ಅಂಕೋಲಾ ಬಾಳೆಗುಳಿ ಕ್ರಾಸ್ ಬಳಿ ಹೆದ್ದಾರಿ ಹೊಂಡದಲ್ಲಿ ಸಿಲುಕಿದ ಲಾರಿ
Big News

ಹೆದ್ದಾರಿ ಹೊಂಡದಲ್ಲಿ ಲಾರಿ ಸಿಲುಕಿ ಸಂಚಾರ ಅಸ್ತವ್ಯಸ್ತ: ಈ ನರಕ ಯಾತನೆಗೆ ಕೊನೆ ಎಂದು?

Share

ಅಂಕೋಲಾ, ಸೆಪ್ಟೆಂಬರ್ 3: ಹೊಂಡ ಗುಂಡಿಗಳ ಹೆದ್ದಾರಿ, ಸಾವು ನೋವು ಹಾಗೂ ಅಪಘಾತ ಮತ್ತು ಅವಾಂತರಗಳಿಗೆ ರಹದಾರಿ ಎನ್ನುವುದು ಅಂಕೋಲಾದಲ್ಲಿ ಸಾಮಾನ್ಯ ಎನಿಸುವಂತಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಣ್ಣಿದ್ದೂ ಕುರುಡುತನ ಮುಂದುವರಿಸಿದoತಿದ್ದು ಅವರ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯಿಂದ ಹೆದ್ದಾರಿ ಸಂಚಾರ ಮಾಡುವಾಗ ಹೆದರಿ ಹೆದರಿ ಸವಾರಿ ಮಾಡ ಬೇಕಾದ ದುಸ್ಥಿತಿ ತರದೋರಿದೆ.

ಅದಕ್ಕೆ ಉದಾಹರಣೆ ಎಂಬoತೆ ತಾಲೂಕಿನ ಬಾಳೆಗುಳಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ ಮಧ್ಯೆ ನಿರ್ಮಾಣವಾಗಿರುವ ಬೃಹತ್ ಹೊಂಡದಲ್ಲಿ ಸರಕು ತುಂಬಿದ ಲಾರಿಯೊಂದರ ಟಯರ್ ಸಿಲುಕಿದ ಪರಿಣಾಮ ಲಾರಿ ಮುಂದೆ ಚಲಿಸಲಾಗದೇ ಬಿಡಿ ಭಾಗಗಳಿಗೆ ಹಾನಿ ಸಂಭವಿಸಿ ಲಾರಿ ಅಪಾಯಕಾರಿ ರೀತಿಯಲ್ಲಿ ಕೆಟ್ಟು ನಿಂತ ಘಟನೆ ಸಂಭವಿಸಿದೆ.

ಹೆದ್ದಾರಿ ಹೊಂಡಗಳಿಂದ ಪ್ರತಿದಿನ ವಾಹನ ಹಾನಿ, ಅಪಘಾತ ಭೀತಿ

ತಾಲೂಕಿನ ಬಾಳೆಗುಳಿ ಕ್ರಾಸ್ ನಿಂದ ಯಲ್ಲಾಪುರ ಕಡೆ ಸಾಗುವ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಕೆಟ್ಟು ಹೊಂಡಮಯವಾಗಿ ಹಲವಾರು ಅಪಘಾತಗಳಿಗೆ ಕಾರಣವಾಗುತ್ತಿದ್ದು ರಸ್ತೆ ಹೊಂಡಗಳಿoದಾಗಿ ಪ್ರತಿದಿನ , ಹಲವಾರು ವಾಹನಗಳು ಕೆಟ್ಟು ನಿಲ್ಲುತ್ತಿವೆಯಲ್ಲದೇ, ಸುಮಾರು ಒಂದುವರೆ ತಾಸು ಪ್ರಯಾಣದ ಅವಧಿ ಈಗ ಎರಡೂವರೆ ತಾಸು ತೆಗೆದುಕೊಳ್ಳುತ್ತಿದೆ.

ಹುಬ್ಬಳ್ಳಿ ಕಡೆಯಿಂದ ಬರುತ್ತಿದ್ದ ಲಾರಿಯೊಂದು ಬಾಳೆಗುಳಿ ಕ್ರಾಸ್ ಬಳಿ ಬೃಹತ್ ರಸ್ತೆ ಹೊಂಡಕ್ಕೆ ಬಿದ್ದು ಲಾರಿಯ ಹಿಂಬದಿ ಟಯರ್ ಎಕ್ಸಲ್ ತುಂಡಾಗಿ ಲಾರಿ ರಸ್ತೆಗೆ ಉರುಳಿ ಬೀಳುವ ರೀತಿಯಲ್ಲಿ ಒರಗಿ ನಿಂತಿದ್ದು, ರಸ್ತೆಯಲ್ಲಿ ಸಂಚರಿಸುವ ಕಾರು ಮತ್ತಿತರ ವಾಹನಗಳ ಚಾಲಕರು ಲಾರಿ ತಮ್ಮ ವಾಹನಗಳ ಮೇಲೆ ಉರುಳಿ ಬೀಳುವುದೋ ಎನ್ನುವ ಭಯದಿಂದ ಸಂಚರಿಸುವoತಾಯ್ತು.

ಹೆದ್ದಾರಿ ಹೊಂಡಗಳಿಂದ ವಾಹನ ಹಾನಿ, ಅಪಘಾತ ಭೀತಿ

ರಾಷ್ಟ್ರೀಯ ಹೆದ್ದಾರಿ ರಸ್ತೆ ಹೊಂಡಗಳು ಇದೀಗ ವಾಹನಗಳ ಚಾಲಕರಿಗೆ ಭಯ ಹುಟ್ಟಿಸಿದರೆ ವಾಹನಗಳ ಬಿಡಿ ಭಾಗ ಕೆಟ್ಟು ಮಾಲಕರು ಸಾವಿರಾರು ರೂಪಾಯಿ ನಷ್ಟ ಅನುಭವಿಸುತ್ತಿದ್ದಾರೆ. ಈ ರಾಷ್ಟ್ರೀಯ ಹೆದ್ದಾರಿಯ ದುಸ್ಥಿತಿ ಇದೀಗ ದೇಶಾದ್ಯಂತ ಚರ್ಚೆಗೆ ಕಾರಣವಾಗಿದ್ದು, ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾದಾಗ ಹೊಂಡ ಸರಿ ಪಡಿಸುವ ಕೆಲ ತೇಪೆ ಕಾರ್ಯ ನಡೆಸುವುದನ್ನು ಕಾಣಬಹುದಾಗಿದೆ.

ಅಂಕೋಲಾ ಹೆದ್ದಾರಿ ಅವ್ಯವಸ್ಥೆ: ಈ ಸುದ್ದಿಯನ್ನೂ ಓದಿ: ಹೊಂಡದಲ್ಲಿ ಗಿಡನೆಟ್ಟು ಸಾರ್ವಜನಿಕರ ಆಕ್ರೋಶ

ಬಹಳಷ್ಟು ಜನ ವಾಹನಗಳ ಮಾಲಿಕರು ಇಲ್ಲಿನ ರಸ್ತೆ ಮೂಲಕ ತಮ್ಮ ವಾಹನಗಳನ್ನು ಓಡಿಸಲು ಬಾಡಿಗೆ ಪಡೆಯಲು ನಿರಾಕರಿಸುತ್ತಿದ್ದಾರೆ ಎನ್ನುವ ಮಾತುಗಳು ಸಾರಿಗೆ ಉದ್ಯಮಿ ಗಣಪತಿ ನಾಯಕ ಮೂಲೆಮನೆ ಮತ್ತಿತರರಿಂದ ಕೇಳಿ ಬಂದಿದ್ದು, ಹೆದ್ದಾರಿ ಸಂಚಾರ ನರಕ ಯಾತನೆಗೆ ಕೊನೆ ಇಲ್ಲವೇ ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Share

📢 Stay Updated!

Join our official WhatsApp group to get instant news updates, alerts, and exclusive stories – right on your phone.

💬 Join our WhatsApp Group

Don't Miss

ಬಲು ಅಪರೂಪ ಕೆಂಪು ಬಣ್ಣದ ಈ ಸಿಂಧೂರ ಗಣಪ: ದರ್ಶನ ಮಾತ್ರದಿಂದಲೇ ಪರಿಹಾರವಾಗುವುದಂತೆ ಜನ್ಮಾಂತರಗಳ ಪಾಪ

ಅಂಕೋಲಾ: ವಿಶ್ವದಾದ್ಯಂತ ಪ್ರಥಮ ಪೂಜಿತ, ಏಕದಂತನ ಆರಾಧನೆ ಜೋರಾಗಿ ನಡೆದಿದ್ದು ಚೌತಿಯ ಸಂಭ್ರಮ ಎಲ್ಲೆಡೆ ಕಂಡುಬರುತ್ತಿದೆ. ಈ ನಡುವೆ ಅಂಕೋಲಾ ತಾಲೂಕಿನ ಸಾರ್ವಜನಿಕ ಗಣಪತಿಗಳಲ್ಲಿ ಮೊದಲ ಗಣಪ ಎನ್ನುವ ಪ್ರಸಿದ್ಧಿ ಪಡೆದಿರುವುದು...

ಐತಿಹಾಸಿಕ ಚಂದ್ರಗ್ರಹಣ: ಆರಂಭ-ಮುಕ್ತಾಯ: ಚಂದ್ರಗ್ರಹಣ ಕುರಿತ ಸಾಮಾನ್ಯ ಪ್ರಶ್ನೆಗಳಿಗೆ ಉತ್ತರ

ವಿಸ್ಮಯ ಟಿ.ವಿ ನ್ಯೂಸ್ ಡೆಸ್ಕ್: ಭಾರತ ಸೇರಿದಂತೆ ವಿಶ್ವದಾದ್ಯಂತ 2025ರ ಎರಡನೇ ಮತ್ತು ವರ್ಷದ ಕೊನೆಯ ಚಂದ್ರಗ್ರಹಣ ಸೆಪ್ಟೆಂಬರ್ 7 ರಂದು ಸಂಭವಿಸಲಿದೆ. ಈ ಸಮಯದಲ್ಲಿ ಚಂದ್ರ ಕೆಂಪು ಬಣ್ಣದಲ್ಲಿ ಗೋಚರಿಸಲಿದ್ದು,...

🌐 📺 Visit Our Media Partner Site

ಉತ್ತರಕನ್ನಡ ಸುದ್ದಿ Update ಪಡೆಯಿರಿ

🔗 Go to Vismaya TV
Related Articles

ಅಕ್ರಮ ಗೋಸಾಗಾಟ: 7 ಲಕ್ಷ ಮೌಲ್ಯದ ಜಾನುವಾರು ವಶಕ್ಕೆ

ಭಟ್ಕಳ: ತಾಲೂಕಿನಲ್ಲಿ ಅಕ್ರಮ ಗೋಸಾಗಾಟ ಪ್ರಕರಣ ಪದೇ ಪದೇ ಸದ್ದು ಮಾಡುತ್ತಿದ್ದು, ಬೆಳಗಿನ ಜಾವ ಗ್ರಾಮೀಣ...

ಕುಮಟಾ ಪೊಲೀಸ್ ಗಣೇಶೋತ್ಸವ ಸಂಭ್ರಮ: ನೂರಾರು ಭಕ್ತರಿಂದ ಪ್ರಸಾದ ಸ್ವೀಕಾರ

ಕುಮಟಾ: ಪಟ್ಟಣದ ಎಲ್ಲಡೆ ಸಂಭ್ರಮದಿoದ ಗಣೇಶ ಚತುರ್ಥಿಯನ್ನು ಆಚರಿಸಲಾಗಿದ್ದು ಕುಮಟಾ ಪೊಲೀಸ್ ಠಾಣೆಯ ಆರಾಧ್ಯ ದೇವರು...

ನಾಕುತಂತಿ ಬದುಕಿನ ಸಮನ್ವಯತೆಯ ಸಾರ ಹೊಂದಿದೆ: ಸಾಹಿತಿ ಪುಟ್ಟ ಕುಲಕರ್ಣಿ

ಕುಮಟಾ: ಬದುಕಿಗೂ ಮತ್ತು ಸಂಸ್ಕೃತಿಗೂ ಇರುವ ಅವಿನಾಭಾವ ಸಂಬಂಧ ಗಟ್ಟಿಯಾದಗ ಮಾತ್ರ ಬಾಳು ಸುಂದರವಾಗುತ್ತದೆ ....

ಮನೆಯ ಮೆಟ್ಟಿಲುಗಳ ಮೇಲೆ ಚಿರತೆ ಓಡಾಟ : ಗ್ರಾಮಸ್ಥರಲ್ಲಿ ಆತಂಕ

ಸಿದ್ದಾಪುರ: ಚಿರತೆಯೊಂದು ರಾತ್ರಿಯ ವೇಳೆ ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಓಡಾಡಿ ಮನೆ ಮಂದಿಯವರೆಲ್ಲ ಆತಂಕಗೊoಡ ಘಟನೆ...

ರಾಜ್ಯ ಹೆದ್ದಾರಿಯಲ್ಲಿ ಹೊಂಡ–ಗುಂಡಿಗಳ ರಸ್ತೆಗೆ ಜನಾಕ್ರೋಶ: ಹೊಂಡದಲ್ಲಿ ಗಿಡ ನೆಟ್ಟ ಸಾರ್ವಜನಿಕರು!

ಅಂಕೋಲಾ: ಪ್ರಮುಖ ರಾಜ್ಯ ಹೆದ್ದಾರಿಯೊಂದರಲ್ಲಿ ಹೊಂಡ ಗುಂಡಿಗಳಾಗಿ ರಸ್ತೆ ಹದಗೆಟ್ಟು, ಸಂಚಾರ ವ್ಯವಸ್ಥೆಗೆ ತೀವೃ ತೊಂದರೆಯಾಗುತ್ತಿದೆ....

ಭಾಗೀರಥಿ ಹೆಗಡೆ ನಿಧನ: ಗಣ್ಯರ ಸಂತಾಪ

ಹೊನ್ನಾವರ, ಆಗಸ್ಟ್ 28: ಹೊಸಾಕುಳಿ ಗ್ರಾಮದ ಮೂಲದವರಾದ ಹಾಗೂ ಜಲವಳ್ಳಿಯ ಮರಬಳ್ಳಿ ಜಮೀನಿನಲ್ಲಿ ವಾಸವಾಗಿದ್ದ ಶ್ರೀಮತಿ...

ಸರ್ಕಾರಿ ಇಲಾಖೆಯ ಕಟ್ಟಡದ ಇಕ್ಕಟ್ಟಾದ ಗೋಡೆಗಳ ಮಧ್ಯೆ ಪತ್ತೆಯಾದ ಸೂಟ್ ಕೇಸ್ ! ? ಕೊನೆಗೂ ಸೂಟ್ಕೇಸ್ ರಹಸ್ಯ

ಅಂಕೋಲಾ, ಆಗಸ್ಟ್ 26 : ಸರ್ಕಾರಿ ಇಲಾಖೆ ಒಂದರ ಕಟ್ಟಡದ ಗೋಡೆಗಳ ನಡುವಿನ ಇಕ್ಕಟ್ಟಾದ ಸ್ಥಳದಲ್ಲಿ...

ಧರ್ಮಸ್ಥಳದ ವಿರುದ್ಧ ಅಪಪ್ರಚಾರ: ಭಟ್ಕಳದಿಂದ ರಾಜ್ಯಪಾಲರಿಗೆ ಮನವಿ

ಭಟ್ಕಳ, ಆಗಸ್ಟ್ 22: ಹಿಂದೂಗಳ ಶ್ರದ್ಧಾ ಕೇಂದ್ರವಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರವನ್ನು...