Big News

ಕುಮಟಾದಲ್ಲಿ ಕೊಂಕಣಿ ಮಾನ್ಯತಾ ದಿವಸ್ ಆಚರಣೆ

Share

ಕುಮಟಾ: ದಿನಾಂಕ 20-08-2025 ರಂದು ರೋಟರಿ ಹಾಲ್ ಕುಮಟಾ ದಲ್ಲಿ ಕೊಂಕಣಿ ಮಾನ್ಯತಾ ದಿವಸ್ ಆಚರಣೆ ಮಾಡಲಾಯಿತು. ಕಾರ್ಯಕ್ರಮವನ್ನು ವೀಣಾ ಕಾಮತ್ ಪ್ರಾಚಾರ್ಯರು. ಡಾ. ಎ. ವಿ. ಬಾಳಿಗ ಕಲಾ ಮತ್ತು ವಿಜ್ಞಾನ ಪದವಿ ಪೂರ್ವ ಕಾಲೇಜು ಕುಮಟಾರವರು ಉದ್ಘಾಟಿಸಿದರು.

ಕೇಂದ್ರ ಸರ್ಕಾರವು ಕೊಂಕಣಿ ಭಾಷೆಗೆ 1992 ಆಗಸ್ಟ್ 20 ರಂದು ಮಾನ್ಯತೆ ನೀಡಿರುತ್ತದೆ. ಕೊಂಕಣಿ ಮಾತನಾಡುವ ಮಾತೃಭಾಷೆ ಹೊಂದಿರುವ ಕುಮಟಾ ತಾಲೂಕಿನ ಎಲ್ಲಾ ಸಮುದಾಯದವರು ಒಗ್ಗಟ್ಟಾಗಿ ಕೊಂಕಣಿ ಭಾಷೆ ಅಭಿವೃದ್ಧಿಪಡಿಸಬಕು. ತಾಯಿ ಭಾಷೆಯನ್ನು ಜೀವನದಲ್ಲಿ ಎಂದು ಮರೆಯಬಾರದು. ಇಂದಿನ ವಿದ್ಯಾರ್ಥಿಗಳು ಕೊಂಕಣಿ ಭಾಷೆ ಕಲಿಯಲು, ಮಾತನಾಡಲು ಹಿಂಜರಿಯುತ್ತಿದ್ದಾರೆ ಎಂದರು. ಮುಖ್ಯ ಅಥಿತಿಗಳಾಗಿ ಶ್ರೀ ಕೃಷ್ಣ ಕಾಮ್ಕರ್ ತಹಶೀಲ್ದಾರ್ ಕುಮಟಾ ರವರು ಮಾತನಾಡಿ ಕೊಂಕಣಿ ಮಾತನಾಡುವವರು ಪರಸ್ಪರ ಕೊಂಕಣಿ ಭಾಷೆಯಲ್ಲಿಯೇ ಮಾತನಾಡಿಕೊಳ್ಳಬೇಕು. ಮಾತೃಭಾಷೆಯಲ್ಲಿ ಮಾತನಾಡಿಕೊಂಡರೆ ಸಂವಹನವು ಉತ್ತಮವಾಗುತ್ತದೆ, ಸ್ಪಷ್ಟವಾಗಿ ಅರ್ಥವಾಗುತ್ತದೆ ಎಂದರು.

ಮುಖ್ಯ ಅತಿಥಿ ಮುರುಳಿಧರ ಪ್ರಭುರವರು ಮಾತನಾಡಿ ಕೊಂಕಣಿ ಭಾಷೆ ಮಾತನಾಡುವ ನಾವು ನಮ್ಮ ಭಾಷೆಯ ಬಗ್ಗೆ ಎಂದಿಗೂ ಸ್ವಾಭಿಮಾನದಿಂದ ಇರಬೇಕು. ಇಂಗ್ಲಿಷ್, ಹಿಂದಿ,ಕನ್ನಡ. ಭಾಷೆಯ ಜೊತೆಗೆ ಕೊಂಕಣಿಯನ್ನು ಅಭಿವೃದ್ಧಿ ಪಡಿಸಬೇಕು. ಅನೇಕ ಕೊಂಕಣಿ ಸಾಹಿತಿಗಳು ಕೊಂಕಣಿ ಭಾಷೆಯ ಬಗ್ಗೆ ಹೋರಾಟ ಮಾಡಿದ್ದಾರೆ. ಖ್ಯಾತ ಕವಿ ಗೋವಿಂದ ಪೈರವರು ಕೊಂಕಣಿ ಭಾಷಗೆ ನೀಡಿದ ಕೊಡುಗೆ ತಿಳಿಸಿದರು.ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಎಸ್ ಜಿ ನಾಯ್ಕ್ , ಕುಮಟಾ ರವರು ಇಂದಿನ ಮಕ್ಕಳಿಗೆ ಕೊಂಕಣಿ ಭಾಷೆಯ ಸಂಖ್ಯೆಗಳನ್ನು ಕಲಿಸಬೇಕೆಂದರು ಕುಮಟಾ ಕೊಂಕಣಿ ಪರಿಷತ್ ನಡೆದು ಬಂದ ಬಗೆ ತಿಳಿಸಿದರು.

ಮಹಾಲಕ್ಷ್ಮಿ ಶಾನ್ಭಾಗ್ ಪ್ರಾರ್ಥಿಸಿದರು. ಶ್ರೀಕಾಂತ್ ರಘುನಾಥ್ ಕಾಮತ್ ಕಾಮತ್ ಬುಕ್ ಸ್ಟಾಲ್. ಕುಮಟಾ ಇವರ ನಿಶ್ವಾರ್ಥ ಸೇವೆಗಾಗಿ ಅವರನ್ನು ಹಾಗು.ಡಾ. ವನಮಾಲಾ ದಯಾನಂದ ಶಾನಭಾಗ್, ನಿವೃತ್ತ ವೈದ್ಯಾಧಿಕಾರಿ. ತಾಲೂಕ ಆಸ್ಪತ್ರೆ ಕುಮಟಾ,ರವರನ್ನು ಸನ್ಮಾನಿಸಲಾಯಿತು. ವನಿತಾ ಸಿರೀಶ್ ನಾಯಕ ರವರ ರಚನೆಯ, “.ಮದುವೆಯ ಲಾಡು “. ನಾಟಕ ಪ್ರದರ್ಶಿಸಲಾಯಿತು. ಕೊಂಕಣಿ ಪರಿಷತ್ ಅಧ್ಯಕ್ಷರಾದ ಅರುಣ ಉಭಯಕರ್ ಉಪಸ್ಥಿತರಿದ್ದರು. ನಯನ ಪ್ರಭು ನೇತ್ರತ್ವದ ನಾಧಶ್ರೀ ಕಲಾ ಕೇಂದ್ರದ,ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು, ನಿರ್ಮಲ ಪ್ರಭು ಕಾರ್ಯದರ್ಶಿಗಳು ಸ್ವಾಗತಿಸಿದರು. ಅರುಣ ಮಣಕಿಕರ್ ನಿರೂಪಿಸಿದರು. ಆನಂದ್ ನಾಯ್ಕ್ ವಂದಿಸಿದರು, ಎಂ ಕೆ ಶಾನ್ಭಾಗ್, ದೀಪಾ ಕಾಮತ್, ಶ್ರದ್ಧಾ ಭಟ್, ಇತರರು ಇದ್ದರು. ಸ್ಪರ್ಧೆ ಯಲ್ಲಿ ವಿಜೇತ ರದವರಿಗೆ ಬಹುಮಾನ ನೀಡಲಾಯಿತು.

Share

📢 Stay Updated!

Join our official WhatsApp group to get instant news updates, alerts, and exclusive stories – right on your phone.

💬 Join our WhatsApp Group

Don't Miss

ಜೂನ್ 14 ರಂದು ಚುಟುಕು ಸಾಹಿತ್ಯ ಸಮ್ಮೇಳನ

ಕುಮಟಾ: ಉತ್ತರ ಕನ್ನಡ ಜಿಲ್ಲಾಮಟ್ಟದ 9 ನೇ ಹಾಗೂ ಕುಮಟಾ ತಾಲೂಕಾ 5ನೇ ಚುಟುಕು ಸಾಹಿತ್ಯ ಸಮ್ಮೇಳನವು ಇದೇ ಜೂನ್ 14 ರ ಭಾನುವಾರದಂದು ಕುಮಟಾದ ಲಕ್ಷ್ಮೀಬಾಯಿ ಬುರ್ಡೇಕರ್ ಸಭಾಂಗಣದಲ್ಲಿ ನಡೆಯಲಿದೆ....

ಪ್ರಸಿದ್ಧ ಕಣ್ಣಿನ ಆಸ್ಪತ್ರೆಯಲ್ಲಿ ಉದ್ಯೋಗಾವಕಾಶ: Job Alert

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಕಣ್ಣಿನ ಆಸ್ಪತ್ರೆಗಳಲ್ಲಿ ಒಂದಾದ ಹೆಗಡೆ ಐ ಫೌಂಡೇಷನ್ / ಹೆಗಡೆ ಆಪ್ಟಿಕಲ್ಸ್, ಭಟ್ಕಳ ಹಾಗೂ ಹೊನ್ನಾವರದಲ್ಲಿ ಸುಸಜ್ಜಿತ ಆಸ್ಪತ್ರೆಗಳನ್ನು ಹೊಂದಿದ್ದು, ಇದೀಗ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಲು...

🌐 📺 Visit Our Media Partner Site

ಉತ್ತರಕನ್ನಡ ಸುದ್ದಿ Update ಪಡೆಯಿರಿ

🔗 Go to Vismaya TV
Related Articles

ಸ್ವಾತಂತ್ರ‍್ಯೋತ್ಸವದ ಸಂಭ್ರಮಕ್ಕೆ ತರಂಗ ಎಲೆಕ್ಟ್ರಾನಿಕ್ಸ್ ನಲ್ಲಿ ಭರ್ಜರಿ ಆಫರ್; ಶೇ.70ರಷ್ಟು ರಿಯಾಯಿತಿ

ಕುಮಟಾ: ಸ್ವಾತಂತ್ರ‍್ಯೋತ್ಸವದ ಅಂಗವಾಗಿ ತರಂಗ ಎಲೆಕ್ಟ್ರಾನಿಕ್ಸ್ ಆಂಡ್ ಫರ್ನಿಚರ್ ಗ್ರಾಹಕರಿಗಾಗಿ ವಿಶೇಷ ‘ಫ್ರೀಡಂ ಫೆಸ್ಟಿವಲ್’ ಆಫರ್...

ಜೂನ್ 14 ರಂದು ಚುಟುಕು ಸಾಹಿತ್ಯ ಸಮ್ಮೇಳನ

ಕುಮಟಾ: ಉತ್ತರ ಕನ್ನಡ ಜಿಲ್ಲಾಮಟ್ಟದ 9 ನೇ ಹಾಗೂ ಕುಮಟಾ ತಾಲೂಕಾ 5ನೇ ಚುಟುಕು ಸಾಹಿತ್ಯ...

ಜಾನುವಾರು ರಕ್ಷಣೆ: ಗೋ ಶಾಲೆಗೆ ರವಾನಿಸುವ ಮೂಲಕ ಗೀರ್ ಹೋರಿಗಳಿಗೆ ಜೀವದಾನ

ಅಂಕೋಲಾ: ವಧೆ ಉದ್ದೇಶದಿಂದ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ, ಎರಡು ಭಾರೀ ಗಾತ್ರದ ಗೀರ್ ತಳಿಯ ಹೋರಿಗಳಿಗೆ ಕೊನೆಗೂ...

ಮುರಿನಕಟ್ಟೆ ಪ್ರಕರಣ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಕಾಗೇರಿ ಆಗ್ರಹ

ಭಟ್ಕಳ:ಮುರಿನಕಟ್ಟೆ ವಿಚಾರವು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಹಿಂದೂಗಳ ಭಾವನೆಗಳಿಗೆ ಸಂಬAಧಿಸಿದ ವಿಷಯವಾಗಿದ್ದು, ಕೆಲ ಮತಾಂಧ...

ಅಳ್ವೆಕೋಡಿ ಕಪ್ಪೆಚಿಪ್ಪು ದುರಂತ: ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ ಕಾಗೇರಿ

ಭಟ್ಕಳ: ತಾಲೂಕಿನ ಅಳ್ವೆಕೋಡಿಯ ಕಪ್ಪೆಚಿಪ್ಪು ದುರಂತದಲ್ಲಿ ಸಾವನ್ನಪ್ಪಿದ ಕುಟುಂಬದವರನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ...

ಜಿಲ್ಲೆಯ ಆರೋಗ್ಯ ಸೇವೆಗೆ ಐತಿಹಾಸಿಕ ಹೆಜ್ಜೆ : ಶಾಸಕ ಸತೀಶ್ ಸೈಲ್

ಅಂಕೋಲಾ : ಜನರಿಗೆ ಉನ್ನತ ಮಟ್ಟದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಕಾರವಾರದಲ್ಲಿ 100 ಕೋಟಿ...

ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಸಹಾಯಕ ಶಿಕ್ಷಕರು ಬೇಕಾಗಿದ್ದಾರೆ

ಕುಮಟಾ : ಅಂಕೋಲಾದ ಕೆನರಾ ವೆಲ್ಫೇರ್ ಟ್ರಸ್ಟ್ ನ ಕುಮಟಾ ಧಾರೇಶ್ವರದ ದಿನಕರ ಇಂಗ್ಲಿಷ್ ಮೀಡಿಯಂ...

ಅಲಂಕಾರ ಜ್ಯುವೆಲ್ಲರ್ಸ್ : ಅಕ್ಷಯ ತೃತೀಯ ವಿಶೇಷ ಆಫರ್

ಸುವರ್ಣ ಕ್ಷಣವನ್ನು ಇನ್ನಷ್ಟು ವಿಶೇಷವಾಗಿಸಿ : ಈ ಶುಭ ಅಕ್ಷಯ ತೃತೀಯದ ಪ್ರಯುಕ್ತ ಚಿನ್ನ ಮತ್ತು...