Important

ಆಯ ತಪ್ಪಿ ಸಮುದ್ರ ನೀರಿಗೆ ಬಿದ್ದು ಕಣ್ಮರೆಯಾದ ಮೀನುಗಾರ : ಕರಾವಳಿ ಕಾವಲು ಪಡೆಯ ಪಿ. ಎಸ್ ಐ ಗೆ ಕರೆ ಮಾಡಿದರೆ ಏನೇನೋ ಪ್ರಶ್ನೋತ್ತರ ! ?

Share

ಅಂಕೋಲಾ : ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿ ಒರ್ವ ಆಕಸ್ಮಿಕವಾಗಿ ಬೋಟಿನಿಂದ ಜಾರಿ ಸಮುದ್ರ ನೀರಿನಲ್ಲಿ ಬಿದ್ದು ಕಣ್ಮರೆಯಾದ ಘಟನೆ ಬೆಲೇಕೇರಿ ಸಮುದ್ರ ವ್ಯಾಪ್ತಿಯಲ್ಲಿ ರವಿವಾರ ಸಂಭವಿಸಿದೆ. ಭಾವಿಕೇರಿ ಹರಿಕಂತ್ರವಾಡಾ ನಿವಾಸಿ ಸತೀಶ ತಮ್ಮಣ್ಣಿ ಹರಿಕಂತ್ರ (40) ಕಣ್ಮರೆಯಾದ ಮೀನುಗಾರ.

ಸಿನೆಮಾ ಶೈಲಿಯಲ್ಲಿ ಹಣ ಸುಲಿಗೆ ಯತ್ನ : ಖಾಕಿ ಬಲೆಗೆ ಬಿದ್ದ ಆರೋಪಿಗಳು

ಈತ ಬೆಲೆಕೇರಿ ಮೀನುಗಾರಿಕಾ ಬಂದರಿನಿಂದ ಬೋಟ ಮೂಲಕ ಇತರೆ ಕಾರ್ಮಿಕರೊಂದಿಗೆ ತೆರಳಿ , ಸಮುದ್ರ ಮೀನುಗಾರಿಕೆ ನಡೆಸುತ್ತಿದ್ದಾಗ ರವಿವಾರ ಬೆಳಿಗ್ಗೆ ಆಕಸ್ಮಿಕವಾಗಿ ಈ ಜಲ ಅವಘಡ ಸಂಭವಿಸಿದೆ, ಕಣ್ಮರೆಯಾದವನ ಪತ್ತೆ ಕಾರ್ಯಕ್ಕೆ ಸ್ಥಳೀಯ ಮೀನುಗಾರರು ಮತ್ತಿತರರು ಬಹು ಹೊತ್ತು ಶೋಧ ನಡೆಸಿದ್ದು,ಕತ್ತಲಾವರಿಸಿದ್ದರಿಂದ ಶೋಧಕಾರ್ಯ ಮೊಟಕು ಗೊಳಿಸಿ ವಾಪಸ್ ಆಗಿದ್ದಾರೆ.

ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಕಾನೂನು ಕ್ರಮ ಮುಂದುವರೆದಿದ್ದು,ಘಟನೆ ಕುರಿತಂತೆ ಹೆಚ್ಚಿನ ಮತ್ತು ಅಧಿಕೃತ ಮಾಹಿತಿಗಳು ತಿಳಿದು ಬರಬೇಕಿದೆ.

ಕರಾವಳಿ ಕಾವಲು ಪಡೆಯ ಸ್ಪಂದನೆ ಬಗ್ಗೆ ಪ್ರಶ್ನೆ

ಜಲ ಅವಘಡ ಮತ್ತಿತರ ತುರ್ತು ಸಂದರ್ಭದಲ್ಲಿ ಕರಾವಳಿ ಕಾವಲು ಪಡೆಯವರು ಮೀನುಗಾರರ ರಕ್ಷಣೆ ಮತ್ತಿತರ ಕರ್ತವ್ಯ ನಿರ್ವಹಿಸಬೇಕೆಂದಿದ್ದರೂ, ಅದೇಕೋ ಏನೋ ಬೆಲೆಕೇರಿ ಕರಾವಳಿ ಕಾವಲು ಪಡೆಯ ಒರ್ವ ಪಿ ಎಸ್ ಐ , ಸಮಸ್ಯೆಗೆ ಸ್ಪಂದಿಸುವುದು ಹಾಗಿರಲಿ,ಫೋನ್ ಕರೆ ಮಾಡಿದವರಿಗೂ ಉಡಾಫೆ ರೀತಿಯಲ್ಲಿ ಬೇಜವಾಬ್ದಾರಿಯಿಂದ ಉತ್ತರಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಹಿರಿಯ ಅಧಿಕಾರಿಗಳಿಗೆ ಫೋನ್ ಕರೆ ಮಾಡಿ ತಿಳಿಸುವಂತಾಗಿದೆ.

ಇದೇ ಠಾಣೆಯ ಸ್ಥಳೀಯ ಅಧಿಕಾರಿ ಎಸ ಐ ಟಿ ಕರ್ತವ್ಯದಲ್ಲಿ ರುವುದರಿಂದ,ಸಂಬಂಧಿತ ಉಡುಪಿ ವಿಭಾಗದ ಹಿರಿಯ ಅಧಿಕಾರಿ (ಡಿವೈಎಸ್ಪಿ) ಅವರಿಗೆ ಕರೆ ಮಾಡಿ ವಿಷಯ ತಿಳಿಸುವಂತಾಗಿದ್ದು,ಹಿರಿಯ ಅಧಿಕಾರಿಗಳಾದ ಅವರು ಕೇವಲ ಎರಡೇ ಮೊಬೈಲ್ ರಿಂಗಣಕ್ಕೆ ಕರೆ ಸ್ವೀಕರಿಸಿ,ಸಾರ್ವಜನಿಕ ದೂರು ರೀತಿಯ ಫೋನ್ ಕರೆ ಆಲಿಸಿರುವ ರೀತಿ ಮತ್ತು ಸ್ವಂದನೆ ನಿಜಕ್ಕೂ ಅಭಿನಂದನೀಯ ಎಂಬ ಮಾತುಗಳು ಕೇಳಿಬರುವಂತಾಗಿದೆ.

ಸುಮಾರು 13 ವರ್ಷಗಳಿಂದ ಬೆಲೇಕೇರಿಯಲ್ಲಿ ಸಮುದ್ರ ಬೇಹುಗಾರಿಕೆ, ದೇಶದ ರಕ್ಷಣಾ ವ್ಯವಸ್ಥೆಗೆ ಬಲ ತುಂಬ ಬೇಕಿದ್ದ ಇಲ್ಲಿನ ಕರಾವಳಿ ಕಾವಲು ಪಡೆಯಲ್ಲಿ ಈ ಹಿಂದಿನ ಕೆಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಕ್ಕಮಟ್ಟಿಗೆ ಉತ್ತಮ ಕರ್ತವ್ಯ ನಿಭಾಯಿಸಿರಬಹುದಾದರೂ ಸಹ,ಈವರೆಗೂ ಹೇಳಿಕೊಳ್ಳುವಂತಹ ಯಾವುದೇ ದೊಡ್ಡ ಮಟ್ಟದ ಸಾಧನೆ, ಕಾರ್ಯಾಚರಣೆ ಮಾಡಿಲ್ಲ ಎನ್ನಬಹುದಾಗಿದೆ. ಈಗಿರುವ ಓರ್ವ ಅಧಿಕಾರಿಯಂತೂ ಫೋನ್ ಕರೆ ಸ್ವೀಕರಿಸುವಾಗಲೇ ನನ್ನ ನಂಬರ್ ನಿಮಗೆ ಕೊಟ್ಟಿದ್ಯಾರು ಎಂದು ಕೇಳುವ ರೀತಿ,ಅವರ ಕರ್ತವ್ಯಕ್ಕೆ ಹಿಡಿದ ಕೈಗನ್ನಡಿಯಂತಿದೆ ಎಂದೇ ಭಾವಿಸಬೇಕಾಗುತ್ತದೆ.

ಇಂತಹ ಅಧಿಕಾರಿಗಳಿಂದಲೇ ಇಲಾಖೆಗೂ ಕೆಟ್ಟ ಹೆಸರು ?

ಹೀಗಾಗಿ ಈ ಅಧಿಕಾರಿ ತನ್ನ ಗುಣ ಸ್ವಭಾವವನ್ನು ಬದಲಿಸಿ ಕೊಂಡು ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸುವಂತಾಗಲಿ, ಇಲ್ಲವೇ ಇಂಥವರಿಗೆ ಹಿರಿಯ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಹೇಗೆ ವರ್ತಿಸಬೇಕೆಂಬ ಕನಿಷ್ಠ ಜ್ಞಾನವನ್ನು ಹೇಳಿಕೊಡಲಿ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಇಲ್ಲದಿದ್ದರೆ ಇಂತಹ ಅಧಿಕಾರಿಗಳಿಂದಲೇ ಇಲಾಖೆಗೂ ಕೆಟ್ಟ ಹೆಸರು ಬರುವ ಸಾಧ್ಯತೆ ಹೆಚ್ಚಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Share

📢 Stay Updated!

Join our official WhatsApp group to get instant news updates, alerts, and exclusive stories – right on your phone.

💬 Join our WhatsApp Group

Don't Miss

ಮುರಿನಕಟ್ಟೆ ಪ್ರಕರಣ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಕಾಗೇರಿ ಆಗ್ರಹ

ಭಟ್ಕಳ:ಮುರಿನಕಟ್ಟೆ ವಿಚಾರವು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಹಿಂದೂಗಳ ಭಾವನೆಗಳಿಗೆ ಸಂಬAಧಿಸಿದ ವಿಷಯವಾಗಿದ್ದು, ಕೆಲ ಮತಾಂಧ ಶಕ್ತಿಗಳು ಇದನ್ನು ಬಳಸಿಕೊಂಡು ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಪ್ರಯತ್ನ ನಡೆಸಿವೆ ಎಂದು ವಿಶ್ವೇಶ್ವರ ಹೆಗಡೆ...

ಅಳ್ವೆಕೋಡಿ ಕಪ್ಪೆಚಿಪ್ಪು ದುರಂತ: ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ ಕಾಗೇರಿ

ಭಟ್ಕಳ: ತಾಲೂಕಿನ ಅಳ್ವೆಕೋಡಿಯ ಕಪ್ಪೆಚಿಪ್ಪು ದುರಂತದಲ್ಲಿ ಸಾವನ್ನಪ್ಪಿದ ಕುಟುಂಬದವರನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ ಮಾಡಿ ಸಾಂತ್ವನ ಹೇಳಿದರು. ಈ ವೇಳೆ ಮಾತನಾಡಿದ ಅವರು, ನಡೆಯಬಾರದ ದುರಂತವೊoದು ಸಂಭವಿಸಿದ್ದು, ಈ...

🌐 📺 Visit Our Media Partner Site

ಉತ್ತರಕನ್ನಡ ಸುದ್ದಿ Update ಪಡೆಯಿರಿ

🔗 Go to Vismaya TV
Related Articles

ಪ್ರಗತಿ ವಿದ್ಯಾಲಯದಲ್ಲಿ ಶಾಲಾ ಪ್ರಾರಂಭೋತ್ಸವ; ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ

ಕುಮಟಾ: ಮೂರೂರಿನ ಪ್ರಗತಿ ವಿದ್ಯಾಲಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಅತ್ಯಂತ ವಿಜೃಂಭಣೆಯಿoದ ನೆರವೇರಿತು....

ಬಿಜಿಎಸ್ ಸೆಂಟ್ರಲ್ ಸ್ಕೂಲ್ & ಪಿಯು ಕಾಲೇಜಿನಲ್ಲಿ ನೇಮಕಾತಿ: ಕೂಡಲೇ ಸಂಪರ್ಕಿಸಿ

ಉತ್ತರಕನ್ನಡ ಜಿಲ್ಲೆಯ ಮಿರ್ಜಾನಿನ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಬಿಜಿಎಸ್ ಸೆಂಟ್ರಲ್ ಸ್ಕೂಲ್ & ಆದಿಚುಂಚನಗಿರಿ...

ಅಂಕೋಲಾದಬಾಳೇಗುಳಿ ಬೊಗ್ರಿಬೈಲಿನಲ್ಲಿ ಶ್ರೀ ಉದ್ಭವ ನಾಗಚೌಡೇಶ್ವರಿ–ವೀರಾಂಜನೇಯ ದೇವರ ಚತುರ್ಥ ವರ್ಧಂತಿ ಮಹೋತ್ಸವ

ಅಂಕೋಲಾ: ತಾಲೂಕಿನ ಬಾಳೇಗುಳಿ ಬೊಗ್ರಿಬೈಲಿನಲ್ಲಿರುವ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶ್ರೀ ಉದ್ಭವ ನಾಗಚೌಡೇಶ್ವರಿ ಅಮ್ಮನವರು ಹಾಗೂ...

ಹೋಮಿಯೋಪತಿ ಸಂಸ್ಥಾಪಕ ಹಾನಿಮ್ಯಾನ್ ಅವರ 271ನೇ ಜನ್ಮ ದಿನಾಚರಣೆ

ಅಂಕೋಲಾ: ಇಂಗ್ಲಿಷ್ ಔಷಧಿಗಳನ್ನು ಸೇವಿಸಿದಾಗ ತಾತ್ಕಾಲಿಕವಾಗಿ ಕಾಯಿಲೆ ವಾಸಿಯಾದಂತೆ ಅನ್ನಿಸಿದರೂ, ಕೆಲವೇ ದಿನಗಳಲ್ಲಿ ಅದು ಮರುಕಳಿಸುವ...

ಗೋಕರ್ಣಕ್ಕೆ ಆಗಮಿಸಲಿದೆ ವರದಹಳ್ಳಿಯ ಶ್ರೀಧರ ಸ್ವಾಮಿಗಳ ಪಾದುಕೆ: ದರ್ಶನ ಮತ್ತು ಫಲಸಮರ್ಪಣೆಗೆ ಸುವರ್ಣಾವಕಾಶ

ಗೋಕರ್ಣ: ವರದಹಳ್ಳಿಯ ಸದ್ಗುರು ಶ್ರೀಧರ ಸ್ವಾಮಿಗಳ ಪಾದುಕೆ ಇದೇ ಏಪ್ರಿಲ್ 8ರ ಬುಧರವಾರ ಮತ್ತು 9ರ...

ವಿಸ್ಮಯ ಟಿ.ವಿ ಹೆಸರಿನಲ್ಲಿ ಮೋಸ: ವೀಕ್ಷಕರ, ಜಾಹೀರಾತುದಾರರ ಗಮನಕ್ಕೆ

ಕುಮಟಾ: ಕಳೆದ 13 ವರ್ಷಗಳಿಂದ ಸದಭಿರುಚಿಯ ಕಾರ್ಯಕ್ರಮಗಳ ಮೂಲಕ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮನೆಮಾತಾಗಿರುವ ವಿಸ್ಮಯ...

ಫೋಟೋಗ್ರಾಫರ್ ಪ್ರಶಾಂತ ವಿಧಿವಶ : ಪಚ್ಚು ಎಂದೇ ಚಿರಪರಿಚಿತನಾಗಿದ್ದ ಯುವಕ ಇನ್ನು ನೆನಪು ಮಾತ್ರ

ಅಂಕೋಲಾ : ಪಟ್ಟಣ ವ್ಯಾಪ್ತಿಯ ಲಕ್ಷ್ಮೇಶ್ವರ ಕುಂಬಾರಕೇರಿ ನಿವಾಸಿ, ಪ್ರಶಾಂತ (ಪಚ್ಚು ) ಕೆ ನಾಯ್ಕ...

ತರಂಗ ಎಲೆಕ್ಟ್ರಾನಿಕ್ಸ್ ನಲ್ಲಿ ಯುಗಾದಿ ಉತ್ಸವ: ಏ.ಸಿ ಮೇಲೆ ಬಂಪರ್ ಆಫರ್

ಕುಮಟಾ: ಉತ್ತರಕನ್ನಡ ಜಿಲ್ಲೆಯ ಅತ್ಯಂತ ವಿಶ್ವಾಸಾರ್ಹ ಮತ್ತು ಅತಿದೊಡ್ಡ ಶೋರೂಮ್ ತರಂಗ ಎಲೆಕ್ಟ್ರಾನಿಕ್ಸ್ ನಲ್ಲಿ ಯುಗಾದಿ...