ಕುಮಟಾ: ಆತ್ಮೀಯ ಪೇಟೆ ಕಾರ್ಯಕರ್ತ ಬಂಧುಗಳೇ
ಇಂದು ದಿನಾಂಕ 15 / 2/ 26 ರಂದು ರಸ್ತೆ ಅಪಘಾತದಲ್ಲಿ ನಮ್ಮ ಕುಮಟಾ ಎಪಿಎಂಸಿ ಪ್ರಾಂಗಣದಲ್ಲಿ ಪ್ರತಿನಿತ್ಯ ಕೃಷಿ ಉತ್ಪನ್ನಗಳ ಖರೀದಿಗೆ ಬರುತ್ತಿದ್ದ ವರ್ತಕರಾದ ವಿನಾಯಕ ರಘುವೀರ ಶಾನಭಾಗ ಹೊಳೆಗದ್ದೆ (V.R.S.H) ಇವರು ನಮ್ಮನ್ನು ಅಗಲಿದ್ದಾರೆ.
ಇವರ ಗೌರವಾರ್ಥ ನಾಳೆ ದಿನ 16/2/ 26 ಸೋಮವಾರ ಕುಮಟಾ ಎಪಿಎಂಸಿ ಪ್ರಾಂಗಣದಲ್ಲಿ ಅಡಿಕೆ ವ್ಯಾಪಾರಕ್ಕೆ ರಜೆ ಮಾಡಲಾಗಿದೆ. ಈ ನಿರ್ಣಯವನ್ನು ವರ್ತಕರ ಸಂಘ, ದಲಾಲರ ಸಂಘ, ಹಾಗೂ ಹಮಾಲರ ಸಂಘದ ಪ್ರತಿನಿಧಿಗಳು ಸಯುಕ್ತವಾಗಿ ಕೈಗೊಂಡಿದ್ದು ಎಲ್ಲಪೇಟೆ ಕಾರ್ಯಕರ್ತರು ಈ ದುಃಖದ ವೇಳೆಯಲ್ಲಿ ಸಹಕರಿಸಬೇಕಾಗಿ ಅರವಿಂದ ಪೈ ಅವರು ಕೋರಿದ್ದಾರೆ.
ವಿಸ್ಮಯ ನ್ಯೂಸ್ ಕುಮಟಾ












