ಕುಮಟಾ: ಉತ್ತರ ಕನ್ನಡ ಜಿಲ್ಲಾಮಟ್ಟದ 9 ನೇ ಹಾಗೂ ಕುಮಟಾ ತಾಲೂಕಾ 5ನೇ ಚುಟುಕು ಸಾಹಿತ್ಯ ಸಮ್ಮೇಳನವು ಇದೇ ಜೂನ್ 14 ರ ಭಾನುವಾರದಂದು ಕುಮಟಾದ ಲಕ್ಷ್ಮೀಬಾಯಿ ಬುರ್ಡೇಕರ್ ಸಭಾಂಗಣದಲ್ಲಿ ನಡೆಯಲಿದೆ.
ಪೂರ್ವಭಾವಿ ಸುದ್ದಿಗೋಷ್ಠಿ
ಈ ಕುರಿತು ಕುಮಟಾದ ಖಾಸಗೀ ಹೋಟೆಲ್ ನಲ್ಲಿ ಪೂರ್ವಭಾವಿ ಸುದ್ದಿಗೋಷ್ಠಿ ನಡೆಯಿತು. ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್, ಕುಮಟಾದ ಅಧ್ಯಕ್ಷರಾದ ಗಣಪತಿ ಎಂ. ಅಡಿಗುಂಡಿ ಅಡಿಗುಂಡಿ ಅವರು ಚುಟುಕು ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್, ಕುಮಟಾ ಘಟಕದ 5ನೇ ವರ್ಷದ ಸವಿನೆನಪಿನ ಅಂಗವಾಗಿ, ಜೂನ್ 14 ರ ಭಾನುವಾರದಂದು ಕುಮಟಾದ ಲಕ್ಷ್ಮೀಬಾಯಿ ಬುರ್ಡೇಕರ್ ಸಭಾಂಗಣದಲ್ಲಿ ಉತ್ತರ ಕನ್ನಡ ಜಿಲ್ಲಾ 9ನೇ ಹಾಗೂ ಕುಮಟಾ ತಾಲೂಕು 5ನೇ ಜಂಟಿ ಚುಟುಕು ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ.
ಈ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಖ್ಯಾತ ಶಿಕ್ಷಕ, ಸಾಹಿತಿ, ಕವಿ, ನಿರೂಪಕ ಹಾಗೂ ಸಂಘಟಕರಾದ ಡಾ. ರವೀಂದ್ರ ಭಟ್ಟ ಸೂರಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದರು.
ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್, ಕುಮಟಾದ ಕಾರ್ಯದರ್ಶಿಗಳಾದ ಉದಯ ಮಡಿವಾಳ ಅವರು ಮಾತನಾಡಿ ಸಮ್ಮೇಳನದಲ್ಲಿ ವಿವಿಧ ಸಾಹಿತ್ಯಕ ಗೋಷ್ಠಿಗಳು, ಕೃತಿ ಲೋಕಾರ್ಪಣೆ ಕಾರ್ಯಕ್ರಮಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ಸಾಧಕ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ವಾಲೀಬಾಲ್ ತಂಡದ ಮಾಜಿ ನಾಯಕರಾದ ನಾಗರಾಜ ಹೆಗಡೆ, ರಾಷ್ಟಿçÃಯ ವಾಲೀಬಾಲ್ ಆಟಗಾರರಾದ ಗೌರೀಶ ಶೆಟ್ಟಿ, ಮಹಾಬಲೇಶ್ವರ ಹೆಗಡೆಕರ್, ಯಕ್ಷಗಾನ ಕಲಾವಿದರಾದ ಕೃಷ್ಣ ಯಾಜಿ ಬಳ್ಕೂರು, ಮಾಜೀ ಸೈನಿಕರಾದ ಸಚೀನ್ ನಾಯ್ಕ, ಸಾಹಿತ್ಯ ಕ್ಷೇತ್ರದಲ್ಲಿ ಕರ್ನಾಟಕ ಬುಕ್ ಆಪ್ ರೆಕಾರ್ಡ ಸಾಧನೆ ಮಾಡಿದ ದಿನೇಶ ಅಮ್ಮೀನಳ್ಳಿ, ಶಿಕ್ಷಣ ಕೇತ್ರದ ಸಾಧಕರಾದ ಸಿ.ಪಿ. ಶಿವಚಂದ್ರ ಅವರನ್ನು ಸನ್ಮಾನಿಸಲಾಗುವದು ಎಂದರು,
ಸುದಿಗೋಷ್ಠಿಯಲ್ಲಿ ಮಾಜೀ ಸೈನಿಕರಾದ ಪ್ರಕಾಶ ಮಡಿವಾಳ, ದೇವಿದಾಸ ಮಡಿವಾಳ. ಅನಿಲ್ ನಾಯ್ಕ, ನವೀನ್ ನಾಯ್ಕ, ರಾಮಚಂದ್ರ ಮಡಿವಾಳ, ರಾಘವೇಂದ್ರ ಶೆಟ್ಟಿ ಮುಂತಾದವರಿದ್ದರು.
ವಿಸ್ಮಯ ನ್ಯೂಸ್ ದೀಪೇಶ ನಾಯ್ಕ ಕುಮಟಾ












