Important

Cyber Crime ವಿರುದ್ಧ ಹೋರಾಡಿದ ಶಿರೂರು ಶ್ವಾನ: ಐದು ಕೀಲೋಮೀಟರ್ ಓಡಿ ಪದಕ ಬೇಟೆ

Share

ಅಂಕೋಲಾ: ಕಳೆದ ಜುಲೈ 16 ರಂದು ಅಂಕೋಲಾ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66 ರ ಅಂಚಿನ ಗುಡ್ಡ ಕುಸಿತ ಸಂಭವಿಸಿದ್ದು ಆ ದುರಂತದಲ್ಲಿ ಒಟ್ಟೂ 11 ಮಂದಿ ಮೃತಪಟ್ಟು ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಹಾನಿಯಾಗಿದ್ದು ಈಗ ಇತಿಹಾಸ. ಇದೇ ವೇಳೆ ಹೆದ್ದಾರಿ ಅಂಚಿಗೆ ಸಣ್ಣ ಟೀ ಸ್ಟಾಲ್ ಮಾದರಿ ಹೊಟೇಲ್ ನಡೆಸುತ್ತಿದ್ದ ಲಕ್ಷ್ಮಣ ನಾಯ್ಕ ಕುಟುಂಬ , ತಾವು ವಾಸವಾಗಿದ್ದ ಕಟ್ಟಡ ಸಮೇತ ಜಲ ಸಮಾಧಿಯಾಗಿದ್ದರು.

ಆದರೆ ಅವರ ಮನೆ ಮತ್ತು ಹೊಟೇಲ್ ಬಳಿ ಉಳಿಯುತ್ತಿತ್ತು ಎನ್ನಲಾದ ಕೆಲ ನಾಯಿಗಳ ಪೈಕಿ , ಒಂದು ನಾಯಿ ಮಾತ್ರ ಗುಡ್ಡ ಕುಸಿತ ದುರಂತದ ವೇಳೆ ಅದೇಗೋ ಬದುಕುಳಿದು , ದಿನಾಲು ತನಗೆ ಅನ್ನ ಹಾಕುತ್ತಿದ್ದವರನ್ನು ಕಳೆದುಕೊಂಡು ರೋಧಿಸುತ್ತಿತ್ತು. ಅನಾಥ ವಾಗಿದ್ದ ಈ ಮೂಕ ಪ್ರಾಣಿಯ ರೋದನ ಕಂಡು ಮರುಗಿದ್ದ ಎಸ್ಪಿ ಎಂ ನಾರಾಯಣ , ಬಳಿಕ ಅದನ್ನು ದತ್ತು ಸ್ಟೀಕರಿಸಿದವರಂತೆ ತಮ್ಮ ಮನೆಗೆ ಕರೆದೊಯ್ದು , ಪ್ರಥ್ವಿ ಎಂಬ ಮರು ನಾಮಕರಣದೊಂದಿಗೆ ಅತ್ಯಂತ ಪ್ರೀತಿಯಿಂದ ಸಾಕಿ ಸಲುಹಿದ್ದರು.ಅಷ್ಟೇ ಅಲ್ಲದೇ ಆ ನಾಯಿಗೆ ವಿಶೇಷ ತರಬೇತಿ,ಆಹಾರ ,ಮತ್ತಿತರ ಪೂರಕ ವ್ಯವಸ್ಥೆಗಳು ಸಿಗುವಂತೆ ಏರ್ಪಾಟು ಮಾಡಿದ್ದರು.

ಇದೀಗ ಅದೇ ನಾಯಿ , ಮಾದಕ ದ್ರವ್ಯ ಹಾಗೂ ಸೈಬರ್ ಅಪರಾಧ ಮುಕ್ತ ಕರ್ನಾಟಕ ಎಂಬ ಘೋಷವಾಕ್ಯದೊಂದಿಗೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಕರ್ನಾಟಕ ಪೊಲೀಸ್ ಓಟ 2025 ರ 5K ಮ್ಯಾರಥಾನ್ ನಲ್ಲಿ ಪಾಲ್ಗೊಂಡು ನಿಗದಿತ ಗುರಿ ತಲುಪುವ ಮೂಲಕ ಎಲ್ಲರ ಗಮನ ಸೆಳೆದಿದೆ. ಜಿಲ್ಲಾಧಿಕಾರಿ ಕೆ ಲಕ್ಷ್ಮೀ ಪ್ರಿಯಾ,ಶಾಸಕ ಸತೀಶ್ ಸೈಲ್ ,ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ,ರಾಜ್ಯ ಹೊರ ರಾಜ್ಯದಿಂದ ಬಂದಿದ್ದ ಕೆಲ ತಾರೆ ಗಳು ಮತ್ತಿತರ ಸೆಲೆಬ್ರಿಟಿಗಳು ಮತ್ತು ಸಾವಿರಕ್ಕೂ ಹೆಚ್ಚು ಸಾರ್ವಜನಿಕ ಮತ್ತಿತರ ಒಟಗಾರರೊಂದಿಗೆ ಹೆಜ್ಜೆ ಹಾಕಿ ದೂರದ ಒಟ ಪೂರೈಸಿದ ಈ ಶ್ವಾನಕ್ಕೆ ಬೆಳ್ಳಿ ಪದಕ ಹಾಕಿ ಶಾಸಕರು ಗೌರವಿಸುವ ಮೂಲಕ ಈ ನಾಯಿ ಒಟ್ಟಾರೆ ಕಾರ್ಯಕ್ರಮದಲ್ಲಿ ಸಖತ್ ವೈರಲ್ ಆಗುವಂತಾಗಿತ್ತು.

ಎಲ್ಲೋ ಹೆದ್ದಾರಿ ಬದಿ ದಿನಾಲೂ ಕೂಳು ಹಾಕುತ್ತಿದ್ದ ಮೂಲ ಮಾಲಕರಿಲ್ಲದೇ ಅತಂತ್ರ ಜೀವನ ಸಾಗಿಸ ಬೇಕಿದ್ದ ನಾಯಿ , ಎಸ್ಪಿ ಎಂ ನಾರಾಯಣ ಅವರ ಪ್ರಾಣಿ ದಯೆಯ ಮೂಲಕ ಇಂದು ದೇಶ ವಿದೇಶಗಳಲ್ಲೂ ಹೆಸರಾಗುವಷ್ಟರ ಮಟ್ಟಿಗೆ ಬೆಳೆದು ನಿಂತಿರುವುದು , ಒಂದರ್ಥದಲ್ಲಿ ನಾಯಿಗೆ ಶಿರೂರು ಗುಡ್ಡ ಕುಸಿತದಲ್ಲಿ ಮಾಲಕರನ್ನು ಕಳೆದು ಕೊಂಡ ದುರದೃಷ್ಟ ಎಂದೆನಿಸಿದರೂ, ಇನ್ನೊಂದರ್ಥದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠರನ್ನೇ ಮಾಲಕರನ್ನಾಗಿಸಿಕೊಂಡ ಸೌಭಾಗ್ಯ ಒದಗಿ ಬಂದoತಿದೆ.

ಈ ಮೂಲಕ ತನ್ನ ಜನಪರ ಮತ್ತು ಉತ್ತಮ ಆಡಳಿತದ ಮೂಲಕ ಹೆಸರಾಗಿರುವ ಎಸ್ಪಿ ಎಂ ನಾರಾಯಣ , ತಮ್ಮ ಪ್ರಾಣಿದಯೆ ಮತ್ತು ಪ್ರೀತಿಯ ಮೂಲಕವೂ ಮತ್ತೊಮ್ಮೆ ಹಲವರ ಮನಗೆದ್ದಿದ್ದಾರೆ. ಪುರಾಣ ಕಥೆಗಳಲ್ಲಿಯೂ ನಾರಾಯಣ ಹಾಗೂ ನಾಯಿ ಸಂಬAಧದ ಬಗ್ಗೆ ಉಲ್ಲೇಖವಿದ್ದು , ನೀವು ಸಹ ಪ್ರಾಣಿ ದಯೆ ಉಳ್ಳವರಾಗಿದ್ದರೆ ಮತ್ತು ಎಸ್ಪಿ ಅವರ ಪ್ರಾಣಿ ದಯೆ ಬಗ್ಗೆ ಸಂತಸ ಗೊಂಡಿದ್ದರೆ ತಪ್ಪದೇ ಒಂದು ಮೆಚ್ಚುಗೆ ಸೂಚಿಸಿ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Share

📢 Stay Updated!

Join our official WhatsApp group to get instant news updates, alerts, and exclusive stories – right on your phone.

💬 Join our WhatsApp Group

Don't Miss

ವಿಶ್ವಾಸದ ಮತ್ತೊಂದು ಹೆಸರೇ ಅಲಂಕಾರ ಜ್ಯುವೆಲರ್ಸ್: ಅಂಕೋಲಾದಲ್ಲಿ ಭವ್ಯ ಶುಭಾರಂಭ

ಅಂಕೋಲಾ, ಆಗಸ್ಟ್ 24: ಪಟ್ಟಣದ ಬಂಡಿಬಜಾರ ಮುಖ್ಯ ರಸ್ತೆಯಂಚಿಗೆ ನವೀಕೃತಗೊಂಡಿರುವ ಭವ್ಯವಾದ ಕಟ್ಟಡದಲ್ಲಿ ಅಲಂಕಾರ ಜ್ಯುವೆಲರ್ಸ್ ನ ಬೃಹತ್ತ ಮಳಿಗೆ ಅಗಸ್ಟ್ 24 ರ ರವಿವಾರ ಶುಭ ಮುಹೂರ್ತದಲ್ಲಿ ಗ್ರಾಹಕರ ಸೇವೆಗೆ...

ಭಟ್ಕಳದಲ್ಲಿ ಬೆಂಕಿ ಅನಾಹುತ

ಭಟ್ಕಳ: ತಾಲೂಕಿನ ಜಾಲಿ ಕ್ರಾಸ್‌ ಬಳಿಭೀಕರ ಬೆಂಕಿ ಅವಘಡ ಸಂಭವಿಸಿ, ಇಪ್ತಿಕಾರ್ ಮೋಹಿದೀನ್ ಮಾಲಕತ್ವದ “ತಾಸಿನ್ ಫ್ರೂಟ್ಸ್ & ವೆಜಿಟೇಬಲ್ಸ್” ಹೋಲ್‌ಸೇಲ್ ಅಂಗಡಿ ಭಸ್ಮವಾದ ಘಟನೆ ನಡೆದಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ...

📰 ನಿಮ್ಮ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರಿನ ಸಭೆ, ಸಮಾರಂಭ, ಪ್ರತಿಭಟನೆ ಮತ್ತು ವಿಶೇಷ ವರದಿಗಳನ್ನು ನಮಗೆ ಕಳುಹಿಸಿ.

✉️ Gmail: [email protected]

📲 WhatsApp ಮೂಲಕ ಕಳುಹಿಸಿ ✉️ Gmail ಮೂಲಕ ಕಳುಹಿಸಿ

ಗುಡಿಗಾರಗಲ್ಲಿ ಗಣಪತಿಗೆ ಬೆಳ್ಳಿಯ ಕಿರೀಟ ಸಮರ್ಪಣೆ: ಭಕ್ತರ ಭಾವಪೂರ್ಣ ಕಾಣಿಕೆ

ಕುಮಟಾ, ಆಗಸ್ಟ್ 27: 50ನೇ ವರ್ಷದತ್ತ ಪಯಣಿಸುತ್ತಿರುವ ಗುಡಿಗಾರಗಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿ, ತನ್ನ ಅಜರಾಮರ ಪರಂಪರೆಯನ್ನು ಮತ್ತಷ್ಟು ಭವ್ಯಗೊಳಿಸುವ ಕಾರ್ಯಕ್ಕೆ ಮುಂದಾಗಿದೆ. ಸಮಿತಿಯ ಪೂಜೆಗೆ ಒಳಪಡುವ ಮಹಾಗಣಪತಿಗೆ ಭಕ್ತರು ಸಮೂಹ...

ಸರ್ಕಾರಿ ಇಲಾಖೆಯ ಕಟ್ಟಡದ ಇಕ್ಕಟ್ಟಾದ ಗೋಡೆಗಳ ಮಧ್ಯೆ ಪತ್ತೆಯಾದ ಸೂಟ್ ಕೇಸ್ ! ? ಕೊನೆಗೂ ಸೂಟ್ಕೇಸ್ ರಹಸ್ಯ

ಅಂಕೋಲಾ, ಆಗಸ್ಟ್ 26 : ಸರ್ಕಾರಿ ಇಲಾಖೆ ಒಂದರ ಕಟ್ಟಡದ ಗೋಡೆಗಳ ನಡುವಿನ ಇಕ್ಕಟ್ಟಾದ ಸ್ಥಳದಲ್ಲಿ ಯಾರೋ ತಂದಿಟ್ಟು ಹೋಗಿದ್ದರೆನ್ನಲಾದ ಸೂಟ್ ಕೇಸ್ ಒಂದು ಪಟ್ಟಣ ವ್ಯಾಪ್ತಿಯಲ್ಲಿ ಕೆಲಕಾಲ ಆತಂಕ ಸೃಷ್ಟಿಸಿದ್ದಲ್ಲದೇ,ಸೂಟ್ಕೇಸ್...

ಗಣಪತಿಗೆ ಜೀವ ಕಳೆ ತುಂಬುವ ಗಂಗಾವಳಿಯ ಶರತ್ ನಾಯ್ಕ್

ಕುಮಟಾ, ಆಗಸ್ಟ್ 26: ಪ್ರತಿಭೆ ಯಾರ ಸೊತ್ತಲ್ಲ. ಅದು ಸಾಧಕನ ಸ್ವತ್ತು ಎನ್ನುವ ಮಾತಿಗೆ ಅನುಗುಣವಾಗಿ ಇರುವವರು ಕುಮಟಾ ತಾಲೂಕಿನ ಗಂಗಾವಳಿಯ ಹೆಮ್ಮೆಯ ಪ್ರತಿಭೆ ಶರತ್ ನಾಯ್ಕ್ ಅವರು ಈಗಾಗಲೇ ಬೃಹತ್...

ವಿಶ್ವಾಸದ ಮತ್ತೊಂದು ಹೆಸರೇ ಅಲಂಕಾರ ಜ್ಯುವೆಲರ್ಸ್: ಅಂಕೋಲಾದಲ್ಲಿ ಭವ್ಯ ಶುಭಾರಂಭ

ಅಂಕೋಲಾ, ಆಗಸ್ಟ್ 24: ಪಟ್ಟಣದ ಬಂಡಿಬಜಾರ ಮುಖ್ಯ ರಸ್ತೆಯಂಚಿಗೆ ನವೀಕೃತಗೊಂಡಿರುವ ಭವ್ಯವಾದ ಕಟ್ಟಡದಲ್ಲಿ ಅಲಂಕಾರ ಜ್ಯುವೆಲರ್ಸ್ ನ ಬೃಹತ್ತ ಮಳಿಗೆ ಅಗಸ್ಟ್ 24 ರ ರವಿವಾರ ಶುಭ ಮುಹೂರ್ತದಲ್ಲಿ ಗ್ರಾಹಕರ ಸೇವೆಗೆ...

🌐 📺 Visit Our Media Partner Site

ಉತ್ತರಕನ್ನಡ ಸುದ್ದಿ Update ಪಡೆಯಿರಿ

🔗 Go to Vismaya TV
Current date Wednesday , 27 August 2025
Related Articles

ಗುಡಿಗಾರಗಲ್ಲಿ ಗಣಪತಿಗೆ ಬೆಳ್ಳಿಯ ಕಿರೀಟ ಸಮರ್ಪಣೆ: ಭಕ್ತರ ಭಾವಪೂರ್ಣ ಕಾಣಿಕೆ

ಕುಮಟಾ, ಆಗಸ್ಟ್ 27: 50ನೇ ವರ್ಷದತ್ತ ಪಯಣಿಸುತ್ತಿರುವ ಗುಡಿಗಾರಗಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿ, ತನ್ನ ಅಜರಾಮರ...

ಗಣಪತಿಗೆ ಜೀವ ಕಳೆ ತುಂಬುವ ಗಂಗಾವಳಿಯ ಶರತ್ ನಾಯ್ಕ್

ಕುಮಟಾ, ಆಗಸ್ಟ್ 26: ಪ್ರತಿಭೆ ಯಾರ ಸೊತ್ತಲ್ಲ. ಅದು ಸಾಧಕನ ಸ್ವತ್ತು ಎನ್ನುವ ಮಾತಿಗೆ ಅನುಗುಣವಾಗಿ...

ವಿಶ್ವಾಸದ ಮತ್ತೊಂದು ಹೆಸರೇ ಅಲಂಕಾರ ಜ್ಯುವೆಲರ್ಸ್: ಅಂಕೋಲಾದಲ್ಲಿ ಭವ್ಯ ಶುಭಾರಂಭ

ಅಂಕೋಲಾ, ಆಗಸ್ಟ್ 24: ಪಟ್ಟಣದ ಬಂಡಿಬಜಾರ ಮುಖ್ಯ ರಸ್ತೆಯಂಚಿಗೆ ನವೀಕೃತಗೊಂಡಿರುವ ಭವ್ಯವಾದ ಕಟ್ಟಡದಲ್ಲಿ ಅಲಂಕಾರ ಜ್ಯುವೆಲರ್ಸ್...

ಭಟ್ಕಳದಲ್ಲಿ ಬೆಂಕಿ ಅನಾಹುತ

ಭಟ್ಕಳ: ತಾಲೂಕಿನ ಜಾಲಿ ಕ್ರಾಸ್‌ ಬಳಿಭೀಕರ ಬೆಂಕಿ ಅವಘಡ ಸಂಭವಿಸಿ, ಇಪ್ತಿಕಾರ್ ಮೋಹಿದೀನ್ ಮಾಲಕತ್ವದ “ತಾಸಿನ್...