿ.ಎಲ್ ಟ್ರೊಪಿ ಎತ್ತಿ ಹಿಡಿದು, ಜಿಲ್ಲೆಯ ಪ್ರತಿಷ್ಠಿತ ವರದಾ ರೋಡಲೈನ್ಸ್ ಬಸ್ಸಿನ ಮೇಲೆರಿ ವಿಜಯೋತ್ಸವದ ರೀತಿ ನಿಂತ ಭಂಗಿಯಲ್ಲಿ ಇಲ್ಲಿನ ಗಣಪ ಮೂಡಿಬಂದಿದ್ದು ಆರ್.ಸಿ.ಬಿ ಜೆರ್ಸಿಯಲ್ಲಿ ಇರುವ
ನಿಂತ ಗಣೇಶನ ಪಕ್ಕದಲ್ಲಿ ವಿಶ್ವ ಪ್ರಸಿದ್ಧ ಆಟಗಾರ ವಿರಾಟ ಕೊಹ್ಲಿ ಅವರ ಕಲಾಕೃತಿಯೂ ಗಣೇಶನ ಭಕ್ತರ,ಕ್ರಿಕೆಟ್ ಪ್ರಿಯರ ಹಾಗೂ ಕೊಹ್ಲಿ ಅಭಿಮಾನಿಗಳ ಮನಸೂರೆಗೊಳ್ಳುತ್ತಿದೆ.

ಭಟ್ಕಳದಲ್ಲಿ ದೇವಸ್ಥಾನದ ಹುಂಡಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಬಂಧನ

ಗಣೇಶನ ವಾಹನ ಮೂಷಿಕ ,ಬಸ್ಸಿನ ಚಾಲಕನ ಸ್ಥಾನದಲ್ಲಿ ಕುಳಿತು ಬಿಳಿ ಬಣ್ಣದ ಸುಂದರ ಬಸ್ಸನ್ನು ಚಲಾಯಿಸುತ್ತಿರುವಂತೆ ಕಲಾತ್ಮಕತೆ ಕಂಡುಬರುತ್ತಿದೆ. ಕೋಟ್ಯಂತರ ಅಭಿಮಾನಿಗಳ ನಿರೀಕ್ಷೆಯಂತೆ ಈ ಸಲ ಐಪಿಎಲ್ ಕಪ್ ತನ್ನದಾಗಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ,ಗೆಲುವಿನ ಸಂಭ್ರಮಾಚರಣೆಯ ವರುಷ ಹಾಗೂ ಹರುಷದ ಸಂದರ್ಭದಲ್ಲಿ ಸುಮಾರು ಹನ್ನೊಂದು ಅಡಿ ಎತ್ತರದ ಈ ವಿಶೇಷ ಗಣೇಶ ಮೂರ್ತಿ ತನ್ನ ವಿಭಿನ್ನತೆಯಿಂದಾಗಿ ಶೋಭಿಸುತ್ತಿದ್ದು ಆರ್.ಸಿ.ಬಿ ಅಭಿಮಾನಿಗಳಂತೂ ಸಂತಸದಿಂದ ಜಯದೇವತೆಯನ್ನು ನೋಡಲು ಮುಗಿ ಬೀಳುತ್ತಿದ್ದಾರೆ.

ಅವರ್ಸಾದಲ್ಲಿ ಸಾರ್ವಜನಿಕ ಗಣೇಶೋತ್ಸವ ಪ್ರತಿ ವರ್ಷ ಹಲವು ವೈಶಿಷ್ಟ್ಯಗಳೊಂದಿಗೆ ಗಮನ ಸೆಳೆಯುತ್ತ ಬಂದಿದ್ದು
ಗಣೇಶೋತ್ಸವದ ಸಂದರ್ಭದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ, ಸಾಂಸ್ಕೃತಿಕ , ಮನೋರಂಜನೆ ಸೇರಿದಂತೆ ಹತ್ತಾರು ವಿಧಾಯಕ ಕಾರ್ಯಗಳ ಮೂಲಕ ತನ್ನದೇ ಆದ ಪ್ರಸಿದ್ಧಿ ಪಡೆದಿದೆ.

ಈ ಬಾರಿಯ ಗಣೇಶೋತ್ಸವದಲ್ಲಿ ಮೂಡಿಬಂದ ಆರ್.ಸಿ.ಬಿ ವಿಜಯೋತ್ಸವದ ಮಾದರಿಯಂತಿರುವ ಗಣಪ ರಾಜ್ಯಾದ್ಯಂತ ಅಷ್ಟೇ ಅಲ್ಲದೇ ದೇಶ ವಿದೇಶಗಳಲ್ಲಿಯೂ ಸಖತ್ ಸುದ್ದಿ ಮಾಡುವಂತಾಗಿದ್ದು,ಸ್ಥಳೀಯ ಸಂಘಟನೆ ಹಾಗೂ ಕಲಾವಿದನ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿ ಬರಲಾರಂಭಿಸಿವೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Share

📢 Stay Updated!

Join our official WhatsApp group to get instant news updates, alerts, and exclusive stories – right on your phone.

💬 Join our WhatsApp Group

Don't Miss

ಭಟ್ಕಳದಲ್ಲಿ ದೇವಸ್ಥಾನದ ಹುಂಡಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಬಂಧನ

ಭಟ್ಕಳ: ಶ್ರೀ ಕಂಚಿನ ದುರ್ಗಾ ಪರಮೇಶ್ವರಿ ದೇವಸ್ಥಾನದ ಹುಂಡಿ ಕಳ್ಳತನ ಪ್ರಕರಣದಲ್ಲಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆಗಸ್ಟ್ 28ರ ಸಂಜೆ 7 ಗಂಟೆಯಿoದ ಆಗಸ್ಟ್ 29ರ ಬೆಳಿಗ್ಗೆ 7 ಗಂಟೆಯ...

ಮನೆಯ ಮೆಟ್ಟಿಲುಗಳ ಮೇಲೆ ಚಿರತೆ ಓಡಾಟ : ಗ್ರಾಮಸ್ಥರಲ್ಲಿ ಆತಂಕ

ಸಿದ್ದಾಪುರ: ಚಿರತೆಯೊಂದು ರಾತ್ರಿಯ ವೇಳೆ ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಓಡಾಡಿ ಮನೆ ಮಂದಿಯವರೆಲ್ಲ ಆತಂಕಗೊoಡ ಘಟನೆ ಸಿದ್ದಾಪುರ ತಾಲೂಕಿನ ಬೇಡ್ಕಣಿ ಸಮೀಪದ ಕುಂಬ್ರಿಗದ್ದೆಯಲ್ಲಿ ನಡೆದಿದೆ. ಇಲ್ಲಿನ ಪ್ರಶಾಂತ ನಾಯ್ಕ್ ಅವರ ಮನೆಯಲ್ಲಿ...

📰 ನಿಮ್ಮ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರಿನ ಸಭೆ, ಸಮಾರಂಭ, ಪ್ರತಿಭಟನೆ ಮತ್ತು ವಿಶೇಷ ವರದಿಗಳನ್ನು ನಮಗೆ ಕಳುಹಿಸಿ.

✉️ Gmail: [email protected]

📲 WhatsApp ಮೂಲಕ ಕಳುಹಿಸಿ ✉️ Gmail ಮೂಲಕ ಕಳುಹಿಸಿ

ಗಂಟಲಲ್ಲಿ ಅನ್ನ ಸಿಲುಕಿ ಯುವಕ ದುರ್ಮರಣ

ಕಾರವಾರ: ಊಟ ಮಾಡುವಾಗ ಅನ್ನ ಗಂಟಲಲ್ಲಿ ಸಿಲುಕಿ ಯುವಕನೊಬ್ಬ ಸಾವನ್ನಪ್ಪಿದ ಘಟನೆ ಕಾರವಾರ ತಾಲೂಕಿನ ಬಿಣಗಾದಲ್ಲಿ ನಡೆದಿದೆ. ಬಿಣಗಾ ಮಾಳಸವಾಡದ ನಿವಾಸಿ ಅಮಿತ್ ಮಾಳಸೇರ್ ಮೃತ ದುರ್ದೈವಿ ಯುವಕನಾಗಿದ್ದಾನೆ. ವೃತ್ತಿಯಲ್ಲಿ ಕಾರು...

ನಾಕುತಂತಿ ಬದುಕಿನ ಸಮನ್ವಯತೆಯ ಸಾರ ಹೊಂದಿದೆ: ಸಾಹಿತಿ ಪುಟ್ಟ ಕುಲಕರ್ಣಿ

ಕುಮಟಾ: ಬದುಕಿಗೂ ಮತ್ತು ಸಂಸ್ಕೃತಿಗೂ ಇರುವ ಅವಿನಾಭಾವ ಸಂಬಂಧ ಗಟ್ಟಿಯಾದಗ ಮಾತ್ರ ಬಾಳು ಸುಂದರವಾಗುತ್ತದೆ . ಬದುಕು ಭಾವ , ಬೂತಿ ,ಅನುಭೂತಿ ಇವುಗಳ ಸಮನ್ವಯತೆಯ ಸಾರ ವನ್ನು ನಾಕುತಂತಿ ಹೊಂದಿದೆ...

ಕಪ್ ಎತ್ತಿ ಹಿಡಿದ ಗಣಪತಿ: ಗಮನ ಸೆಳೆದ ಆರ್‌ಸಿಬಿ ವಿಜಯೋತ್ಸವ ಶೈಲಿಯ ಗಣೇಶ

ಅಂಕೋಲಾ: ಇತ್ತೀಚೆಗೆ ನಡೆದಿದ್ದ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆರ್‌ಸಿಬಿ ತಂಡದ ವಿಜಯವನ್ನು ಸಂಭ್ರಮಿಸುವಂತೆ,ಮೂಡಿ ಬಂದ ಗಣಪನ ಮಾದರಿ ದೃಶ್ಯ ಸಾಮಾಜಿಕ ಜಾಲತಾಣಗಳು ಸೇರಿದಂತೆ ಎಲ್ಲೆಡೆ ಭಾರೀ ವೈರಲ್ ಆಗುತ್ತಿದೆ . IPL...

ಭಟ್ಕಳದಲ್ಲಿ ದೇವಸ್ಥಾನದ ಹುಂಡಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಬಂಧನ

ಭಟ್ಕಳ: ಶ್ರೀ ಕಂಚಿನ ದುರ್ಗಾ ಪರಮೇಶ್ವರಿ ದೇವಸ್ಥಾನದ ಹುಂಡಿ ಕಳ್ಳತನ ಪ್ರಕರಣದಲ್ಲಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆಗಸ್ಟ್ 28ರ ಸಂಜೆ 7 ಗಂಟೆಯಿoದ ಆಗಸ್ಟ್ 29ರ ಬೆಳಿಗ್ಗೆ 7 ಗಂಟೆಯ...

🌐 📺 Visit Our Media Partner Site

ಉತ್ತರಕನ್ನಡ ಸುದ್ದಿ Update ಪಡೆಯಿರಿ

🔗 Go to Vismaya TV
Current date Monday , 1 September 2025
Related Articles

ಗಂಟಲಲ್ಲಿ ಅನ್ನ ಸಿಲುಕಿ ಯುವಕ ದುರ್ಮರಣ

ಕಾರವಾರ: ಊಟ ಮಾಡುವಾಗ ಅನ್ನ ಗಂಟಲಲ್ಲಿ ಸಿಲುಕಿ ಯುವಕನೊಬ್ಬ ಸಾವನ್ನಪ್ಪಿದ ಘಟನೆ ಕಾರವಾರ ತಾಲೂಕಿನ ಬಿಣಗಾದಲ್ಲಿ...

ಭಟ್ಕಳದಲ್ಲಿ ದೇವಸ್ಥಾನದ ಹುಂಡಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಬಂಧನ

ಭಟ್ಕಳ: ಶ್ರೀ ಕಂಚಿನ ದುರ್ಗಾ ಪರಮೇಶ್ವರಿ ದೇವಸ್ಥಾನದ ಹುಂಡಿ ಕಳ್ಳತನ ಪ್ರಕರಣದಲ್ಲಿ ಪೊಲೀಸರು ಇಬ್ಬರು ಆರೋಪಿಗಳನ್ನು...

ಗೋಕರ್ಣ ಮಾದನಗೇರಿ ಶಿವನಾಥ ಮಂದಿರದಲ್ಲಿದೆ ಸಂತಾನ ಗಣಪತಿ

ಗೋಕರ್ಣ, ಆಗಸ್ಟ್ 30: ಶ್ರೀ ಕ್ಷೇತ್ರ ಗೋಕರ್ಣ ಮಾದನಗೇರಿ ಶಿವನಾಥ ಮಂದಿರದಲ್ಲಿ ಮಹಾಲೆ ಮನೆತನದ ಗಣಪತಿ...

ಹೊನ್ನಾವರ ತಾಲ್ಲೂಕಿನಲ್ಲಿ ನಾಳೆ ಶಾಲೆ ಹಾಗೂ ಅಂಗನವಾಡಿಗಳಿಗೆ ರಜೆ

ಹೊನ್ನಾವರ ಆಗಸ್ಟ್ 29: ತಾಲ್ಲೂಕಿನಲ್ಲಿ ನಿರಂತರ ಭಾರಿ ಮಳೆಯಾಗುತ್ತಿರುವುದು ಹಾಗೂ ಗೇರುಸೊಪ್ಪಾ ಜಲಾಶಯದಿಂದ ಹೆಚ್ಚುವರಿ ನೀರನ್ನು...