ಅಂಕೋಲಾದ ತೋಟದಲ್ಲಿ ಕಂಡುಬಂದ ಹೆಬ್ಬಾವನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದು ಅರಣ್ಯ ಪ್ರದೇಶಕ್ಕೆ ಬಿಡುತ್ತಿರುವ ದೃಶ್ಯ
Important

ಮನೆಯ ಹತ್ತಿರ ಹೆಬ್ಬಾವು ಪತ್ತೆ : ಅರಣ್ಯ ಇಲಾಖೆಯ ತುರ್ತು ಕಾರ್ಯಾಚರಣೆ

Share

ಅಂಕೋಲಾ, ಆಗಸ್ಟ್ 28: ಗ್ರಾಮೀಣ ಪ್ರದೇಶದ ರೈತ ಕುಟುಂಬವೊoದರ ಮನೆಯ ಹತ್ತಿರದ ತೋಟದ ಬಳಿ ಹೆಬ್ಬಾವು ಕಾಣಿಸಿಕೊಂಡಿತ್ತು. ಈ ವಿಷಯವನ್ನು ತೋಟದ ಕೆಲಸಗಾರರು ಮನೆಯ ಯಜಮಾನಿಗೆ ತಿಳಿಸಿದರಾದರೂ ಮನೆ ಮಕ್ಕಳು ಮೊಮ್ಮಕ್ಕಳು ಸೇರಿದಂತೆ ಕುಟುಂಬ ವರ್ಗದವರು ದೈವ ದರ್ಶನಕ್ಕೆ ದೂರದೂರಿಗೆ ಹೋಗಿದ್ದರಿಂದ ಆತಂಕ ಹೆಚ್ಚುವಂತಾಗಿತ್ತು.

Read: ಮುರ್ನಾಲ್ಕು ದಿನಗಳ ಕಾಲ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ ಏನು?

ತಾಲೂಕಿನ ಡೊಂಗ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೆಗ್ಗಾರ ಪುನರ್ವಸತಿ ಕೇಂದ್ರದ ರಾಘವೇಂದ್ರ ಗಾಂವ್ಕರ್ ಅವರ ಮನೆಗೆ ಹೊಂದಿಕೊoಡಿರುವ ತೋಟದ ಗಿಡ ಗಂಟಿಗಳ ಪೊದೆಯಲ್ಲಿ ಹೆಬ್ಬಾವು ಅವಿತುಕೊಂಡಿತ್ತು. ಗಮನಸಿದ, ಅಲ್ಲೇ ಕೆಲಸ ಮಾಡುತ್ತಿದ್ದ ಕೃಷಿ ಕೂಲಿ ಕಾರ್ಮಿಕರು ಕ್ಷಣ ಕಾಲ ಗಾಬರಿಗೊಂಡು ಮನೆಯೊಡತಿಗೆ ವಿಷಯ ತಿಳಿಸಿದ್ದಾರೆ.

ಅರಣ್ಯ ಇಲಾಖೆ ಕಾರ್ಯಾಚರಣೆ

ಆದರೆ ಆ ಸಂದರ್ಭದಲ್ಲಿ ಮನೆ ಮಕ್ಕಳು ಸೊಸೆಯಂದಿರು ಮತ್ತು ಮೊಮ್ಮಕ್ಕಳು ಶಿರಡಿ ಮತ್ತಿತರ ಧಾರ್ಮಿಕ ಕ್ಷೇತ್ರಗಳ ದರ್ಶನಕ್ಕೆ ತೆರಳಿದ್ದರಿಂದ ತುರ್ತಾಗಿ ಏನು ಮಾಡುವುದು ಎಂದು ಯೋಚನೆಗೆ ಬಿದ್ದು, ಕೊನೆಗೆ ದೂರವಾಣಿ ಕರೆ ಮಾಡಿ ಮಗನಿಗೆ ತಿಳಿಸಿದ್ದಾರೆ.

ಶಿರಡಿ ಸಾಯಿಬಾಬಾ ದರ್ಶನಕ್ಕೆ ಹೋಗಿದ್ದ ಮಗ ಅಲ್ಲಿಂದಲೇ, ವಲಯ ಅರಣ್ಯಾಧಿಕಾರಿ ಸುರೇಶ್ ನಾಯ್ಕ ಅವರಿಗೆ ಕರೆ ಮಾಡಿ ತಮ್ಮ ತೋಟದಲ್ಲಿ ಹೆಬ್ಬಾವು ಬಂದಿರುವ ವಿಷಯ ತಿಳಿಸಿ,ತಾಯಿಯವರ ಆತಂಕ ದೂರ ಮಾಡುವಂತೆ ವಿನಂತಿಸಿದ್ದಾರೆ.

ಯಶಸ್ವಿ ಕಾರ್ಯಾಚರಣೆ

ಸುರೇಶ ನಾಮಕ ಅವರು ಕೂಡಲೇ ಫೋನ್ ಕರೆಗೆ ಸ್ಪಂದಿಸಿ, ತಮ್ಮ ಸಿಬ್ಬಂದಿಗಳನ್ನು ಹೆಬ್ಬಾವು ಸೆರೆ ಮತ್ತು ಸಂರಕ್ಷಣೆ ಕಾರ್ಯಚರಣೆಗೆ ಕಳಿಸಿಕೊಟ್ಟಿದ್ದಾರೆ. ಸ್ಥಳೀಯ ಪಂಚಾಯತ ಸದಸ್ಯರಾದ ನಾರಾಯಣ ಭಟ್ಟ ಮತ್ತಿತರರ ಸಹಕಾರದಲ್ಲಿ ಹೆಬ್ಬಾವನ್ನು ಹಿಡಿದು ಸುರಕ್ಷಿತ ಅರಣ್ಯ ಪ್ರದೇಶದಲ್ಲಿ ಬಿಟ್ಟು ಬರಲಾಗಿದೆ.

ಮನೆಮಕ್ಕಳು ದೂರದಲ್ಲಿದ್ದರೂ ತಕ್ಷಣಕ್ಕೆ ಸ್ಪಂದಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಕರ್ತವ್ಯ ಹಾಗೂ ಸೇವೆಗೆ ಗಾಂವಕರ ಕುಟುಂಬಸ್ಥರು ಮತ್ತು ಸ್ಥಳೀಯ ನಾಗರಿಕರು ಕೃತಜ್ಞತೆ ಸೂಚಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Share

📢 Stay Updated!

Join our official WhatsApp group to get instant news updates, alerts, and exclusive stories – right on your phone.

💬 Join our WhatsApp Group

Don't Miss

ಮುರ್ನಾಲ್ಕು ದಿನಗಳ ಕಾಲ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ ಏನು?

ಬೆಂಗಳೂರು, ಆಗಸ್ಟ್ 27 : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು, ಇದರಿಂದಾಗಿ ರಾಜ್ಯಾದ್ಯಂತ ಆಗಸ್ಟ್ 31ರ ವರೆಗೂ ಮಳೆ ಅಬ್ಬರಿಸಲಿದೆ. ವಿಶೇಷವಾಗಿ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹವಾಮಾನ...

ಗುಡಿಗಾರಗಲ್ಲಿ ಗಣಪತಿಗೆ ಬೆಳ್ಳಿಯ ಕಿರೀಟ ಸಮರ್ಪಣೆ: ಭಕ್ತರ ಭಾವಪೂರ್ಣ ಕಾಣಿಕೆ

ಕುಮಟಾ, ಆಗಸ್ಟ್ 27: 50ನೇ ವರ್ಷದತ್ತ ಪಯಣಿಸುತ್ತಿರುವ ಗುಡಿಗಾರಗಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿ, ತನ್ನ ಅಜರಾಮರ ಪರಂಪರೆಯನ್ನು ಮತ್ತಷ್ಟು ಭವ್ಯಗೊಳಿಸುವ ಕಾರ್ಯಕ್ಕೆ ಮುಂದಾಗಿದೆ. ಸಮಿತಿಯ ಪೂಜೆಗೆ ಒಳಪಡುವ ಮಹಾಗಣಪತಿಗೆ ಭಕ್ತರು ಸಮೂಹ...

📰 ನಿಮ್ಮ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರಿನ ಸಭೆ, ಸಮಾರಂಭ, ಪ್ರತಿಭಟನೆ ಮತ್ತು ವಿಶೇಷ ವರದಿಗಳನ್ನು ನಮಗೆ ಕಳುಹಿಸಿ.

✉️ Gmail: [email protected]

📲 WhatsApp ಮೂಲಕ ಕಳುಹಿಸಿ ✉️ Gmail ಮೂಲಕ ಕಳುಹಿಸಿ

ಭಾಗೀರಥಿ ಹೆಗಡೆ ನಿಧನ: ಗಣ್ಯರ ಸಂತಾಪ

ಹೊನ್ನಾವರ, ಆಗಸ್ಟ್ 28: ಹೊಸಾಕುಳಿ ಗ್ರಾಮದ ಮೂಲದವರಾದ ಹಾಗೂ ಜಲವಳ್ಳಿಯ ಮರಬಳ್ಳಿ ಜಮೀನಿನಲ್ಲಿ ವಾಸವಾಗಿದ್ದ ಶ್ರೀಮತಿ ಭಾಗೀರಥಿ ರಾಮ ಹೆಗಡೆ (69) ಅವರು ಆಗಸ್ಟ್ 26ರಂದು ರಾತ್ರಿ 9.20ಕ್ಕೆ ಅನಾರೋಗ್ಯದಿಂದ ತಮ್ಮ...

ನಿಯಂತ್ರಣ ತಪ್ಪಿ ಅವಾಂತರ: ಚಹಾ ಅಂಗಡಿಗೆ ನುಗ್ಗಿದ ಬಸ್

ಕುಮಟಾ: ಚಾಲಕನ ನಿಯಂತ್ರಣ ತಪ್ಪಿದ ಸಾರಿಗೆ ಸಂಸ್ಥೆ ಬಸ್ ವೊಂದು ರಸ್ತೆ ಬದಿಯ ಚಹಾ ಅಂಗಡಿಗೆ ನುಗ್ಗಿದ ಘಟನೆ ತಾಲೂಕಿನ ಇಂಡಸ್ಟ್ರಿಯಲ್ ಏರಿಯಾ ಸಮೀಪ ನಡೆದಿದೆ. ಹೆಗಡೆಯಿಂದ ಕುಮಟಾಕ್ಕೆ ಪ್ರಯಾಣಿಕರನ್ನು ತುಂಬಿಕೊoಡು...

ಮನೆಯ ಹತ್ತಿರ ಹೆಬ್ಬಾವು ಪತ್ತೆ : ಅರಣ್ಯ ಇಲಾಖೆಯ ತುರ್ತು ಕಾರ್ಯಾಚರಣೆ

ಅಂಕೋಲಾ, ಆಗಸ್ಟ್ 28: ಗ್ರಾಮೀಣ ಪ್ರದೇಶದ ರೈತ ಕುಟುಂಬವೊoದರ ಮನೆಯ ಹತ್ತಿರದ ತೋಟದ ಬಳಿ ಹೆಬ್ಬಾವು ಕಾಣಿಸಿಕೊಂಡಿತ್ತು. ಈ ವಿಷಯವನ್ನು ತೋಟದ ಕೆಲಸಗಾರರು ಮನೆಯ ಯಜಮಾನಿಗೆ ತಿಳಿಸಿದರಾದರೂ ಮನೆ ಮಕ್ಕಳು ಮೊಮ್ಮಕ್ಕಳು...

ಮುರ್ನಾಲ್ಕು ದಿನಗಳ ಕಾಲ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ ಏನು?

ಬೆಂಗಳೂರು, ಆಗಸ್ಟ್ 27 : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು, ಇದರಿಂದಾಗಿ ರಾಜ್ಯಾದ್ಯಂತ ಆಗಸ್ಟ್ 31ರ ವರೆಗೂ ಮಳೆ ಅಬ್ಬರಿಸಲಿದೆ. ವಿಶೇಷವಾಗಿ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹವಾಮಾನ...

🌐 📺 Visit Our Media Partner Site

ಉತ್ತರಕನ್ನಡ ಸುದ್ದಿ Update ಪಡೆಯಿರಿ

🔗 Go to Vismaya TV
Current date Thursday , 28 August 2025
Related Articles

ನಿಯಂತ್ರಣ ತಪ್ಪಿ ಅವಾಂತರ: ಚಹಾ ಅಂಗಡಿಗೆ ನುಗ್ಗಿದ ಬಸ್

ಕುಮಟಾ: ಚಾಲಕನ ನಿಯಂತ್ರಣ ತಪ್ಪಿದ ಸಾರಿಗೆ ಸಂಸ್ಥೆ ಬಸ್ ವೊಂದು ರಸ್ತೆ ಬದಿಯ ಚಹಾ ಅಂಗಡಿಗೆ...

ಮುರ್ನಾಲ್ಕು ದಿನಗಳ ಕಾಲ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ ಏನು?

ಬೆಂಗಳೂರು, ಆಗಸ್ಟ್ 27 : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು, ಇದರಿಂದಾಗಿ ರಾಜ್ಯಾದ್ಯಂತ ಆಗಸ್ಟ್ 31ರ...

ಗುಡಿಗಾರಗಲ್ಲಿ ಗಣಪತಿಗೆ ಬೆಳ್ಳಿಯ ಕಿರೀಟ ಸಮರ್ಪಣೆ: ಭಕ್ತರ ಭಾವಪೂರ್ಣ ಕಾಣಿಕೆ

ಕುಮಟಾ, ಆಗಸ್ಟ್ 27: 50ನೇ ವರ್ಷದತ್ತ ಪಯಣಿಸುತ್ತಿರುವ ಗುಡಿಗಾರಗಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿ, ತನ್ನ ಅಜರಾಮರ...

ಗಣಪತಿಗೆ ಜೀವ ಕಳೆ ತುಂಬುವ ಗಂಗಾವಳಿಯ ಶರತ್ ನಾಯ್ಕ್

ಕುಮಟಾ, ಆಗಸ್ಟ್ 26: ಪ್ರತಿಭೆ ಯಾರ ಸೊತ್ತಲ್ಲ. ಅದು ಸಾಧಕನ ಸ್ವತ್ತು ಎನ್ನುವ ಮಾತಿಗೆ ಅನುಗುಣವಾಗಿ...