Big News

ವೃದ್ಧರು, ಅಸಹಾಯಕರಿಗೆ ಹೊಸ ಬಟ್ಟೆ ನೀಡಿ ಪುತ್ರಶೋಕ ಮರೆಯಲೆತ್ನಿಸಿದ ಮಿರಾಶಿ ಕುಟುಂಬ

Share

ಅಂಕೋಲಾ: KEBಯ ನಿವೃತ್ತ ಎಕ್ಸಿಕ್ಕೂಟಿವ್ ಇಂಜಿನಿಯರ್ ಹಾಗೂ ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ರಾಮಚಂದ್ರ ತಿಮ್ಮಣ್ಣ ಮಿರಾಶಿ ಅವರು ತಾಲೂಕಿನ ಅಗ್ರಗೋಣ ಮೂಲದವರಾಗಿದ್ದು , ಕಳೆದ ಅನೇಕ ದಶಕಗಳಿಂದ ಪಟ್ಟಣ ವ್ಯಾಪ್ತಿಯ ಲಕ್ಷೇಶ್ವರದಲ್ಲಿ ಹೆಂಡತಿ ಮತ್ತು ಮಕ್ಕಳೊಂದಿಗೆ ಸುಖಸಂಸಾರ ನಡೆಸುತ್ತಾ ಬಂದಿದ್ದರು. ಹೀಗಿರುತ್ತಾ 1994 ರ ಜೂನ್ 16 ರಂದು ಆ ಕುಟುಂಬದ ಪಾಲಿಗೆ ಅತೀವ ದುಃಖ ಹಾಗೂ ನೋವಿನ ದಿನವಾಗಿದ್ದು ,ಆಕಸ್ಮಿಕ ರಸ್ತೆ ಅಪಘಾತದಲ್ಲಿ ಮನೆ ಮಗ ಮಂಜುನಾಥ ಮಿರಾಶಿ ಬದುಕುಳಿಯಲಾರದೇ ದೈವ ಪಾದ ಸೇರಿದ್ದ.

ಈ ನಡುವೆ ಮಗನ ನೆನಪು ಚಿರಸ್ಥಾಯಿ ಆಗಿಸಲು ಈ ಕುಟುಂಬ, ಮೃತನ ಸ್ಮರಣಾರ್ಥ ಬೇರೆ ಬೇರೆ ಪ್ರದೇಶ ಹಾಗೂ ಸಂದರ್ಭಗಳಲ್ಲಿ ನೂರಾರು ಕಾರ್ಯಗಳಿಗೆ ತಮ್ಮ ಕೈಲಾದ ಸೇವೆ – ಸಹಕಾರ – ಪ್ರಾಯೋಜಕತ್ವ ವಹಿಸುತ್ತಾ ಬಂದಿತ್ತು. ಅದರ ಹೊರತಾಗಿ ಅಜ್ಜಿ ಕಟ್ಟಾದ ಕ್ರಿಸ್ತಮಿತ್ರ ಸೇವಾಶ್ರಮದಲ್ಲಿರುವ ವೃದ್ಧರು , ಅಸಹಾಯಕರಿಗೆ ಈ ಹಿಂದೆ ಬ್ಲ್ಯಾಂಕೆಟ್ ನೀಡಿದ್ದ ಮಿರಾಶಿ ಕುಟುಂಬ, ಮಳೆಗಾಲದ ಇಂದಿನ ದಿನಗಳಲ್ಲಿ ಅಲ್ಲಿನ ನಿವಾಸಿಗಳಿಗೆ ಅತ್ಯಗತ್ಯವಾಗಿದ್ದ ಹೊಸ ಬಟ್ಟೆಗಳನ್ನು ನೀಡಿ, ಅವರ ಸಂತಸದಲ್ಲಿ ತಮ್ಮ ಮಗನ ಅಗಲುವಿಕೆ ನೋವು ಮರೆಯಲು ಯತ್ನಿಸಿತು.

ಮಳೆಗಾಲ ಎದುರಿಸಲು ಅಗತ್ಯವಾಗಿದ್ದ ಬಟ್ಟೆ ಸಿಕ್ಕ ಸಂತಸದಲ್ಲಿ ಧನ್ಯತೆ ಸೂಚಿಸಿದ ಆಶ್ರಮ ನಿವಾಸಿಗಳು

ಬೆಳಗ್ಗೆ ನಡೆದ ಸರಳ ಸಭಾ ಕಾರ್ಯಕ್ರಮದಲ್ಲಿ ಆರ್ ಟಿ ಮಿರಾಶಿ ಅವರ ಹಿರಿಯ ಮಗಳು ಸಂಧ್ಯಾ ರಮೇಶ ನಾಯಕ ಮಾತನಾಡಿ, ನನ್ನ ಸಹೋದರನನ್ನು ಕಳೆದುಕೊಂಡ ದುಃಖ ಮರೆಯಲು ನಮ್ಮ ಕುಟುಂಬಕ್ಕೆ ಇದೊಂದು ಸುದೈವಾವಕಾಶವಾಗಿದೆ. ಅನಿವಾರ್ಯ ಕಾರಣಗಳಿಂದ ಕುಟುಂಬ ಬಿಟ್ಟು ಇಲ್ಲಿ ಬಂದು ಬಾಳಬೇಕಾದ ನಿಮ್ಮನ್ನೆಲ್ಲ ನೋಡಿದರೆ ಮನಸ್ಸಿಗೆ ಒಂದೆಡೆ ಬೇಸರ ಮತ್ತು ನೋವೆನಿಸುತ್ತದೆ. ಆದರೆ ನಿಮಗೆ ಇನ್ನಷ್ಟು ಸೇವೆ ನೀಡುವ ಭಾಗ್ಯ – ಶಕ್ತಿ ನಮ್ಮ ಕುಟುಂಬಕ್ಕೆ ಹೆಚ್ಚಲಿ ಎಂದರು. ಕಳೆದ ಮೂರು ದಶಕಗಳ ಹಿಂದೆ ತಮ್ಮ ಮಗನನ್ನು ಕಳೆದುಕೊಂಡ ಘಟನೆ ಕುರಿತು ಮಾತನಾಡಿದ ಆರ್ ಟಿ ಮಿರಾಶಿ, ತನ್ನ ಏಕೈಕ ಸುಪುತ್ರನ ಸಾವಿನ ನೋವು ಈಗಲೂ ಅರಗಿಸಿಕೊಳ್ಳಲಾಗುತ್ತಿಲ್ಲ.

ಆದರೆ ನಾನು ಮತ್ತು ನನ್ನ ಹೆಂಡತಿ – ಮಕ್ಕಳು ಹಾಗೂ ಮೊಮ್ಮಕ್ಕಳು ಕೂಡಿ ಮುಂದೆಯೂ ನಿಮ್ಮೆಲ್ಲರಿಗೂ ನಮ್ಮ ಕೈಲಾದ ಸೇವೆ ಸಹಕಾರ ನೀಡುವುದಾಗಿ ಹೇಳುತ್ತಾ ಕ್ಷಣಕಾಲ ಭಾವುಕರಾದರು. ಮಳೆಗಾಲದ ಈ ದಿನಗಳಲ್ಲಿ ತಮಗೆ ಅಗತ್ಯವಾಗಿದ್ದ ಹೊಸ ಬಟ್ಟೆ ನೀಡಿದ್ದಕ್ಕೆ ಸಂತಸಗೊoಡ ಅಶ್ರಮದ ಕೆಲ ನಿವಾಸಿಗಳು, ಮಿರಾಶಿ ಕುಟುಂಬಕ್ಕೆ ಧನ್ಯತೆ ಸಮರ್ಪಿಸಿದರೆ ಅವರ ಸಂತಸ ಕಂಡ ಮಿರಾಶಿ ಕುಟುಂಬದವರು ಮಗನ ಅಗಲುವಿಕೆ ದುಃಖ ಮರೆಯಲೆತ್ನಿಸಿ ತಮ್ಮ ಸೇವೆ ಸಾರ್ಥಕವಾಗುತ್ತಿದೆ ಎಂದು ಸಮಾಧಾನ ಪಟ್ಟರಲ್ಲದೇ ಮಗನ ಪುಣ್ಯ ಸ್ಮರಣೆ ನಿಮಿತ್ತ ಜೂನ್ 16 ರಂದು ಆಶ್ರಮವಾಸಿಗಳಿಗೆ ಭೋಜನ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Share

📢 Stay Updated!

Join our official WhatsApp group to get instant news updates, alerts, and exclusive stories – right on your phone.

💬 Join our WhatsApp Group

Don't Miss

ಭಟ್ಕಳದಲ್ಲಿ ಬೆಂಕಿ ಅನಾಹುತ

ಭಟ್ಕಳ: ತಾಲೂಕಿನ ಜಾಲಿ ಕ್ರಾಸ್‌ ಬಳಿಭೀಕರ ಬೆಂಕಿ ಅವಘಡ ಸಂಭವಿಸಿ, ಇಪ್ತಿಕಾರ್ ಮೋಹಿದೀನ್ ಮಾಲಕತ್ವದ “ತಾಸಿನ್ ಫ್ರೂಟ್ಸ್ & ವೆಜಿಟೇಬಲ್ಸ್” ಹೋಲ್‌ಸೇಲ್ ಅಂಗಡಿ ಭಸ್ಮವಾದ ಘಟನೆ ನಡೆದಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ...

ಕ್ಷುಲ್ಲಕ ಕಾರಣಕ್ಕೆ ಜಗಳ: ವ್ಯಕ್ತಿಗೆ ಇರಿತ

ಭಟ್ಕಳ: ವಾರದ ಸಂತೆಯಲ್ಲಿ ವ್ಯಾಪಾರಿಯೊಬ್ಬರ ಹತ್ತಿರ ಕೆಲಸ ಮಾಡುತ್ತಿದ್ದ ಇಬ್ಬರು ಕೆಲಸಗಾರರ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಮಾತಿಗೆ ಮಾತು ಬೆಳೆದ ಚೂ-ರಿ ಇರಿತದಲ್ಲಿ ಕೊನೆಗೊಂಡ ಘಟನೆ ನಡೆದಿದೆ. ಹಾನಗಲ್ ಮೂಲದ ಹಾಲಿ...

📰 ನಿಮ್ಮ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರಿನ ಸಭೆ, ಸಮಾರಂಭ, ಪ್ರತಿಭಟನೆ ಮತ್ತು ವಿಶೇಷ ವರದಿಗಳನ್ನು ನಮಗೆ ಕಳುಹಿಸಿ.

✉️ Gmail: [email protected]

📲 WhatsApp ಮೂಲಕ ಕಳುಹಿಸಿ ✉️ Gmail ಮೂಲಕ ಕಳುಹಿಸಿ

ಸರ್ಕಾರಿ ಇಲಾಖೆಯ ಕಟ್ಟಡದ ಇಕ್ಕಟ್ಟಾದ ಗೋಡೆಗಳ ಮಧ್ಯೆ ಪತ್ತೆಯಾದ ಸೂಟ್ ಕೇಸ್ ! ? ಕೊನೆಗೂ ಸೂಟ್ಕೇಸ್ ರಹಸ್ಯ

ಅಂಕೋಲಾ, ಆಗಸ್ಟ್ 26 : ಸರ್ಕಾರಿ ಇಲಾಖೆ ಒಂದರ ಕಟ್ಟಡದ ಗೋಡೆಗಳ ನಡುವಿನ ಇಕ್ಕಟ್ಟಾದ ಸ್ಥಳದಲ್ಲಿ ಯಾರೋ ತಂದಿಟ್ಟು ಹೋಗಿದ್ದರೆನ್ನಲಾದ ಸೂಟ್ ಕೇಸ್ ಒಂದು ಪಟ್ಟಣ ವ್ಯಾಪ್ತಿಯಲ್ಲಿ ಕೆಲಕಾಲ ಆತಂಕ ಸೃಷ್ಟಿಸಿದ್ದಲ್ಲದೇ,ಸೂಟ್ಕೇಸ್...

ಗಣಪತಿಗೆ ಜೀವ ಕಳೆ ತುಂಬುವ ಗಂಗಾವಳಿಯ ಶರತ್ ನಾಯ್ಕ್

ಕುಮಟಾ, ಆಗಸ್ಟ್ 26: ಪ್ರತಿಭೆ ಯಾರ ಸೊತ್ತಲ್ಲ. ಅದು ಸಾಧಕನ ಸ್ವತ್ತು ಎನ್ನುವ ಮಾತಿಗೆ ಅನುಗುಣವಾಗಿ ಇರುವವರು ಕುಮಟಾ ತಾಲೂಕಿನ ಗಂಗಾವಳಿಯ ಹೆಮ್ಮೆಯ ಪ್ರತಿಭೆ ಶರತ್ ನಾಯ್ಕ್ ಅವರು ಈಗಾಗಲೇ ಬೃಹತ್...

ವಿಶ್ವಾಸದ ಮತ್ತೊಂದು ಹೆಸರೇ ಅಲಂಕಾರ ಜ್ಯುವೆಲರ್ಸ್: ಅಂಕೋಲಾದಲ್ಲಿ ಭವ್ಯ ಶುಭಾರಂಭ

ಅಂಕೋಲಾ, ಆಗಸ್ಟ್ 24: ಪಟ್ಟಣದ ಬಂಡಿಬಜಾರ ಮುಖ್ಯ ರಸ್ತೆಯಂಚಿಗೆ ನವೀಕೃತಗೊಂಡಿರುವ ಭವ್ಯವಾದ ಕಟ್ಟಡದಲ್ಲಿ ಅಲಂಕಾರ ಜ್ಯುವೆಲರ್ಸ್ ನ ಬೃಹತ್ತ ಮಳಿಗೆ ಅಗಸ್ಟ್ 24 ರ ರವಿವಾರ ಶುಭ ಮುಹೂರ್ತದಲ್ಲಿ ಗ್ರಾಹಕರ ಸೇವೆಗೆ...

ಭಟ್ಕಳದಲ್ಲಿ ಬೆಂಕಿ ಅನಾಹುತ

ಭಟ್ಕಳ: ತಾಲೂಕಿನ ಜಾಲಿ ಕ್ರಾಸ್‌ ಬಳಿಭೀಕರ ಬೆಂಕಿ ಅವಘಡ ಸಂಭವಿಸಿ, ಇಪ್ತಿಕಾರ್ ಮೋಹಿದೀನ್ ಮಾಲಕತ್ವದ “ತಾಸಿನ್ ಫ್ರೂಟ್ಸ್ & ವೆಜಿಟೇಬಲ್ಸ್” ಹೋಲ್‌ಸೇಲ್ ಅಂಗಡಿ ಭಸ್ಮವಾದ ಘಟನೆ ನಡೆದಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ...

🌐 📺 Visit Our Media Partner Site

ಉತ್ತರಕನ್ನಡ ಸುದ್ದಿ Update ಪಡೆಯಿರಿ

🔗 Go to Vismaya TV
Current date Tuesday , 26 August 2025
Related Articles

ಸರ್ಕಾರಿ ಇಲಾಖೆಯ ಕಟ್ಟಡದ ಇಕ್ಕಟ್ಟಾದ ಗೋಡೆಗಳ ಮಧ್ಯೆ ಪತ್ತೆಯಾದ ಸೂಟ್ ಕೇಸ್ ! ? ಕೊನೆಗೂ ಸೂಟ್ಕೇಸ್ ರಹಸ್ಯ

ಅಂಕೋಲಾ, ಆಗಸ್ಟ್ 26 : ಸರ್ಕಾರಿ ಇಲಾಖೆ ಒಂದರ ಕಟ್ಟಡದ ಗೋಡೆಗಳ ನಡುವಿನ ಇಕ್ಕಟ್ಟಾದ ಸ್ಥಳದಲ್ಲಿ...

ಧರ್ಮಸ್ಥಳದ ವಿರುದ್ಧ ಅಪಪ್ರಚಾರ: ಭಟ್ಕಳದಿಂದ ರಾಜ್ಯಪಾಲರಿಗೆ ಮನವಿ

ಭಟ್ಕಳ, ಆಗಸ್ಟ್ 22: ಹಿಂದೂಗಳ ಶ್ರದ್ಧಾ ಕೇಂದ್ರವಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರವನ್ನು...

ಕುಮಟಾದಲ್ಲಿ ಕೊಂಕಣಿ ಮಾನ್ಯತಾ ದಿವಸ್ ಆಚರಣೆ

ಕುಮಟಾ: ದಿನಾಂಕ 20-08-2025 ರಂದು ರೋಟರಿ ಹಾಲ್ ಕುಮಟಾ ದಲ್ಲಿ ಕೊಂಕಣಿ ಮಾನ್ಯತಾ ದಿವಸ್ ಆಚರಣೆ...

ಸ್ಥಳೀಯ ಮೀನುಗಾರರಿಗೆ,ರೈತರಿಗೆ ತಮ್ಮ ಅಹವಾಲು ಸಲ್ಲಿಸಲು ಮುಕ್ತ ಅವಕಾಶ ಕೊಡಿ: ಜಿಲ್ಲಾಧಿಕಾರಿಗಳಿಗೆ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಮನವಿ

ಕಾರವಾರ : ಅಂಕೋಲಾ ತಾಲೂಕಿನ ಕೇಣಿಯಲ್ಲಿ ಖಾಸಗಿ ಮೂಲದ ಗ್ರೀನ್ ಫೀಲ್ಡ್ ಬಂದರು ನಿರ್ಮಾಣಕ್ಕೆ ರಾಷ್ಟ್ರೀಯ...