Important

ಸಮುದ್ರ ದಡಕ್ಕೆ ಬರುತ್ತಿರುವೆ ರಾಶಿ ರಾಶಿ ಜೀವಂತ ಮೀನುಗಳು: ಮುಗಿಬಿದ್ದು ಚೀಲಗಳಲ್ಲಿ ತುಂಬಿಸಿಕೊಳ್ಳುತ್ತಿರುವ ಸ್ಥಳೀಯರು

Share

ಇಲ್ಲಿನ ಸಮುದ್ರ ತೀರದಲ್ಲಿ ಬಲೆ ಬೀಸಬೇಕೆಂದಿಲ್ಲ, ಆದರೂ ನೀವು ರಾಶಿ ರಾಶಿ ಜೀವಂತ ಮೀನುಗಳನ್ನು ಬಾಚಿ ತರಬಹುದು,ಇಂತಹದೊoದು ಪ್ರಕೃತಿ ವಿಸ್ಮಯ ನಡೆದದ್ದು ದೂರದಲ್ಲೆಲ್ಲೋ ಅಲ್ಲ, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಾರವಾಡದಲ್ಲಿ,ಅದನ್ನು ನೀವೇ ನೋಡಿ.

ಅಂಕೋಲಾ : ತಾಲೂಕಿನ ಹಾರವಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಾಬಿತವಾಡ ಕಡಲ ಕಿನಾರೆಯಲ್ಲಿ ಮೀನುಗಾರರು ಬಲೆ ಬೀಸದಿದ್ದರೂ, ಜೀವಂತ ಮೀನುಗಳು ತಾವೇ ತಾವಾಗಿ ಬಂದು ಕಡಲಂಚಿನಲ್ಲಿ ಬೀಳುವ ಮೂಲಕ ಮೀನಿನ ಸುಗ್ಗಿ ಕಂಡು ಬಂದು ,ಪ್ರಕೃತಿ ವಿಸ್ಮಯಕ್ಕೆ ಎಂಥವರು ಬೆರಗಾಗುವಂತೆ ಮಾಡಿದೆ.

ತರ್ಲೆ ಮೀನು , ತೋರಿ ಮೀನು, ಎಂಬಿತ್ಯಾದಿ ಹೆಸರುಗಳಿಂದ ಗುರುತಿಸಿಕೊಂಡ ಗಾಬಿತವಾಡ ವ್ಯಾಪ್ತಿಯಲ್ಲಿ,ಸಮುದ್ರದ ಅಲೆಗಳೊಂದಿಗೆ ಬಂದು ಕಡಲ ತಡಿಯಲ್ಲಿ ಚಡಪಡಿಸುವುದನ್ನು ಕಂಡ ಮೀನುಗಾರ ಮಹಿಳೆಯರು, ಮಕ್ಕಳು ಸೇರಿದಂತೆ ಸ್ಥಳೀಯರು ಮೀನಿಗಾಗಿ ಮುಗಿಬಿದ್ದು ಕೈಗೆ ಸಿಕ್ಕಷ್ಟು ಬಾಚಿಕೊಂಡು,ಸಖತ್ ಖುಷಿಗೊಂಡಿದ್ದಾರೆ.

ದಡದಲ್ಲಿ ರಾಶಿ ರಾಶಿ ಮೀನುಗಳು ಬಂದು ಬೀಳುತ್ತಿರುವ ಸುದ್ದಿ ಗ್ರಾಮದಲ್ಲಿ ಸಖತ್ ವೈರಲ್ ಆಗಿದೆ. ಹಲವರು ಮೀನುಗಳನ್ನು ಹಿಡಿದು, ಚೀಲ ಬುಟ್ಟಿಗೆ ತುಂಬಿಸಿಕೊಳ್ಳಲು ಮುಂದಾದರೆ,ಇನ್ನು ಕೆಲವರು ಈ ಪ್ರಕೃತಿ ವಿಸ್ಮಯವನ್ನು ತಮ್ಮ ಮೊಬೈಲ್ ಕ್ಯಾಮೆರಾ ಗಳಲ್ಲಿ ಸೆರೆಹಿಡಿದು ಸಂತಸ ಹಂಚಿಕೊoಡಿದ್ದಾರೆ.

ಸ್ಥಳೀಯ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಂಜುನಾಥ್ ಠಾಕೇಕರ್ ಮತ್ತಿತರ ಪ್ರಮುಖರು ಈ ಕುರಿತು ವಿಸ್ಮಯ ವಾಹಿನಿ ಯೊಂದಿಗೆ ಮಾತನಾಡಿ, ಕಡಲ ಮಕ್ಕಳಾದ ನಾವು ಸಮುದ್ರ ದೇವತೆಯನ್ನು ಈ ಮೊದಲಿನಿಂದಲೂ ಪೂಜಿಸಿಕೊಂಡು ಬರುತ್ತಿದ್ದು,ಅದನ್ನೇ ನಂಬಿ ನಮ್ಮ ಜೀವನ ನಡೆಸುತ್ತಿದ್ದೇವೆ.ನವರಾತ್ರಿಯ ಶುಭ ಸಂದರ್ಭದಲ್ಲಿ ದುರ್ಗಾದೇವಿ ಕೃಪೆ ಎನ್ನುವಂತೆ ಈ ದಿನ ಭೂತಾಯಿ ಎನ್ನುವ ಮೀನು ತಾನೇ ತಾನಾಗಿ ಕಡಲ ತಡಿಯಲ್ಲಿ ಬಂದು ನಮ್ಮವರಿಗೆ ಸಿಕ್ಕಿದ್ದು,ಒಂದರ್ಥದಲ್ಲಿ ವರದಾನ ಎಂದೇ ನಂಬುತ್ತೇವೆ ಎಂದಿದ್ದಾರೆ.

ವಿಸ್ಮಯ ನ್ಯೂಸ್, ವಿಲಾಸ ನಾಯಕ ಅಂಕೋಲಾ

Share

📢 Stay Updated!

Join our official WhatsApp group to get instant news updates, alerts, and exclusive stories – right on your phone.

💬 Join our WhatsApp Group

Don't Miss

ವರ್ಷಾಂತ್ಯಕ್ಕೆ 12 ಲಕ್ಷ ಲಾಭ ಗಳಿಸಿದ ಸೀತಾರಾಮ ಸಹಕಾರಿ ಸಂಘ

ಭಟ್ಕಳ: ಆರ್ಥಿಕ ವರ್ಷಾಂತ್ಯಕ್ಕೆ ಸಹಕಾರಿಯು 12 ಲಕ್ಷ ಲಾಭ ಗಳಿಸಿದೆ ಎಂದು ಶ್ರೀ ಸೀತಾರಾಮ ಸೌಹಾರ್ಧ ಪತ್ತಿನ ಸಹಕಾರಿ ಸಂಘ ನಿಯಮಿತದ ಅಧ್ಯಕ್ಷ ಹಾಗೂ ಉಧ್ಯಮಿ ವಿಠ್ಠಲ್ ನಾಯ್ಕ ತಿಳಿಸಿದರು. ತಾಲೂಕಿನ...

ಚಿಪ್ಪಿ ಫ್ಯಾಕ್ಟರಿ ಹತ್ತಿರದ ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತ ದೇಹ ಪತ್ತೆ

ಅಂಕೋಲಾ: ತಾಲೂಕಿನ ಶೆಟಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಯುವಕನೋರ್ವನ ಮೃತದೇಹ ಪತ್ತೆಯಾಗಿದ್ದು ಮೃತ ಯುವಕನನ್ನು ಸ್ಥಳೀಯ ಗ್ರಾಪಂ ವ್ಯಾಪ್ತಿಯ ಹಡವ ನಿವಾಸಿ ಸುಧೀರ...

🌐 📺 Visit Our Media Partner Site

ಉತ್ತರಕನ್ನಡ ಸುದ್ದಿ Update ಪಡೆಯಿರಿ

🔗 Go to Vismaya TV
Related Articles

ಪ್ರತಿಷ್ಠಿತ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ ಹೊನ್ನಾವರ ಇದರ ವಾರ್ಷಿಕ ಸರ್ವ ಸಾಧಾರಣ

ಹೊನ್ನಾವರ : ಇಲ್ಲಿನ ಪ್ರತಿಷ್ಠಿತ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ...

ಮಾನವೀಯತೆಯ ದೀಪ ಬೆಳಗಿಸಿದ ನೇತ್ರದಾನಿ ಕೃಷ್ಣ ನಾಯ್ಕ ಅಮರ

ಕುಮಟಾ : ತಾಲೂಕಿನ ಧಾರೇಶ್ವರ ಹೋಬಳಿ ಹರನೀರು ತುದಿಮನೆ ನಿವಾಸಿ ಕೃಷ್ಣ ನಾರಾಯಣ ನಾಯ್ಕ (77...

ಬಸ್ ಗೆ ಡಿಕ್ಕಿ ಹೊಡೆದ ಲಾರಿ : ಸ್ಟೇರಿಂಗ್ ಮಧ್ಯ ಸಿಲುಕಿದ ಲಾರಿ ಚಾಲಕ ಸಾವು: ಬಸ್ಸಿನಲ್ಲಿದ್ದ ಓರ್ವ ಪ್ರಯಾಣಿಕ ಸ್ಥಳದಲ್ಲಿಯೇ ನಿಧನ

ಅಂಕೋಲಾ: ಟ್ಯಾಂಕರ್ ಲಾರಿ ಮತ್ತು ಸಾರಿಗೆ ಸಂಸ್ಥೆಯ ಬಸ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ...

ಹೃದಯದಾಕಾರದ ಮುಖದ ಗೂಬೆ: ಶಾಲೆಗೆ ಬಂತು ಗುಮ್ಮ

ಅಂಕೋಲಾ: ಮಕ್ಕಳು ಊಟ, ತಿಂಡಿ, ನಿದ್ದೆ ಸರಿಯಾಗಿ ಮಾಡದಿದ್ದರೆ ಅಥವಾ ಬೇರೆ ಕಾರಣದಿಂದ ಹಠ ಹಿಡಿದರೆ...

ಸುಮಾರು 10 ತಿಂಗಳಿಂದ ಮಗ ಸಂಪರ್ಕಕ್ಕೆ ಸಿಗದೆ ನೊಂದ ತಂದೆ: ಮನೆಯಿಂದ ಮಲ್ಪೆಗೆ ಹೋದ ಮಗನೆಲ್ಲಿ ?

ಅಂಕೋಲಾ: ವ್ಯಕ್ತಿಯೋರ್ವ ಕಾಣೆಯಾಗಿ ಸುಮಾರು ಹತ್ತು ತಿಂಗಳುಗಳ ನಂತರ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಘಟನೆ...

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಅಂಕೋಲಾ ತಾಲೂಕಾ ಘಟಕ ಉದ್ಘಾಟನೆ

ಅಂಕೋಲಾ: ಪತ್ರಿಕೆ ಹಾಗೂ ಸುದ್ದಿ ಮಾಧ್ಯಮಗಳಿಂದ ಪ್ರತಿದಿನದ ಜಾಗತಿಕ ಆಗು ಹೋಗುಗಳ ಜ್ಞಾನವನ್ನು ಅರಿಯಲು ಸಾಧ್ಯವಿದ್ದು,...

ಚುಟುಕು ಬ್ರಹ್ಮ ದಿನಕರ ದೇಸಾಯಿ ಜನ್ಮದಿನಾಚರಣೆ

ಹೊನ್ನಾವರ: ಚುಟುಕು ಬ್ರಹ್ಮ ದಿನಕರ ದೇಸಾಯಿ ಜನ್ಮದಿನಾಚರಣೆ ಹೊನ್ನಾವರ ತಾಲೂಕಿನ ಕಾಸರಕೋಡದ ಜನತಾ ವಿದ್ಯಾಲಯದಲ್ಲಿ ಕನ್ನಡ...

ತಾತ್ಕಾಲಿಕ ವಿದ್ಯುತ್ ಸಂಪರ್ಕ ನೀಡಿ: ಹೆಸ್ಕಾಂ ಅಧಿಕಾರಿಗೆ ಸಚಿವ ಮಂಕಾಳ ವೈದ್ಯ ತಾಕೀತು

ಭಟ್ಕಳ: ಜನರಿಗೆ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಸಿ.ಸಿ ಓಸಿ ಪ್ರಮಾಣ ಪತ್ರವಿಲ್ಲದಿದ್ದರು, ಜನರಿಗೆ ಪಂಚಾಯತ್...