ಅಂಕೋಲಾ: ನಾಡಿನ ಸಾಂಪ್ರದಾಯಿಕ ಮತ್ತು ಜನಪದ ಕಲಾ ಪ್ರಕಾರಗಳಲ್ಲಿ ಸುಗ್ಗಿಗೆ ತನ್ನದೇ ಆದ ಪ್ರಾಮುಖ್ಯತೆ ಇದ್ದು,ಕರಾವಳಿ ಜಿಲ್ಲೆಯ ಹಲವೆಡೆ ಸುಗ್ಗಿ ಮತ್ತು ಹೋಳಿ ಸಂಭ್ರಮ ಜೋರಾಗುತ್ತಿದೆ. ಅಂಕೋಲಾ ತಾಲೂಕಿನ ಮಟ್ಟಿಗೆ ಹೇಳುವುದಾದರೆ ತಾಲೂಕಿನ ವಿವಿಧಡೆ ನೆಲೆಸಿರುವ ಹಾಲಕ್ಕಿಗಳು, ಕೋಮಾರಪಂತರು, ನಾಮಧಾರಿಗಳು, ಹಳ್ಳೇರರು ಮತ್ತಿತರರು,ತಮ್ಮ ಸಂಪ್ರದಾಯದoತೆ ಆಯಾ ಆಯಾ ಭಾಗಗಳಲ್ಲಿ ನಿಗದಿಪಡಿಸಿಕೊಂಡ ವರ್ಷಗಳಂದು, ಆಗಾಗ ಸುಗ್ಗಿ ಕುಣಿತ ಪ್ರದರ್ಶಿಸುತ್ತಲೇ ಇರುತ್ತಾರೆ. ಈ ವರ್ಷ ಹೊನ್ನೆಬೈಲ್ ನ ಹಾಲಕ್ಕಿಗಳು , ಬಬ್ರುವಾಡದ ನಾಮಧಾರಿಗಳ ಸುಗ್ಗಿ ಹಿಗ್ಗು ಕಂಡುಬoದಿದೆ.
ಬ್ರಿಟಿಷ್ ಕಾಲದಲ್ಲೇ ತಾಮ್ರಪಟ ಗೌರವ ಪಡೆದ ನಾಡಿನ ಏಕೈಕ ಸುಗ್ಗಿ ತಂಡ
ಈ ನಡುವೆ ಬೆಳಂಬಾರದ ಹಾಲಕ್ಕಿಗಳ ಸುಗ್ಗಿ ಸಂಭ್ರಮ ಪ್ರತಿ ವರ್ಷ ಮುಂದುವರೆದುಕೊoಡು ಬಂದಿದೆ. . ಅಷ್ಟೇ ಅಲ್ಲದೇ ಈ ಸುಗ್ಗಿ ತಂಡ ಮತ್ತು ದೈವ ಮಹಿಮೆಗೆ ಅಂದಿನ ಬ್ರಿಟಿಷ್ ಆಡಳಿತವೇ ತಲೆ ಬಾಗಿ, ತದನಂತರ ಸರ್ಕಾರದ ಪರವಾಗಿ ತಾಮ್ರ ಪತ್ರ ನೀಡಿ, ಹೋಳಿ ಹುಣ್ಣಿಮೆ ದಿನ ಬ್ರಿಟಿಷ್ ತಹಸೀಲ್ದಾರ್ ಅವರಿಂದ,ಪ್ರತಿ ವರ್ಷ ತಾಲೂಕ ಕಚೇರಿಗೆ ಮೆರವಣಿಗೆ ಮೂಲಕ ಬಂದು ಹೋಗಲು ವಿನಂತಿ ಮಾಡಿರುವುದು ಈ ಸುಗ್ಗಿ ತಂಡದ ಐತಿಹಾಸಿಕ ಮಹತ್ವವನ್ನು ಎತ್ತಿ ತೋರಿಸುವಂತಿದೆ.
ಅoದಿನಿoದ ಇಂದಿನವರೆಗೆ ಈ ಸಂಪ್ರದಾಯ ಮುಂದುವರೆದುಕೊoಡು ಬಂದಿದ್ದು ಸರ್ಕಾರದಿಂದ ಅಧಿಕೃತ ಗೌರವವನ್ನು ಪಡೆಯುತ್ತಿರುವ ನಾಡಿನ ಏಕೈಕ ಸುಗ್ಗಿ ತಂಡ ಎಂಬ ಹಿರಿಮೆಯೂ ಈ ತಂಡಕ್ಕೆ ಇದೆ. ಈ ವರ್ಷ ಮಾರ್ಚ್ 13ರ ಗುರುವಾರ ಸಾಯಂಕಾಲ 4 ಗಂಟೆಯಿoದ ಅಂಕೋಲಾ ಪಟ್ಟಣ ವ್ಯಾಪ್ತಿಯಲ್ಲಿ ಬೆಳಂಬಾರ ಸುಗ್ಗಿ ತಂಡದ ಮೆರವಣಿಗೆ ಕಾಣಬಹುದಾಗಿದ್ದು,ಕೊನೆಯಲ್ಲಿ ತಹಶೀಲ್ದಾರ್ ಕಚೇರಿಯ ಗೋಡೆ ಗಣಪತಿ ಪಕ್ಕದ ಆವರಣದಲ್ಲಿ ವಿಶೇಷ ಕುಣಿತ ಪ್ರದರ್ಶಿಸಿ ಅಲ್ಲಿ ತಾಲೂಕ ಆಡಳಿತದಿಂದ ತಸ್ಥಿಕ್ ಗೌರವ ಸ್ವೀಕರಿಸಲಿದೆ. ಬಳಿಕ ಪೊಲೀಸ್ ಠಾಣೆಯಲ್ಲೂ ವಿಶೇಷ ಪ್ರದರ್ಶನ ನೀಡಲಿದೆ.
ಅದಕ್ಕಾಗಿ ಈಗಾಗಲೇ ತಾಲೂಕಾಡಳಿತ ಮತ್ತು ಪೊಲೀಸ್ ಇಲಾಖೆ ಪೂರ್ವಭಾವಿ ಸಭೆ ಕರೆದು ಸಿದ್ಧತೆ ಕೈಗೊಂಡಿದೆ. ಸುಗ್ಗಿ ತಂಡದ ಜೊತೆ ವಿವಿಧ ವೇಷ ಭೂಷಣಗಳು ಮೆರವಣಿಗೆಯ ಅಂದ ಹೆಚ್ಚಿಸಲಿದ್ದು,ಸಾಮಾಜಿಕ, ರಾಜಕೀಯ ಹಾಗೂ ಇತರೆ ವಿಭಾಗಗಳ ವಿಡಂಬನೆ,ಜನಜಾಗ್ರತಿ , ಪೌರಾಣಿಕ ಮತ್ತಿತರ ಸನ್ನಿವೇಶಗಳನ್ನು ಪ್ರದರ್ಶಿಸುವ ಸ್ಥಳೀಯರ ಈ ಸಂಪ್ರದಾಯ ಹಗರಣ ಎಂದೇ ಖ್ಯಾತವಾಗಿದೆ. ಇವನ್ನೆಲ್ಲ ನೋಡಲೆಂದೇ ದೇಶ ವಿದೇಶಗಳಲ್ಲಿ ನೆಲೆಸಿರುವ ಸಾವಿರಾರು ಜನ ಕುತೂಹಲದಿಂದ ಕಾಯುತ್ತಿರುತ್ತಾರೆ., ಮಾರ್ಚ್ 13ರ ಗುರುವಾರ ಅಂಕೋಲಾ ಪಟ್ಟಣ ಜನಜಂಗುಳಿಯಿoದ ಕೂಡಿರಲಿದ್ದು,ಸುಗ್ಗಿ ಸಂಭ್ರಮಕ್ಕೆ ಸಾಕ್ಷಿಯಾಗಿದೆ.
ಜನಪದ ಕಲೆಯ ಮೆರಗಿನೊಂದಿಗೆ,ಧಾರ್ಮಿಕ ಹಾಗೂ ಐತಿಹಾಸಿಕ ಮಹತ್ವ ಸಾರುವ,ಪ್ರಸ್ತುತ ವಿದ್ಯಮಾನಗಳು ಸೇರಿದಂತೆ ವಿವಿಧ ಕಾಲಘಟ್ಟದ ಪ್ರಮುಖ ಸನ್ನಿವೇಶಗಳ ಪ್ರದರ್ಶನಕ್ಕೆ ಬೆಳಂಬರ ಹಾಲಕ್ಕಿಗಳ ಸುಗ್ಗಿ ತಂಡ ಸಿದ್ಧತೆ ನಡೆಸಿದ್ದು,ಊರ ಗೌಡರಾದ ಷಣ್ಣು ಖ ಗೌಡ ಹಾಗೂ ಸುಗ್ಗಿ ತಂಡದ ಪ್ರಮುಖರು ಮತ್ತು ಬೆಳಂಬಾರ ಊರ ನಾಗರಿಕರು ಸರ್ವರ ಸಹಕಾರ ಕೋರಿದ್ದಾರೆ. ಹಾಲಕ್ಕಿ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಹನುಮಂತ ಗೌಡ ಚುಟುಕಾಗಿ ಮಾತನಾಡಿ, ಹಾಲಕ್ಕಿ ಸುಗ್ಗಿ ಸಂಪ್ರದಾಯದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿ, ಸಮಾಜದ ಪರವಾಗಿ ಸರ್ವರಿಗೂ ಸ್ವಾಗತ ಕೋರಿದ್ದಾರೆ
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ