ಕುಮಟಾ: ಯುವಜನತೆಯು ದೇಶದ ಆಸ್ತಿ. ದುಶ್ಚಟದಿಂದ ದೂರವಿದ್ದರೆ ವಿದ್ಯಾರ್ಥಿಗಳ ಭವಿಷ್ಯ ಉಜ್ವಲ ವಾಗುತ್ತದೆ ಎಂದು ಉದ್ಯಮಿಗಳು ಮತ್ತು ಹೊಲನಗದ್ದೆ ಗ್ರಾಮ ಪಂಚಾಯತ್ ಅಧ್ಯಕ್ಷ ಎಂ. ಎಂ. ಹೆಗಡೆ ಹೇಳಿದರು. ಅವರು ಡಾ ಎ. ವಿ. ಬಾಳಿಗಾ ಪದವಿಪೂರ್ವ ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಪರಿಷತ್ ಉದ್ಘಾಟಿಸಿ, ಮಾತನಾಡಿದರು.
ಜಗತ್ತು ಸ್ಪರ್ಧಾತ್ಮಕ ಯುಗದಲ್ಲಿದೆ. ವಿದ್ಯರ್ಥಿಗಳು ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಾಗ ಯಶಸನ್ನು ಹೊಂದಲು ಸಾಧ್ಯ. ಕಠಿಣ ಪರಿಶ್ರಮ ದಿಂದ ಮಾತ್ರ ಬೆಳವಣಿಗೆ ಹೊಂದಲು ಸಾಧ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗಕ್ಕು ಹೆಚ್ಚು ಲಕ್ಷಕೊಡಬೇಕು. ವಾಣಿಜ್ಯ ವಿಷಯದಲ್ಲಿ ಹೆಚ್ಚಿನ ಉದ್ಯೋಗ ಅವಕಾಶ ಗಳಿವೆ, ಚಾರ್ಟೆಡ್ ಅಕೌಂಟ್, ಕೈಗಾರಿಕೊಧ್ಯಮಿ ಯಾಗಿ ಯು ಹೊರಹೋಮ್ಮಲು ಉಜ್ವಲ ಅವಕಾಶ ಗಳಿವೆ ಎಂದರು. ಇದೇ ವೇಳೆ, ವಿದ್ಯಾರ್ಥಿ ಪರಿಷತ್ ಚಟುವಟಿಕೆ ಗಾಗಿ 10 ಸಾವಿರ ದೇಣಿಗೆ ನೀಡುವುದಾಗಿ ತಿಳಿಸಿದರು.
ಕೆನರಾ ಕಾಲೇಜು ಸೊಸೈಟಿ ಕಾರ್ಯಧ್ಯಕ್ಷ ರಾದ ಹನುಮಂತ ಶಾನಭಾಗ ಮಾತನಾಡಿ ಎಂ. ಎಂ. ಹೆಗಡೆ ಯವರು ಬಾಳಿಗಾ ಕಾಲೇಜು ಸ್ಥಾಪಕರಲ್ಲಿ ಒಬ್ಬರಾದ ದಿ. ಎನ್. ಟಿ. ಹೆಗಡೆ ಕುಟುಂಬದವರು ಎನ್ನುವದು ಸಂತಸದ ವಿಷಯ. ವಿದ್ಯಾರ್ಥಿಗಳು ಹೆಚ್ಚು ಅಂಕದೊoದಿಗೆ ಕಾಲೇಜಿಗೆ ಕೀರ್ತಿ ತರುವಂತ್ವರಾಗಿ ಎಂದು ಶುಭ ಹಾರೈಕೆ ಮಾಡಿದರು.
ಈ ಸಂದರ್ಭದಲ್ಲಿ ಪಿ. ಯು. ಸಿ. ದ್ವಿತೀಯ ವಾರ್ಷಿಕ ಪರೀಕ್ಷೆ ಯಲ್ಲಿ ಕಾಲೇಜಿಗೆ ಗರಿಷ್ಠ ಅಂಕ ಗಳಿಸಿ ಕಾಲೇಜಿಗೆ ಕೀರ್ತಿ ತಂದ ನವ್ಯ ಹೆಬ್ಬಾರ ಹಾಗೂ ಅನನ್ಯ ಭಟ್ಟ ಅವರನ್ನು ಎಂ. ಎಂ. ಹೆಗಡೆ ಅವರು ಶಾಲು ಹೋದೆಸಿ ಸನ್ಮಾನ ಮಾಡಿದರು. ಅದೇ ರೀತಿ ಡಿಸ್ಟಿಂಗಷನ್ ಪಡೆದ 15 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಿ ಸತ್ಕಾರಿಸಲಾಯಿತು. ಈ ಸಂದರ್ಭದಲ್ಲಿ ಹನುಮಂತ ಶಾನಭಾಗ್ ಅವರು ಎಂ. ಎಂ. ಹೆಗಡೆ ಅವರಿಗೆ ಶಾಲು ಹೋದೆಸಿ ಸನ್ಮಾನ ಮಾಡಿದರು. ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರೊ. ಹೇಮಾ ಪೈ ಸಂವಿಧಾನಾತ್ಮ ವಾಗಿ ಪ್ರಮಾಣ ವಚನ ಬೋಧಿಸಿದರು.
ವಿಸ್ಮಯ ನ್ಯೂಸ್, ಕುಮಟಾ













