ಹೊನ್ನಾವರ: ಕವಲಕ್ಕಿಯ ಅಯ್ಯಪ್ಪ ಸ್ವಾಮಿಯ ಸನ್ನಿಧಾನದಲ್ಲಿ ಮಾಲಾಧಾರಿಗಳಿಂದ ಶ್ರೀ ಕ್ಷೇತ್ರ ಶಬರಿಮಲೆ ಯಾತ್ರೆಯ ಪ್ರಯುಕ್ತ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಹಾಗೂ ಅನ್ನದಾನ ಕಾರ್ಯಕ್ರಮವು, ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗೆ ಶ್ರದ್ಧಾಭಕ್ತಿಯಿಂದ ನೇರವೇರಿತು. ಅಯ್ಯಪ್ಪ ಸ್ವಾಮಿಯ 18 ಮೆಟ್ಟಿಲಿನ ಪಡಿ ಪೂಜೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಗುರುಸ್ವಾಮಿಯಾದ ಮಂಜುನಾಥ ಸ್ವಾಮಿ ಮಾತನಾಡಿ ನಾವು 38 ವರ್ಷಗಳಿಂದ ಮಾಲೆ ಧರಿಸಿಕೊಂಡು ಬರುತ್ತಿದ್ದು, ಓಳ್ಳೇಯ ರೀತಿಯಿಂದ ನಡೆಸಿಕೊಂಡು ಬರುತ್ಥಿದ್ದೇವೆ. ನಾನು ಪ್ರತಿ ತಿಂಗಳಿನಲ್ಲಿ ಶಬರಿಮಲೆ ಯಾತ್ರೆಯನ್ನು ಕೈಗೊಳ್ಳುತ್ತಿದ್ದು, ಅಯ್ಯಪ್ಪ ಸ್ವಾಮಿಯು ನಂಬಿದವರನ್ನು ಯಾವತ್ತು ಕೈಬಿಡುವುದಿಲ್ಲ. ಅಯ್ಯಪ್ಪ ಭಕ್ತರು ಅಯ್ಯಪ್ಪ ಮಾಲೆಯನ್ನು ಧರಿಸಿ ಶಬರಿಮಲೆ ಯಾತ್ರೆ ಕೈಗೊಳ್ಳುತ್ತಿದ್ದೇವೆ ಎಂದು ವೃತದ ಬಗ್ಗೆ ಮಾಹಿತಿ ನೀಡಿದರು.
ಅಯ್ಯಪ್ಪ ಸ್ವಾಮಿಗೆ ತುಳಸಿ ಅರ್ಚನೆ, ಪುಷ್ಪಾರ್ಚನೆ, ದೂಪದ ಆರತಿ, ಭಸ್ಮದ ಆರತಿ, ತುಪ್ಪದ ಆರತಿ, ಪಂಚ ಆರತಿ ಹೀಗೆ ವಿವಿಧ ವಿಶೇಷ ಪೂಜೆಗಳು ನೇರವೇರಿತು. ಸುತ್ತಮುತ್ತಲಿನ ಭಕ್ತರು ಸ್ವಾಮಿಯ ಸನ್ನಿಧಾನದಲ್ಲಿ ಬಂದು ತುಪ್ಪದ ಕಾಯಿ ಸೇವೆಗಳನ್ನ ಸಮರ್ಪಿಸಿದರು. 8 ಮಾಲಾಧಾರಿಗಳಿಂದ ಸ್ವಾಮಿಗೆ ವಿಶೇಷ ಸೇವೆಗಳು ನಡೆಯಿತು.
ಸನ್ನಿಧಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಕಲಿಯುಗದ ವರದನ ನಾಮಸ್ಮರಣೆ ಮಾಡುತ್ತಾ ಮಾಲಾಧಾರಿ ಸ್ವಾಮಿಗಳು ಭಕ್ತಿಭಾವದಿಂದ ಸ್ವಾಮಿಯೆ ಶರಣಂ ಅಯ್ಯಪ್ಪ ಎಂದು ಪೂಜೆ ಸಲ್ಲಿಸಿದರು. ಭಕ್ತರು ಪೂಜಾಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀದೇವರ ದರ್ಶನ ಪಡೆದು ಕೃತಾರ್ತರಾದರು.ನಂತರ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಭಜನಾ ಕಾರ್ಯಕ್ರಮ ನಡೆಯಿತು. ನಂತರ ಮಹಾಪೂಜೆ,ಇರುಮುಡಿ ಕಟ್ಟುವ ಕಾರ್ಯಕ್ರಮ ನಡೆಯಿತು. ತದನಂತರ ಸ್ವಾಮಿಗಳು ಶಬರಿಮಲೆ ಪ್ರಯಾಣ ಬೆಳೆಸಿದರು.
ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ